ಕೋಲಾರ ಕಾಂಗ್ರೆಸ್ ನಾಯಕರಲ್ಲಿನ ವೈಮನಸ್ಯ ಬಗೆಹರಿಯಲಿದೆ. ನನ್ನನ್ನು ಅಭ್ಯರ್ಥಿ ಮಾಡಿರುವುದಕ್ಕೆ ಯಾರ ವಿರೋಧವೂ ಇಲ್ಲ. ಎಲ್ಲರ ವಿಶ್ವಾಸದೊಂದಿಗೆ ಪ್ರಚಾರ ನಡೆಸುತ್ತೇನೆ..
–ಕೆ.ವಿ.ಗೌತಮ್, ಕೋಲಾರ ಕಾಂಗ್ರೆಸ್ ಅಭ್ಯರ್ಥಿ
ಹೈಕಮಾಂಡ್ ನಿರ್ಧಾರ ಸ್ವಾಗತಿಸುತ್ತೇನೆ. ಸ್ವಪ್ರತಿಷ್ಠೆ ಬೇಸರ ನನಗಿಲ್ಲ. 30 ವರ್ಷಗಳಲ್ಲಿ ಈ ರೀತಿ ವಿದ್ಯಮಾನ ನನಗೆ ಹೊಸದೇನಲ್ಲ. ಕಾಂಗ್ರೆಸ್ ಪಕ್ಷವನ್ನು ಎಲ್ಲಾ ಕಡೆ ಗೆಲ್ಲಿಸಲು ಶ್ರಮಿಸುತ್ತೇನೆ
–ಕೆ.ಎಚ್.ಮುನಿಯಪ್ಪ, ಆಹಾರ ಸಚಿವ
ಬಲಗೈ ಸಮುದಾಯಕ್ಕೆ ಟಿಕೆಟ್ ಬೇಕೆಂದು ರಾಜೀನಾಮೆಗೆ ಮುಂದಾದೆವು. ಎಡಗೈ ಸಮುದಾಯಕ್ಕೆ ಸಿಕ್ಕಿದೆ. ಸಂಧಾನ ಸಭೆಯಲ್ಲಿ ನಡೆದ ಮಾತುಕತೆಯಂತೆ ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತೇವೆ