ಬುಧವಾರ, 16 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ | ಈ ರಾಶಿಯವರು ಇಂದು ವಿಪುಲ ಆದಾಯ ಪಡೆಯುವಿರಿ
Published 16 ಅಕ್ಟೋಬರ್ 2024, 0:12 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಕಳೆದ ವಾರದ ಎಲ್ಲ ಕೆಲಸಗಳು ಈ ದಿನ ಸಂಪೂರ್ಣಗೊಂಡು ವಿಪುಲ ಆದಾಯ ಪಡೆದುಕೊಳ್ಳುವಿರಿ. ಆರೋಗ್ಯ ವೃದ್ಧಿಗಾಗಿ ನಿಯಮ ಪಾಲಿಸುವುದು ಒಳ್ಳೆಯದು.
ವೃಷಭ
ಕೋರ್ಟಿನ ಕಾರ್ಯಗಳಲ್ಲಿ ವಿನೂತನ ತಿರುವು ಸಿಗಲಿದೆ. ಹಣ್ಣು-ಹೂವಿನ ಮಾರಾಟ ಮಾಡುವವರಿಗೆ ಅಧಿಕ ಲಾಭಾಂಶದ ನಿರೀಕ್ಷೆ ಬೇಡ. ಸ್ನೇಹಿತರ ಜತೆ ಕಾಲ ಕಳೆಯುವಿರಿ.
ಮಿಥುನ
ಯಂತ್ರೊಪಕರಣಗಳ ಖರೀದಿಯಿಂದಾಗಿ ಅಧಿಕ ಮಟ್ಟದಲ್ಲಿ ಖರ್ಚು ಸಂಭವಿಸುವುದು. ಮೇಲಧಿಕಾರಿಗಳ ಒತ್ತಾಯಕ್ಕೆ ಮಣಿದು ಕೆಲಸದಲ್ಲಿ ಸತ್ಯ ಮಾರ್ಗವನ್ನು ಬಿಡಬೇಕಾದ ಪರಿಸ್ಥಿತಿ ಎದುರಾಗಬಹುದು.
ಕರ್ಕಾಟಕ
ವೈದ್ಯರ ಸಲಹೆಯಂತೆ ಮನಸ್ಸಿನ ಸಂಯಮಕ್ಕಾಗಿ ಯೋಗ, ಧ್ಯಾನದತ್ತ ಗಮನ ಹರಿಸಿ. ಗುಂಪು ಚಟುವಟಿಕೆಗಳಿಗೆ ಮುಂದಾಳತ್ವ ಅಗತ್ಯವಾಗಿರುವುದು. ಪಾಲುದಾರರ ಮಾತಿನಲ್ಲಿ ವಿಶ್ವಾಸವಿಡಬಹುದು.
ಸಿಂಹ
ರಾಜಕೀಯದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ನಿಮಗೆ ಸದ್ಯದ ಪರಿಸ್ಥಿತಿ ಅನುಕೂಲಕರವಾಗಿದೆ. ಸುತ್ತಮುತ್ತಲಿನವರ ಬಗ್ಗೆ ಮೌನದಿಂದಿರುವುದು ವ್ಯಕ್ತಿತ್ವಕ್ಕೆ ಶೋಭೆ ತರುವುದು.
ಕನ್ಯಾ
ನಿಮ್ಮಲ್ಲಿರುವ ಆತ್ಮಸ್ಥೈರ್ಯ ಹಾಗೂ ದೇವರ ಮೇಲಿರುವ ಶ್ರದ್ಧೆ ,ಭಕ್ತಿ ನಂಬಿಕೆಯಿಂದಾಗಿ ಸಮಸ್ಯೆಗಳನ್ನು ಧೈರ್ಯವಾಗಿ ಎದುರಿಸಿ ಪರಿಹರಿಸಿಕೊಳ್ಳುವಿರಿ. ವಾದ ವಿವಾದಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿ.
ತುಲಾ
ಉದ್ಯೋಗವನ್ನು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಮೂಲಕ ದೊರಕಿಸಿಕೊಳ್ಳಬಹುದು. ಕುಟುಂಬದ ಸದಸ್ಯರೊಂದಿಗೆ ಸಂತಸದಲ್ಲಿ ಕೆಲ ಕಾಲ ಕಳೆಯುವಂತಾಗುವುದು. ಕೆಲಸದ ಕಾರಣವಾಗಿ ಕಿರು ಸಂಚಾರದ ಯೋಗವಿದೆ.
ವೃಶ್ಚಿಕ
ಹಣಕಾಸು ನಿರ್ವಹಣೆಯ ವಿಚಾರದಲ್ಲಿ ಹೆಂಡತಿಯ ಕುಶಲಮತಿಯು ಉಪಯೋಗಕ್ಕೆ ಬರುತ್ತದೆ. ಕರಕುಶಲ ವಸ್ತುಗಳ ತಯಾರಿಕ ವೃತ್ತಿಗಳಿಂದ ಹೆಚ್ಚಿನ ವರಮಾನ ಸಿಗಲಿದೆ. ಕೈಗೂಂಡ ಕಾರ್ಯ ಸಫಲವಾಗಲಿದೆ.
ಧನು
ಆಸ್ತಿ ಖರೀದಿಯ ವಿಚಾರದಲ್ಲಿ ಪರಿಸ್ಥಿತಿ ಅವಲೋಕಿಸಿಕೊಂಡು ಮುಂದಿನ ಹೆಜ್ಜೆ ಇರಿಸಿ. ಮಹಿಳೆಯರಿಗೆ ಉಪಯೋಗಕ್ಕೆ ಬಾರದ ವಿಚಾರದ ಬಗೆಗಿನ ಚಿಂತೆಯು ಆರೋಗ್ಯವನ್ನು ಹಾಳು ಮಾಡುತ್ತದೆ.
ಮಕರ
ಸಮಸ್ಯೆಗಳನ್ನು ಸೌಹಾರ್ದಯುತವಾಗಿ ಮತ್ತು ನ್ಯಾಯ ಸಮ್ಮತವಾಗಿ ಬಗೆಹರಿಸಿಕೊಳ್ಳುವಲ್ಲಿ ಯಶಸ್ವಿಯಾಗುವಿರಿ. ವ್ಯಾಪಾರ ವ್ಯವಹಾರಗಳಲ್ಲಿ ತುಸು ಚೇತರಿಕೆ ಕಂಡುಬಂದು ಮುಂದುವರಿಯಲು ಸಹಾಯವಾಗುತ್ತದೆ.
ಕುಂಭ
ಬದುಕನ್ನು ವಿಲಾಸಿಯಾಗಿ ಕಳೆಯುವ ಹೊರತಾಗಿ ಇನ್ನೊಂದು ಪ್ರಪಂಚವಿದ್ದು, ಅನೇಕ ಜವಾಬ್ದಾರಿಗಳಿವೆ ಎಂಬುದನ್ನು ಮರೆಯದಿರಿ. ಧನಾಗಮನಕ್ಕೆ ಯಾವುದೇ ತೊಂದರೆ, ಅಡ್ಡಿ-ಆತಂಕ ಇರುವುದಿಲ್ಲ.
ಮೀನ
ವ್ಯವಹಾರದ ವಿಷಯಗಳಲ್ಲಿ ಯಾವುದೇ ಸಂಬಂಧಗಳಿಗೆ ಆಸ್ಪದವಿರದಂತೆ ನೋಡಿಕೊಳ್ಳುವುದು ಒಳ್ಳೆಯದು. ಅಭಿರುಚಿಗೆ ತಕ್ಕಂಥ ಮನಸ್ಥಿತಿಯನ್ನು ಹೊಂದಿದ ವ್ಯಕ್ತಿಗಳೊಂದಿಗೆ ವ್ಯವಹರಿಸುವುದು ಹೆಚ್ಚು ಸೂಕ್ತ.
ADVERTISEMENT
ADVERTISEMENT