ರೈಲ್ವೆ ವಿಭಾಗ ಕಚೇರಿ ಕಥೆ ಏನಾಗಿದೆ?
ಕಲಬುರಗಿ ರೈಲ್ವೆ ವಿಭಾಗವನ್ನು ರಚಿಸುವ ಯೋಜನೆಯನ್ನು ರೈಲ್ವೆ ಸಚಿವಾಲಯವು ಆರ್ಥಿಕ ಪರಿಣಾಮಗಳ ದೃಷ್ಟಿಯಿಂದ ಕೈ ಬಿಟ್ಟಿದ್ದಾಗಿ ಸಚಿವ ಎಂ.ಬಿ. ಪಾಟೀಲ ಅವರೇ ಪರಿಷತ್ತಿನಲ್ಲಿ ಸ್ಪಷ್ಟಪಡಿಸಿದ್ದಾರೆ. 2013–14ನೇ ಸಾಲಿನ ಕೇಂದ್ರ ರೈಲ್ವೆ ಮುಂಗಡ ಪತ್ರದಲ್ಲಿ ಕಲಬುರಗಿ ರೈಲ್ವೆ ವಿಭಾಗವನ್ನು ರಚಿಸಿ ಘೋಷಿಸಲಾಗಿತ್ತು. ಅದರ ಅನುಸಾರ ರಾಜ್ಯ ಸರ್ಕಾರವು 37 ಎಕರೆ ಭೂಮಿಯನ್ನು ರೈಲ್ವೆ ಇಲಾಖೆಗೆ ಹಸ್ತಾಂತರಿಸಿತ್ತು. ಆ ನಂತರದಲ್ಲಿ ಯೋಜನೆ ಜಾರಿಯಾಗಲಿಲ್ಲ. ಆರ್ಥಿಕ ಪರಿಣಾಮಗಳ ದೃಷ್ಟಿಯಿಂದ ಯೋಜನೆಯನ್ನು ಕೈಬಿಡಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿತ್ತು. ರೈಲ್ವೆ ಇಲಾಖೆಯು ಈ ಯೋಜನೆಯ ವಿಸ್ತೃತ ವರದಿಯನ್ನು ರಾಜ್ಯ ಸರ್ಕಾರಕ್ಕೂ ಸಲ್ಲಿಸಿರಲಿಲ್ಲ ಎಂದಿದ್ದಾರೆ.