'ಮೋದಿ ಫೋಟೊ ರಾಘವೇಂದ್ರ ಮನೆ ಆಸ್ತಿ ಅಲ್ಲ'
'ನಾನು ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೃದಯದಲ್ಲಿ ಇಟ್ಟುಕೊಂಡಿದ್ದೇನೆ. ನರೇಂದ್ರ ಮೋದಿ ಪೋಟೋ ಬಳಸಿಕೊಳ್ಳಬಾರದು ಎಂದು ಹೇಳಲು ಮೋದಿ ಏನೂ ರಾಘವೇಂದ್ರ ಅವರ ಮನೆ ಆಸ್ತಿ ಅಲ್ಲ. ನರೇಂದ್ರ ಮೋದಿ ವಿಶ್ವ ನಾಯಕ, ಅವರನ್ನು ನಾನು ಹೃದಯದಲ್ಲಿ ಇಟ್ಟುಕೊಂಡಿದ್ದೇನೆ. ನನ್ನ ಕಡಿದರೂ ನಾನು ನರೇಂದ್ರ ಮೋದಿ ಅವರನ್ನು ಬಿಡಲ್ಲ' ಎಂದು ಈಶ್ವರಪ್ಪ ಹೇಳಿದರು. 'ಬಿ.ವೈ.ವಿಜಯೇಂದ್ರ ಅವರು ಈಶ್ವರಪ್ಪ ಅವರ ಮನವೊಲಿಸಲಾಗುವುದು ಎಂದು ಹೇಳಿ ಎಲ್ಲರನ್ನೂ ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇನ್ನೂ ಯಾರೂ ಸಂಧಾನಕ್ಕೆ ಬರೊಲ್ಲ. ವಿಜಯೇಂದ್ರಗೆ ಸಹೋದರನ ಸೋಲಿನ ಭೀತಿ ಉಂಟಾಗಿದೆ. ಹೀಗಾಗಿ ಈ ರೀತಿ ಹೇಳಿಕೆ ಕೊಟ್ಟಿದ್ದಾರೆ. ಅವರಿಗೆ ಷಡ್ಯಂತ್ರ ಮಾಡಿಯೇ ಅಭ್ಯಾಸ. ಮತ್ತೊಮ್ಮೆ ಅವರು ಈಶ್ವರಪ್ಪನವರನ್ನು ಸಮಾಧಾನಗೊಳಿಸಲಾಗದು' ಎಂದರು.