ಜಯಂತ್ ಕಾಯ್ಕಿಣಿ, ಯೋಗರಾಜ್ ಭಟ್ ಸಾಹಿತ್ಯದಲ್ಲಿ ‘ನೆನಪೆ ನಿತ್ಯ ಮಲ್ಲಿಗೆ’ ಸೇರಿದಂತೆ ‘ಕೆಂಡಸಂಪಿಗೆ’ ಚಿತ್ರದ ಹಾಡುಗಳು ಹಿಟ್ ಆಗಿದ್ದವು. ವಿ.ಹರಿಕೃಷ್ಣ ಸಂಗೀತವಿತ್ತು. ‘ಕಾಗೆ ಬಂಗಾರ’ಕ್ಕೆ ಚರಣ್ ರಾಜ್ ಸಂಗೀತವಿದ್ದು, ಶೇಖರ್ ಛಾಯಾಗ್ರಹಣವಿರಲಿದೆ. ‘ಕಾಗೆ ಬಂಗಾರ’ ‘ಕೆಂಡಸಂಪಿಗೆ’ಯಲ್ಲಿ ಒಂದು ಪ್ರಮುಖ ಪಾತ್ರವಾಗಿದ್ದು, ಪ್ರಶಾಂತ್ ಸಿದ್ಧಿ ಈ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.