ನಿರ್ದೇಶಕರು ಮಾತನಾಡಿ ಸಿನಿಮಾದೊಳಗೊಂದು ಸಿನಿಮಾದ ಕಥೆಯನ್ನು ಹೇಳಲಾಗಿದೆ. ಅಂದು ಚಿತ್ರಗಳ ಕೆಲಸ ನಡೆಯುತ್ತಿದ್ದ ಸಮಯದಲ್ಲಿ ನಿರ್ಮಾಪಕರು, ನಿರ್ದೇಶಕರ ವರ್ತನೆಗಳನ್ನು ನೋಡಿ ಅದನ್ನೆ ಚಿತ್ರಕತೆಗೆ ಬಳಸಲಾಗಿದೆ. ನಾಯಕಿಯ ಧೋರಣೆಗೆ ಬೇಸತ್ತ ನಿರ್ದೇಶಕ ಹಳ್ಳಿಯ ಹುಡುಗಿಯೊಬ್ಬಳನ್ನು ನಾಯಕಿಯಾಗಿ ಮಾಡಿ ಹೇಗೆ ಯಶಸ್ಸು ಗಳಿಸುತ್ತಾನೆ ಎನ್ನುವುದು ಕಥಾ ಹಂದರ. ಚಿತ್ರದಲ್ಲಿ ವೈನ್, ವುಮೆನ್, ವೆಲ್ತ್ ಬಳಸದೆ ಇರುವುದು ವಿಶೇಷ ಎಂದರು.
ತಾರಾಗಣದಲ್ಲಿ ಎಸ್.ಕೆ.ಪ್ರಕಾಶ್ ಸಣ್ಣಕ್ಕಿ, ದಿನೇಶ್ಗೌಡ, ಕಾವ್ಯಪ್ರಕಾಶ್, ಆಶಾ, ಹರಣಿನಟರಾಜ್ ಮುಂತಾದವರು ಅಭಿನಯಿಸಿದ್ದಾರೆ. ಸಂಗೀತ ನಿವೇದ್, ಛಾಯಾಗ್ರಹಣ ಸೂರ್ಯೋದಯ, ಸಂಕಲನ ಅಭಿಷೇಕ್ಯೋಗಿ, ನೃತ್ಯ ರಾಜ್ದೇವ್ ಅವರದಾಗಿದೆ. ನವೆಂಬೆರ್ ವೇಳಗೆ ಚಿತ್ರವು ತೆರೆಗೆ ಬರಲಿದೆ.