ಮನವಿ ಸ್ವೀಕರಿಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುರೇಶ್, ‘ಎಲ್ಲ ಹೆಣ್ಣುಮಕ್ಕಳಿಗೆ ಗೌರವ ಕೊಡುವುದು ನಮ್ಮ ಧರ್ಮ. ಹೆಣ್ಣುಮಕ್ಕಳ ಬಗ್ಗೆ ನಮಗೂ ಕಾಳಜಿ ಇದೆ. ಯಾರಿಗಾದರೂ ಶೋಷಣೆ, ದೌರ್ಜನ್ಯ ಆದ ಪಕ್ಷದಲ್ಲಿ ವಾಣಿಜ್ಯ ಮಂಡಳಿಗೆ ನೇರವಾಗಿ ದೂರು ಕೊಡಿ. ಫೈರ್ ಸಂಸ್ಥೆ ಅಥವಾ ಇನ್ಯಾವುದೇ ಸಂಸ್ಥೆಗೂ ನಮಗೂ ಸಂಬಂಧವಿಲ್ಲ. ಚೇತನ್ ಅವರೇ ನಿಮ್ಮ ರೂಪುರೇಷೆ, ಕಾರ್ಯವ್ಯಾಪ್ತಿಯನ್ನು ನಿಮ್ಮಲ್ಲೇ ಇಟ್ಟುಕೊಳ್ಳಿ. ಹಲವು ದಶಕಗಳ ಇತಿಹಾಸ ಇರುವ ವಾಣಿಜ್ಯ ಮಂಡಳಿಗೆ ನೀವು ಸವಾಲು ಹಾಕಲು ಹೋಗಬೇಡಿ. ಚಿತ್ರರಂಗದಲ್ಲಿ ಯಾರಿಗೂ ಏನೂ ತೊಂದರೆ ಆಗಿಲ್ಲ. ತೊಂದರೆಯಾದರೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮದಿದೆ’ ಎಂದಿದ್ದಾರೆ.