ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಲಾರ ಕ್ಷೇತ್ರದ ಟಿಕೆಟ್‌ ಬಿಕ್ಕಟ್ಟಿಗೆ ತೆರೆ; ಬಣ ರಾಜಕೀಯಕ್ಕೆ ಬ್ರೇಕ್‌ ಕಷ್ಟ!

ಸೋತು ಗೆದ್ದಿತೇ ಘಟಬಂಧನ್?
Published : 31 ಮಾರ್ಚ್ 2024, 6:30 IST
Last Updated : 31 ಮಾರ್ಚ್ 2024, 6:30 IST
ಫಾಲೋ ಮಾಡಿ
Comments
ಎನ್‌ಎಸ್‌ಯುಐನಿಂದ ಲೋಕಸಭೆ ಟಿಕೆಟ್‌ವರೆಗೆ...
ಬೆಂಗಳೂರಿನ ಕೆ.ವಿ.ಗೌತಮ್‌ 1994ರಲ್ಲಿ ರಾಜ್ಯ ಎನ್‌ಎಸ್‌ಯುಐ ಕಾರ್ಯದರ್ಶಿಯಾಗಿ 2000ರಲ್ಲಿ ಬೆಂಗಳೂರು ಜಿಲ್ಲಾ ಯೂತ್‌ ಕಾಂಗ್ರೆಸ್‌ ಕಾರ್ಯದರ್ಶಿಯಾಗಿ ಹಾಗೂ ನಂತರ ಕರ್ನಾಟಕ ಪ್ರದೇಶ ಯೂತ್‌ ಕಾಂಗ್ರೆಸ್‌ ಸಮಿತಿ ಕಾರ್ಯದರ್ಶಿ ಆಗಿ ಕೆಲಸ ಮಾಡಿದ್ದಾರೆ. ಸದ್ಯ ಬೆಂಗಳೂರು ಕೇಂದ್ರ ಜಿಲ್ಲೆ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ . ಪರಿಶಿಷ್ಟ ಜಾತಿ (ಆದಿಜಾಂಬವ) ಎಡಗೈ ಸಮುದಾಯದವರಾಗಿದ್ದು ಈಗ ಅವರಿಗೆ ಕೋಲಾರ ಲೋಕಸಭೆ ಕ್ಷೇತ್ರದ ಟಿಕೆಟ್‌ ಲಭಿಸುವ ಮೂಲಕ ಅದೃಷ್ಟ ಒಲಿದಿದೆ‌. ಇವರ ಸಹೋದರಿಯರಿಬ್ಬರು ಕೋಲಾರ ಜಿಲ್ಲೆಯಲ್ಲಿ ಇದ್ದಾರೆ. ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಮೊದಲ ಬಾರಿ ಸಭೆ ನಡೆದಾಗ ಕಾಂಗ್ರೆಸ್‌ ಟಿಕೆಟ್‌ ಕೋರಿ ಅರ್ಜಿ ಸಲ್ಲಿಸಿದ್ದರು.
‘ಟಿಕೆಟ್‌ ವಿಚಾರ ಚರ್ಚಿಸಿದ್ದು ಡಿಕೆಶಿ‘ ‘ಟಿಕೆಟ್‌ ಸಿಗಬಹುದೆಂದು ನನಗೆ ನಿರೀಕ್ಷೆ ಇರಲಿಲ್ಲ. ಕ್ಷೇತ್ರದ ಟಿಕೆಟ್‌ಗೆ ಸಂಬಂಧಿಸಿದಂತೆ ನಡೆದ ವಿದ್ಯಮಾನದ ಬಳಿಕ ಡಿ.ಕೆ.ಶಿವಕಮಾರ್‌ ಮೊದಲು ನನಗೆ ಕರೆ ಮಾಡಿ ಚರ್ಚಿಸಿದರು. ಎರಡೂ ಬಣದಿಂದ ದೂರವಿರುವ ನನಗೆ ಟಿಕೆಟ್‌ ಕೊಟ್ಟರೆ ಒಳ್ಳೆಯದಾಗುತ್ತದೆ ಎಂದರು. ಅದಕ್ಕೆ ನಾನೂ ಒಪ್ಪಿದೆ’ ಎಂದು ಕಾಂಗ್ರೆಸ್‌ ಅಭ್ಯರ್ಥಿ ಕೆ.ವಿ.ಗೌತಮ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.  ‘ಇದೊಂದು ನನಗೆ ಒಲಿದ ಅದೃಷ್ಟ. ಒಂದೊಳ್ಳೆ ಅವಕಾಶ. ನನಗೆ ಕೋಲಾರದ ಎಲ್ಲಾ ನಾಯಕರ ಪರಿಚಯವಿದೆ. ನಾನು ಯಾವ ಬಣಕ್ಕೂ ಸೇರಿಲ್ಲ. ರಮೇಶ್‌ ಕುಮಾರ್‌ ಹಾಗೂ ಕೆ.ಎಚ್‌.ಮುನಿಯಪ್ಪ ಇಬ್ಬರೂ ನನ್ನ ತಂದೆಗೆ ಪರಿಚಯ’ ಎಂದರು. ‘ಪಕ್ಷದಲ್ಲಿ 28 ವರ್ಷಗಳ ಅನುಭವ ಇರುವ ನನ್ನಂಥ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್‌ ನೀಡಿದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪ್ರಚಾರಕ್ಕೆ ಇಳಿಯುತ್ತೇನೆ. ಕೋಲಾರ ಕಾಂಗ್ರೆಸ್‌ ಭದ್ರಕೋಟೆ ಆಗಿದ್ದು ಗೆಲ್ಲುವ ವಿಶ್ವಾಸವಿದೆ’ ಎಂದು ಹೇಳಿದರು.
ಸ್ಥಳೀಯ ವರ್ಸಸ್‌ ಹೊರಗಿನವರು!
ಬೆಂಗಳೂರಿನ ಕೆ.ವಿ.ಗೌತಮ್‌ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ಖಚಿತವಾಗುತ್ತಿದ್ದಂತೆ ಸ್ಥಳೀಯ ವರ್ಸಸ್‌ ಹೊರಗಿನವರು ಎಂಬ ಚರ್ಚೆಯೂ ಆರಂಭವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಸಂಬಂಧ ಹಲವರು ಪೋಸ್ಟ್‌ ಕೂಡ ಹಾಕಿಕೊಂಡು ಪರ–ವಿರೋಧದಲ್ಲಿ ತೊಡಗಿದ್ದಾರೆ. ಇದನ್ನು ದೊಡ್ಡಮಟ್ಟದಲ್ಲಿ ‌ಪ್ರಚುರಪಡಿಸಿಕೊಳ್ಳಲು ಜೆಡಿಎಸ್‌ ಮುಖಂಡರು ಮುಂದಾಗಿದ್ದಾರೆ. ‌ ‘ಸ್ಥಳೀಯ ವರ್ಸಸ್‌ ಹೊರಗಿನವರು ಅಲ್ಲ; ಸ್ವಾಭಿಮಾನಿ ವರ್ಸಸ್‌ ಹೊರಗಿನವರು ಎಂಬುದು ನಮ್ಮ ಪ್ರಚಾರದ ವೇದ ವಾಕ್ಯವಾಗಲಿದೆ’ ಎಂದು ವಿಧಾನ ಪರಿಷತ್‌ ಸದಸ್ಯ ಜೆಡಿಎಸ್‌ನ ಇಂಚರ ಗೋವಿಂದರಾಜು ತಿಳಿಸಿದರು.
‘ಜೆಡಿಎಸ್‌–ಬಿಜೆಪಿ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ’ ಹೊರಗಿನವರು ಸ್ಥಳೀಯರು ಎಂಬ ಚರ್ಚೆಗೆ ಅರ್ಥ ಇಲ್ಲ. ಜೆಡಿಎಸ್‌–ಬಿಜೆಪಿ ತಟ್ಟೆಯಲ್ಲಿ ಹೆಗ್ಗಣ ಬಿದ್ದಿರುವಾಗ ಮತ್ತೊಬ್ಬರ ತಟ್ಟೆಯಲ್ಲಿ ನೊಣ ಬಿದ್ದಿರುವುದನ್ನು ತೋರಿಸುತ್ತಿದ್ದಾರೆ. ಎಚ್‌.ಡಿ.ಕುಮಾರಸ್ವಾಮಿ ಕಳೆದ ಬಾರಿ ಚಿಕ್ಕಬಳ್ಳಾಪುರ ಕ್ಷೇತ್ರದ ಅಭ್ಯರ್ಥಿ ಆಗಿರಲಿಲ್ಲವೇ? ಈ ಬಾರಿ ಮಂಡ್ಯದಲ್ಲಿ ಕಣಕ್ಕಿಳಿಯುತ್ತಿಲ್ಲವೇ? ಹುಬ್ಬಳ್ಳಿ–ಧಾರವಾಡದ ಜಗದೀಶ ಶೆಟ್ಟರ್‌ ಬೆಳಗಾವಿಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಮುಖಂಡರು ವಿವಿಧೆಡೆ ಸ್ಪರ್ಧಿಸುವುದು ಎಲ್ಲಾ ಪಕ್ಷಗಳಲ್ಲಿ ಇದ್ದದ್ದೇ
–ಎಂ.ಎಲ್‌.ಅನಿಲ್‌ ಕುಮಾರ್‌ ವಿಧಾನ ಪರಿಷತ್‌ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT