<p>ಮತ್ತೊಂದು ಗ್ರಾಮೀಣ ಸೊಗಡಿನ ಕಥೆಯೊಂದನ್ನು ತೆರೆ ಮೇಲೆ ತರಲು ‘ದಕ್ಷಯಜ್ಞ’, ‘ತರ್ಲೆ ವಿಲೇಜ್’ ಖ್ಯಾತಿಯ ನಿರ್ದೇಶಕ ಜಿಬಿಎಸ್ ಸಿದ್ದೇಗೌಡ ಮುಂದಾಗಿದ್ದಾರೆ.</p><p>ಅವರ ‘ಕುಂಟೆಬಿಲ್ಲೆ’ ಸಿನಿಮಾ ಚಿತ್ರೀಕರಣ ಮೈಸೂರಿನ ಮೈದನಹಳ್ಳಿಯಲ್ಲಿ ಭರದಿಂದ ನಡೆದಿದೆ. </p><p>ಹಳೇ ಮೈಸೂರು ಭಾಗದ ಗ್ರಾಮೀಣ ಕಥನಗಳನ್ನು ತೆರೆಯ ಮೇಲೆ ತಂದು ಯಶಸ್ಸು ಗಳಿಸಿರುವ ಸಿದ್ದೇಗೌಡ ಅವರಿಗೆ ‘ಕುಂಟೆಬಿಲ್ಲೆ’ ಮೂಲಕ ಮರೆಯಾಗುತ್ತಿರುವ ದೇಸಿ ಆಟ, ಬದಲಾಗುತ್ತಿರುವ ಗ್ರಾಮಗಳ ಭೂ– ಸ್ವರೂಪ, ಸಂಸ್ಕೃತಿಯನ್ನು ಕಟ್ಟಿಕೊಡುವ ಹಂಬಲ. ನಾಯಕ ಯದುವಿಗೆ ನಾಯಕಿಯಾಗಿ ಮೇಘಶ್ರೀ ಜೊತೆಯಾಗಿದ್ದಾರೆ. </p><p>‘ಹಳ್ಳಿಯೆಂದರೆ ಮನೆ, ಹೊಲವಷ್ಟೇ ಅಲ್ಲ. ಅಲ್ಲೊಂದು ವ್ಯಾಪಾರ– ವ್ಯವಹಾರವಿದೆ. ನೂರಾರು ಕಥೆಗಳಿವೆ. ಪ್ರೀತಿ, ಪ್ರೇಮವಿದೆ. ಆಲೆಮನೆ, ಶುಂಠಿ ಮನೆಯಲ್ಲಿ ನಡೆಯುವ ಘಟನೆಗಳು, ಅಪರಾಧಗಳನ್ನು ವಿಭಿನ್ನವಾಗಿ ಈ ಚಿತ್ರದಲ್ಲಿ ತೋರಿಸುತ್ತಿರುವೆ. ಅಸೂಯೆ, ಹೊಟ್ಟೆ ಕಿಚ್ಚು, ಜಾತೀಯತೆ ಹಳ್ಳಿಗಳನ್ನು ಸುಡುತ್ತಿದ್ದು, ಕೊನೆಗೆ ಗೆಲ್ಲುವುದು ಮನುಷ್ಯತ್ವ ಎಂಬುದನ್ನು ಚಿತ್ರದಲ್ಲಿ ನಿರೂಪಿಸುತ್ತಿದ್ದೇನೆ’ ಎಂದು ಚಿತ್ರದ ನಿರ್ದೇಶಕ ಜಿಬಿಎಸ್ ಸಿದ್ದೇಗೌಡ ಹೇಳಿದರು. </p><p>‘ಮನೋರೋಗಿ ಬಗ್ಗೆ ‘ಥಿಯರಿ’ ಎಂಬ ಸಿನಿಮಾ ಮಾಡಿದ್ದೆ. ನಿರೀಕ್ಷಿತವಾಗಿ ಚಿತ್ರ ಓಡಲಿಲ್ಲ. ‘ಋತುಮತಿ’ ಚಿತ್ರ ಬಿಡುಗಡೆ ಆಗಬೇಕಿದೆ. 2015ರಿಂದಲೂ ಸಿನಿಮಾ ನಿರ್ಮಾಣ, ನಿರ್ದೇಶನದಲ್ಲಿ ತೊಡಗಿಸಿಕೊಂಡಿರುವೆ. ಭಿನ್ನ ಕಥೆಯೊಂದನ್ನು ಹೇಳಿದರೆ, ಸಿನಿಮಾ ಚೆನ್ನಾಗಿದ್ದರೆ ಜನರು ಟಾಕೀಸ್ಗಳಿಗೆ ಬಂದೇ ಬರುತ್ತಾರೆ. 40 ದಿನಗಳಲ್ಲಿ ಈ ಚಿತ್ರದ ಶೂಟಿಂಗ್ ಮುಗಿಯಲಿದೆ. ಮೈಸೂರು ಸುತ್ತಮುತ್ತಲ ಚಿತ್ರೀಕರಣದ ನಂತರ ಕೆಲವು ದೃಶ್ಯಗಳಿಗೆ ಚಿಕ್ಕಮಗಳೂರು ಹಾಗೂ ಊಟಿಗೂ ತಂಡ ತೆರಳಲಿದೆ’ ಎಂದರು. </p><p>ಎಸ್.ಬಿ.ಶಿವು,ಕುಮಾರ್ ಗೌಡ ಅವರು ನಿರ್ಮಾಪಕರಾಗಿದ್ದು, ಬಿ.ಎ.ಮಧು– ಸಂಭಾಷಣೆ, ಮುಂಜಾನೆ ಮಂಜು– ಛಾಯಾಗ್ರಹಣ, ಹರಿಕಾವ್ಯ– ಸಂಗೀತ, ಸುಜಿತ್ ಅವರ ಸಂಕಲನ ಚಿತ್ರಕ್ಕಿದೆ. ಸಿನಿಮಾದ ನಟರು ಹಾಗೂ ತಂತ್ರಜ್ಞರು ಹಳೆ ಮೈಸೂರಿನ ಹಳ್ಳಿಗಾಡಿನವರೇ ಎಂಬುದು ವಿಶೇಷ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮತ್ತೊಂದು ಗ್ರಾಮೀಣ ಸೊಗಡಿನ ಕಥೆಯೊಂದನ್ನು ತೆರೆ ಮೇಲೆ ತರಲು ‘ದಕ್ಷಯಜ್ಞ’, ‘ತರ್ಲೆ ವಿಲೇಜ್’ ಖ್ಯಾತಿಯ ನಿರ್ದೇಶಕ ಜಿಬಿಎಸ್ ಸಿದ್ದೇಗೌಡ ಮುಂದಾಗಿದ್ದಾರೆ.</p><p>ಅವರ ‘ಕುಂಟೆಬಿಲ್ಲೆ’ ಸಿನಿಮಾ ಚಿತ್ರೀಕರಣ ಮೈಸೂರಿನ ಮೈದನಹಳ್ಳಿಯಲ್ಲಿ ಭರದಿಂದ ನಡೆದಿದೆ. </p><p>ಹಳೇ ಮೈಸೂರು ಭಾಗದ ಗ್ರಾಮೀಣ ಕಥನಗಳನ್ನು ತೆರೆಯ ಮೇಲೆ ತಂದು ಯಶಸ್ಸು ಗಳಿಸಿರುವ ಸಿದ್ದೇಗೌಡ ಅವರಿಗೆ ‘ಕುಂಟೆಬಿಲ್ಲೆ’ ಮೂಲಕ ಮರೆಯಾಗುತ್ತಿರುವ ದೇಸಿ ಆಟ, ಬದಲಾಗುತ್ತಿರುವ ಗ್ರಾಮಗಳ ಭೂ– ಸ್ವರೂಪ, ಸಂಸ್ಕೃತಿಯನ್ನು ಕಟ್ಟಿಕೊಡುವ ಹಂಬಲ. ನಾಯಕ ಯದುವಿಗೆ ನಾಯಕಿಯಾಗಿ ಮೇಘಶ್ರೀ ಜೊತೆಯಾಗಿದ್ದಾರೆ. </p><p>‘ಹಳ್ಳಿಯೆಂದರೆ ಮನೆ, ಹೊಲವಷ್ಟೇ ಅಲ್ಲ. ಅಲ್ಲೊಂದು ವ್ಯಾಪಾರ– ವ್ಯವಹಾರವಿದೆ. ನೂರಾರು ಕಥೆಗಳಿವೆ. ಪ್ರೀತಿ, ಪ್ರೇಮವಿದೆ. ಆಲೆಮನೆ, ಶುಂಠಿ ಮನೆಯಲ್ಲಿ ನಡೆಯುವ ಘಟನೆಗಳು, ಅಪರಾಧಗಳನ್ನು ವಿಭಿನ್ನವಾಗಿ ಈ ಚಿತ್ರದಲ್ಲಿ ತೋರಿಸುತ್ತಿರುವೆ. ಅಸೂಯೆ, ಹೊಟ್ಟೆ ಕಿಚ್ಚು, ಜಾತೀಯತೆ ಹಳ್ಳಿಗಳನ್ನು ಸುಡುತ್ತಿದ್ದು, ಕೊನೆಗೆ ಗೆಲ್ಲುವುದು ಮನುಷ್ಯತ್ವ ಎಂಬುದನ್ನು ಚಿತ್ರದಲ್ಲಿ ನಿರೂಪಿಸುತ್ತಿದ್ದೇನೆ’ ಎಂದು ಚಿತ್ರದ ನಿರ್ದೇಶಕ ಜಿಬಿಎಸ್ ಸಿದ್ದೇಗೌಡ ಹೇಳಿದರು. </p><p>‘ಮನೋರೋಗಿ ಬಗ್ಗೆ ‘ಥಿಯರಿ’ ಎಂಬ ಸಿನಿಮಾ ಮಾಡಿದ್ದೆ. ನಿರೀಕ್ಷಿತವಾಗಿ ಚಿತ್ರ ಓಡಲಿಲ್ಲ. ‘ಋತುಮತಿ’ ಚಿತ್ರ ಬಿಡುಗಡೆ ಆಗಬೇಕಿದೆ. 2015ರಿಂದಲೂ ಸಿನಿಮಾ ನಿರ್ಮಾಣ, ನಿರ್ದೇಶನದಲ್ಲಿ ತೊಡಗಿಸಿಕೊಂಡಿರುವೆ. ಭಿನ್ನ ಕಥೆಯೊಂದನ್ನು ಹೇಳಿದರೆ, ಸಿನಿಮಾ ಚೆನ್ನಾಗಿದ್ದರೆ ಜನರು ಟಾಕೀಸ್ಗಳಿಗೆ ಬಂದೇ ಬರುತ್ತಾರೆ. 40 ದಿನಗಳಲ್ಲಿ ಈ ಚಿತ್ರದ ಶೂಟಿಂಗ್ ಮುಗಿಯಲಿದೆ. ಮೈಸೂರು ಸುತ್ತಮುತ್ತಲ ಚಿತ್ರೀಕರಣದ ನಂತರ ಕೆಲವು ದೃಶ್ಯಗಳಿಗೆ ಚಿಕ್ಕಮಗಳೂರು ಹಾಗೂ ಊಟಿಗೂ ತಂಡ ತೆರಳಲಿದೆ’ ಎಂದರು. </p><p>ಎಸ್.ಬಿ.ಶಿವು,ಕುಮಾರ್ ಗೌಡ ಅವರು ನಿರ್ಮಾಪಕರಾಗಿದ್ದು, ಬಿ.ಎ.ಮಧು– ಸಂಭಾಷಣೆ, ಮುಂಜಾನೆ ಮಂಜು– ಛಾಯಾಗ್ರಹಣ, ಹರಿಕಾವ್ಯ– ಸಂಗೀತ, ಸುಜಿತ್ ಅವರ ಸಂಕಲನ ಚಿತ್ರಕ್ಕಿದೆ. ಸಿನಿಮಾದ ನಟರು ಹಾಗೂ ತಂತ್ರಜ್ಞರು ಹಳೆ ಮೈಸೂರಿನ ಹಳ್ಳಿಗಾಡಿನವರೇ ಎಂಬುದು ವಿಶೇಷ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>