ಮಂಗಳವಾರ, 22 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
06/10/2024 - 12/10/2024
ವಾರ ಭವಿಷ್ಯ: ಈ ರಾಶಿಯವರಿಗೆ ಹಿರಿಯರ ವ್ಯಾಪಾರ ವ್ಯವಹಾರಗಳು ಸಿಗುತ್ತವೆ
Published 12 ಅಕ್ಟೋಬರ್ 2024, 23:04 IST
ಡಾ. ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
author
ಜ್ಯೋತಿಷ್ಯ ವಿಶಾರದ, ಮಾದಾಪುರ ಸಂಪರ್ಕ ಸಂಖ್ಯೆ: 8197304680
ಮೇಷ
( ಅಶ್ವಿನಿ ಭರಣಿ ಕೃತಿಕ 1) ನಿಮ್ಮ ಮನಸ್ಸು ನಿಮ್ಮ ಚಟುವಟಿಕೆಗಳ ಮೇಲೆ ಕೇಂದ್ರೀಕೃತವಾಗಿರುತ್ತದೆ. ಆದಾಯವು ನಿಮ್ಮ ನಿರೀಕ್ಷೆಯಂತೆ ಇರುತ್ತದೆ. ಬಂಧುಗಳ ಜೊತೆ ಕಟುವಾಗಿ ಮಾತನಾಡುವುದು ಬೇಡ. ಆಸ್ತಿ ವಿಚಾರಗಳಲ್ಲಿ ಸ್ವಲ್ಪ ಮುನ್ನಡೆ ಸಾಧಿಸಬ ಹುದು. ಅಧ್ಯಯನ ಶೀಲರಿಗೆ ಅಧ್ಯಯನದಲ್ಲಿ ಹಿನ್ನಡೆಯನ್ನು ಕಾಣಬಹುದು. ಕಣ್ಣಿನ ತೊಂದರೆ ಅಥವಾ ತಲೆ ತಲೆನೋವು ಇರುವವರು ಹೆಚ್ಚು ಎಚ್ಚರವಹಿಸಿರಿ. ಪಾಲುದಾರಿಕೆವ್ಯವಹಾರಗಳಲ್ಲಿ ಹೆಚ್ಚಿನ ಲಾಭವನ್ನು ಕಾಣಬಹುದು. ವೃತ್ತಿಯಲ್ಲಿ ಶ್ರಮಪಟ್ಟು ಕೆಲಸಮಾಡಿ ಹೆಸರನ್ನು ಗಳಿಸುವಿರಿ. ವಿದೇಶಕ್ಕೆ ಆಹಾರ ವಸ್ತುಗಳನ್ನು ರಫ್ತುಮಾಡುವ ವರಿಗೆ ಆದಾಯ ಹೆಚ್ಚುತ್ತದೆ. ವೃತ್ತಿಯಲ್ಲಿ ಸ್ವಲ್ಪ ಒತ್ತಡಗಳು ಹೆಚ್ಚಾಗುತ್ತವೆ.
ವೃಷಭ
(ಕೃತಿಕಾ2 3 4 ರೋಹಿಣಿ ಮೃಗಶಿರಾ1 2) ಗುರುತರವಾದ ಜವಾಬ್ದಾರಿಗಳನ್ನು ಸರಿಯಾಗಿ ನಿರ್ವಹಣೆಮಾಡುವಿರಿ.ಆದಾಯವು ಸ್ವಲ್ಪ ಕಡಿಮೆ ಇರುತ್ತದೆ. ಮಾತನಾಡುವಾಗ ಮೃದುಭಾಷೆ ಇರಲಿ. ಬಂಧುಗಳು ನಿಮ್ಮ ಬಳಿಗೆ ಹಣಕಾಸಿಗಾಗಿ ಬರುವರು, ಹಣಕೊಟ್ಟಲ್ಲಿ ಈಗ ವಾಪಸ್ಸು ಬರುವುದು ಕಷ್ಟ. ಕೃಷಿಯಿಂದ ಹೆಚ್ಚು ಆದಾಯವಿರುತ್ತದೆ. ನಿಮ್ಮಕೆಲಸಕಾರ್ಯಗಳಿಗೆ ತಂದೆಯಿಂದ ಮತ್ತು ಇತರೆ ಹಿರಿಯರಿಂದ ಸಹ ಕಾರಗಳು ದೊರೆಯುತ್ತವೆ. ಭೂಮಿಯ ವ್ಯವ ಹಾರ ಮಾಡುವವರಿಗೆ ಅಭಿವೃದ್ಧಿ ಇರುತ್ತದೆ. ರಿಯಲ್ ಎಸ್ಟೇಟ್ ಏಜೆಂಟರಗಳಿಗೆ ಹೆಚ್ಚಿನ ಲಾಭವಿರುತ್ತದೆ. ರಕ್ತ ಸಂಬಂಧಿ ದೋಷಗಳಿರು ವವರು ಹೆಚ್ಚುಎಚ್ಚರವಹಿಸಿರಿ.ಹೊಸವ್ಯವಹಾರ ಗಳಲ್ಲಿ ನಷ್ಟವಾಗಬಹುದು ಎಚ್ಚರವಹಿಸಿರಿ.
ಮಿಥುನ
(ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3) ಬಾಹುಬಲ ಉಳ್ಳವರಿಗೆ ಬೇಡಿಕೆ ಹೆಚ್ಚುತ್ತದೆ. ಸೌಮ್ಯವಾಗಿ ಮಾತನಾಡಿದರು ಸಹ ಅದರಲ್ಲಿನ ಚುರುಕು ಮುಟ್ಟಬೇಕಾದವರಿಗೆ ಮುಟ್ಟುತ್ತದೆ. ಆದಾಯವು ಸಾಮಾನ್ಯಗತಿಯಲ್ಲಿ ರುತ್ತದೆ. ಬಂಧುಗಳಿಂದ ನಿರೀಕ್ಷಿತ ಸಹಕಾರಗಳು ದೊರೆಯುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಪಡೆಯುವ ಯೋಗವಿದೆ. ಪ್ರಸೂತಿ ತಜ್ಞರಿಗೆ ಬೇಡಿಕೆಹೆಚ್ಚುತ್ತದೆ. ಮಹಿಳೆಯರ ಜೊತೆ ಹಣಕಾಸಿನ ವ್ಯವಹಾರಗಳು ಬೇಡ. ಸಂಗಾತಿ ಗಾಗಿ ಸ್ವಲ್ಪ ಹಣ ಖರ್ಚಾಗುತ್ತದೆ. ಸಂಬಂಧಿಗಳಿ ಗಾಗಿ ಹಣಖರ್ಚಾಗುತ್ತದೆ.ದೂರವಿದ್ದಹಿರಿಯರು ಹತ್ತಿರವಾಗುವ ಸಾಧ್ಯತೆಗಳಿವೆ. ವೃತ್ತಿಯಲ್ಲಿ ಸ್ವಲ್ಪ ಹಿತ ಶತ್ರುಗಳ ಕಾಟವಿರುತ್ತದೆ. ವಿದೇಶದಲ್ಲಿ ಕೆಲಸದಲ್ಲಿರುವವರಿಗೆ ಅಭಿವೃದ್ಧಿ ಇರುತ್ತದೆ.
ಕರ್ಕಾಟಕ
( ಪುನರ್ವಸು 4 ಪುಷ್ಯ ಆಶ್ಲೇಷ) ಮನಸ್ಸಿನಲ್ಲಿ ಸ್ವಲ್ಪ ಸಮಾಧಾನಗಳು ಇರುತ್ತವೆ. ಆದಾಯವು ಮಧ್ಯಮ ಗತಿಯಲ್ಲಿ ರುತ್ತದೆ. ನಿಮ್ಮ ಪರಿಶ್ರಮದಿಂದ ಆದಾಯವನ್ನು ಹೆಚ್ಚು ಮಾಡಿಕೊಳ್ಳಬಹುದು. ಭೂಮಿಯ ವ್ಯವಹಾರಗಳಲ್ಲಿ ಮುಂದುವರೆಯಬಹುದು. ಈಗ ವಿದ್ಯಾರ್ಥಿಗಳಿಗೆ ನಿರೀಕ್ಷಿತ ಪಲಿತಾಂಶ ದೊರೆ ಯುವ ಸಾಧ್ಯತೆ ಇದೆ. ಕೆಲವರಿಗೆ ಮಿತಿಮೀರಿದ್ದ ಅನಾರೋಗ್ಯ ಈಗ ತಹಬಂದಿಗೆ ಬರುತ್ತದೆ. ಸಂಗಾತಿಯ ಜೊತೆ ಕೆಲವೊಂದುವಿಷಯಗಳಲ್ಲಿ ವಿರೋಧಾಭಾಸ ಮೂಡಬಹುದು.ಬಂಧುಗ ಳಿಂದ ಧನ ಸಹಾಯವಿರುತ್ತದೆ. ಈಗ ಮೂಳೆಗೆ ಸಂಬಂಧ ಪಟ್ಟ ತೊಂದರೆಗಳುಕಾಣಿಸಬಹುದು. ರಾಜಕೀಯ ನಾಯಕರುಗಳಿಗೆ ಸ್ಥಾನದ ಜೊತೆಗೆ ಜನರ ವಿರೋಧಕೂಡಾ ದೊರೆಯುತ್ತದೆ.
ಸಿಂಹ
( ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1) ಬಹಳ ಶ್ರಮ ಜೀವಿಯಂತೆ ಕಾಣಿಸಿ ಕೊಳ್ಳಲು ಯತ್ನಪಡುವಿರಿ. ಆದಾಯವು ಈಗ ನಿಮಗೆ ತೃಪ್ತಿ ತರುತ್ತದೆ. ನಿಮ್ಮ ವ್ಯವಹಾರಿಕ ಬುದ್ಧಿಯನ್ನು ಬಳಸಿ ಬಂಧುಗಳ ಸಹಕಾರವನ್ನು ತೆಗೆದುಕೊಳ್ಳುವಿರಿ. ಕೃಷಿ ಭೂಮಿ ವ್ಯಾಪಾರಗಾರರಿಗೆ ಆದಾಯ ಹೆಚ್ಚುತ್ತದೆ. ಹಿರಿಯರ ಆಸ್ತಿ ಯನ್ನು ಮಾರಿ ಲಾಭ ಪಡೆಯಬಹುದು. ವೃತ್ತಿ ಸಂಬಂಧಿಕ ಪರೀಕ್ಷೆಗಳನ್ನು ತೆಗೆದುಕೊಂಡು ಮುಂದುವರೆಯಬಹುದು. ತಾಯಿ ಆರೋಗ್ಯಕ್ಕೆ ಸ್ವಲ್ಪ ಹಣ ಖರ್ಚಾಗುತ್ತದೆ. ನಿಮ್ಮ ಸಂಗಾತಿಯು ಸಂಸಾರಕ್ಕಾಗಿ ತೆಗೆದುಕೊಳ್ಳುವ ಎಚ್ಚರಿಕೆಗಳನ್ನು ನೋಡಿದಾಗ ಬಹಳ ಸಂತಸವಾಗುತ್ತದೆ. ವ್ಯವಹಾರಗಳಲ್ಲಿ ಹೆಚ್ಚಿನ ಗಮನ ಇರಲಿ ಇಲ್ಲದಿದ್ದರೆ ನಷ್ಟವಾಗುತ್ತದೆ.
ಕನ್ಯಾ
( ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2) ಧರ್ಮಕಾರ್ಯಗಳ ಬಗ್ಗೆ ಒಲವು ಹೆಚ್ಚಾಗುತ್ತದೆ. ಆದಾಯವು ಮಧ್ಯಮ ಗತಿಯ ಲ್ಲಿರುತ್ತದೆ. ನಿಮ್ಮ ಚಟುವಟಿಕೆಗಳಿಂದ ಮಹಿಳೆ ಯರನ್ನು ಆಕರ್ಷಿಸಿ ಆದಾಯ ಹೆಚ್ಚು ಮಾಡಿ ಕೊಳ್ಳಲು ಪ್ರಯತ್ನ ಪಡುವಿರಿ. ಸಂಗಾತಿಗೆ ಹಿರಿ ಯರ ಆಸ್ತಿಯಿಂದ ಲಾಭವಾಗುತ್ತದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಏಳಿಗೆಯನ್ನು ಕಾಣಬಹುದು. ಕೆಲವು ರಾಜಕೀಯ ನಾಯಕರಗಳಿಗೆ ಸಾಲದ ಹೊರೆ ಹೆಚ್ಚಾಗುವ ಸಾಧ್ಯತೆಗಳಿವೆ. ವಿದೇಶಿಯ ಭಾಷೆಗಳಿಂದ ಸಂಗಾತಿ ಸಂಪಾದನೆ ಮಾಡಬ ಹುದು. ಕೃಷಿಯಿಂದ ಅನಿರೀಕ್ಷಿತ ಲಾಭ ಬರುವ ಸಾಧ್ಯತೆ ಇದೆ. ಹಿರಿಯರನ್ನು ಹೊಂದಿಕೊಂಡು ಹೋಗುವುದು ನಿಮಗೆ ಒಳಿತು. ವೃತ್ತಿಯಲ್ಲಿ ಶತ್ರುಗಳನ್ನು ಹೆಚ್ಚು ಮಾಡಿಕೊಳ್ಳುವಿರಿ.
ತುಲಾ
( ಚಿತ್ತಾ 3 4 ಸ್ವಾತಿ ವಿಶಾಖ 1 2 3) ವ್ಯವಹಾರಿಕ ಬುದ್ಧಿಯನ್ನು ಹೆಚ್ಚು ಮಾಡಿಕೊಳ್ಳುವಿರಿ. ಆದಾಯವನ್ನು ಸ್ವಲ್ಪ ಹೆಚ್ಚು ಮಾಡಿಕೊಳ್ಳುವಿರಿ. ಸಂಗಾತಿಯ ಜೊತೆ ಕೂಡಿ ಕೆಲ ವ್ಯವಹಾರಗಳನ್ನುಮಾಡಿ ಆದಾಯ ಹೆಚ್ಚಿಸಿ ಕೊಳ್ಳುವಿರಿ. ಲಲಿತ ಕಲೆಯನ್ನು ಈಗ ಅಭ್ಯಾಸ ಮಾಡುವವರಿಗೆ ಹೆಚ್ಚಿನ ಯಶಸ್ಸಿರುತ್ತದೆ. ನಿಮ್ಮ ಕೆಲವೊಂದು ವಿವಾದಗಳು ಹಿರಿಯರನ್ನು ಸ್ವಲ್ಪ ಮುಜುಗರಕ್ಕೆ ಈಡು ಮಾಡುತ್ತವೆ. ಕೃಷಿಯಲ್ಲಿ ಹೆಚ್ಚು ಆಸಕ್ತಿ ತೋಳುವಿರಿ. ವಾಯುಯಾನ ಕ್ಷೇತ್ರವನ್ನು ಅಭ್ಯಾಸ ಮಾಡುತ್ತಿರುವವರಿಗೆ ಯಶಸ್ಸು ಇರುತ್ತದೆ. ವಿದೇಶಿ ಕಂಪನಿಗಳಲ್ಲಿ ಹೂಡಿದ ಹಣ ಮೋಸವಾಗಬಹುದು. ಸಂಗಾತಿ ಕಡೆಯವರಿಂದ ನಿಮಗೆ ಅನುಕೂಲವಿರುತ್ತದೆ. ತಾಯಿ ನಿಮ್ಮ ಮೇಲೆ ಸ್ವಲ್ಪಮುನಿಸಿ ಕೊಳ್ಳುವರು.
ವೃಶ್ಚಿಕ
( ವಿಶಾಖಾ 4 ಅನುರಾಧ ಜೇಷ್ಠ) ನಿಮ್ಮ ವ್ಯಕ್ತಿತ್ವದಲ್ಲಿ ಹೆಚ್ಚು ಅಲಂಕಾರಿ ಕತೆಯನ್ನು ಅಳವಡಿಸಿಕೊಳ್ಳುವಿರಿ. ಆದಾಯ ದಲ್ಲಿ ಸುಧಾರಣೆಯನ್ನು ಕಾಣಬಹುದು. ನಿಮ್ಮ ಕೆಲಸ ಕಾರ್ಯಗಳಿಗೆ ತಾಯಿಯ ಸಹಕಾರ ಸಂಪೂರ್ಣವಾಗಿ ಸಿಗುತ್ತದೆ. ಕೃಷಿಯ ಬಗ್ಗೆ ಅತಿ ಯಾದ ಆಸಕ್ತಿ ಬೆಳೆದು ಅದರಲ್ಲಿ ಹೆಚ್ಚು ಸಾಧಿ ಸಲು ಮುನ್ನುಗ್ಗುವಿರಿ. ಕೆಲವರ ವಿದೇಶಿ ಓದಿನ ಹಂಬಲ ಈಗ ಈಡೇರುತ್ತದೆ. ಹರಿತವಾದ ವಸ್ತು ಗಳನ್ನು ಉಪಯೋಗಿಸುವಾಗ ಎಚ್ಚರದಿಂದಿರಿ. ಸಂಬಂಧಿಕರಿಂದ ಮೋಸ ಹೋಗುವ ಸಾಧ್ಯತೆ ಇದೆ ಎಚ್ಚರ ವಹಿಸಿರಿ. ಸಂಗಾತಿಯಿಂದ ಧನ ಸಹಾಯವನ್ನು ನಿರೀಕ್ಷೆ ಮಾಡಬಹುದು. ನಮ್ಮ ಧಾರ್ಮಿಕ ವೃತ್ತಿಯನ್ನು ಮಾಡುವವರಿಗೆ ಹೆಚ್ಚು ಅಭಿವೃದ್ಧಿ ಇರುತ್ತದೆ.
ಧನು
( ಮೂಲ ಪೂರ್ವಾಷಾಢ ಉತ್ತರಾಷಾಢ 1 ) ಮನಸ್ಸಿನಲ್ಲಿ ಗೊಂದಲಗಳಿದ್ದರೂ ಸಹ ದೃಢತೆಯನ್ನು ಸಾಧಿಸುವಿರಿ. ಆದಾಯವು ನಿಮ್ಮ ನಿರೀಕ್ಷೆಯನ್ನು ತಲುಪಬಹುದು. ನಿಮ್ಮ ವಿರುದ್ಧ ತಲೆ ಎತ್ತುವ ಶತ್ರುಗಳನ್ನು ಅಲ್ಲೇ ಮಟ್ಟ ಹಾಕಬ ಹುದು. ವಿದೇಶಿ ವ್ಯವಹಾರಮಾಡುವವ ರಿಗೆ ಆದಾಯ ಹೆಚ್ಚುತ್ತದೆ. ಸೈನ್ಯದಲ್ಲಿರುವವರಿಗೆ ಹೆಚ್ಚಿನ ಸ್ಥಾನ ಸಿಗುವ ಸಾಧ್ಯತೆಗಳಿವೆ. ಈಗ ಎಲೆಕ್ಟ್ರಾನಿಕ್ಸ್ ವಿದ್ಯೆಯನ್ನು ಓದುತ್ತಿರುವವರಿಗೆ ಪ್ರಗತಿ ಇರುತ್ತದೆ. ಉದರ ಸಂಬಂಧಿ ದೋಷ ಗಳು ಮನೆಯ ವೈದ್ಯದಿಂದ ಸರಿ ಹೋಗುತ್ತವೆ. ಬಂಧುಗಳಿಂದ ನಿಮ್ಮ ವ್ಯವಹಾರಗಳಿಗೆ ಈಗ ಸಹಾಯವಾಗುತ್ತದೆ. ಉದ್ಯೋಗ ಸ್ಥಳದಲ್ಲಿ ಉದ್ಯೋಗಿಗಳಿಂದ ಸಹಾಯಗಳು ದೊರೆಯುತ್ತವೆ. ಹಿರಿಯರ ವ್ಯಾಪಾರ ವ್ಯವಹಾರಗಳು ನಿಮಗೆ ಸಿಗುತ್ತವೆ.
ಮಕರ
( ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2) ಮನಸ್ಸು ಪ್ರಪಲತೆಯಿಂದ ಕೂಡಿ ರುತ್ತದೆ. ಸಾಧಿಸುವ ಛಲ ಮೈದುಂಬಿರುತ್ತದೆ. ಆದಾಯಕಡಿಮೆ ಇದ್ದರೂನಿರ್ವಹಣೆಸರಿಯಾಗಿ ರುತ್ತದೆ. ನಿಮ್ಮ ಕಾರ್ಯಗಳಿಗೆ ಅಡ್ಡಿಪಡಿಸುವವ ರಿಗೆ ಎಚ್ಚರಿಕೆ ನೀಡುವಿರಿ. ಭೂಮಿ ವ್ಯವಹಾರ ದಲ್ಲಿ ಲಾಭವಿಲ್ಲದಿದ್ದರೂ ನಷ್ಟವಿಲ್ಲ. ಮಕ್ಕಳಲ್ಲಿ ಉತ್ತಮವಾದ ಪ್ರಗತಿಯನ್ನು ಕಾಣಬಹುದು. ಕೃಷಿಯಿಂದ ಲಾಭವಿಲ್ಲದಿದ್ದರೂ ನಷ್ಟವಿಲ್ಲ. ಬಂಧುಗಳೊಡನೆ ವ್ಯವಹಾರ ಮಾಡುವಾಗ ಸಾಕಷ್ಟು ಎಚ್ಚರವಾಗಿರಿ. ಅನಿರೀಕ್ಷಿತ ಪ್ರೇಮ ನಿಮ್ಮನ್ನು ಆವರಿಸಬಹುದು. ಪ್ರಸೂತಿ ತಜ್ಞರಿಗೆ ಬೇಡಿಕೆ ಹೆಚ್ಚುತ್ತದೆ. ಪುಸ್ತಕ ವ್ಯಾಪಾರಿಗಳಿಗೆ ಹೆಚ್ಚು ಲಾಭವಿರುತ್ತದೆ. ತಾಯಿ ಆರೋಗ್ಯದಲ್ಲಿ ಸುಧಾರಣೆಯನ್ನು ಕಾಣಬಹುದು.
ಕುಂಭ
( ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3) ಎಷ್ಟೇ ಒತ್ತಡ ಬಂದರೂ ಸಹ ಹಿರಿಯರು ನ್ಯಾಯಮಾರ್ಗವನ್ನು ಬಿಡುವುದಿಲ್ಲ. ಆದಾಯವು ಸಾಮಾನ್ಯ ಗತಿಯಲ್ಲಿರುತ್ತದೆ ವಿದೇಶಿ ಹಣದ ವ್ಯವಹಾರ ಮಾಡುವವರಿಗೆ ಲಾಭವಿರುತ್ತದೆ. ನಿಮ್ಮ ಕೆಲಸಕಾರ್ಯಗಳಿಗೆ ಬಂಧುಗಳಿಂದ ಅಡಿ ಬಂದರೂ ಸಹ ಅದು ನಿಮಗೆ ವರವಾಗಿ ಪರಿಣಮಿಸುತ್ತದೆ. ಭೂಮಿ ಮೇಲೆ ಹಣಹೂಡುವುದು ಲಾಭದಾಯಕವಾಗಿ ರುತ್ತದೆ. ಕಟ್ಟು ಮಸ್ತಾದ ದೇಹವನ್ನು ಹೊಂದ ಬೇಕೆನ್ನುವವರಿಗೆ ಈಗ ಅವಕಾಶಗಳು ದೊರೆ ಯುತ್ತವೆ. ಕೃಷಿ ಉತ್ಪನ್ನಗಳನ್ನು ಮಾರುವವರಿಗೆ ಲಾಭ ಹೆಚ್ಚುತ್ತದೆ. ಶೀತ ಬಾದೆ ಕೆಲವರನ್ನು ಕಾಡ ಬಹುದು. ಸಂಗಾತಿಯ ಸರಿಯಾದ ಸಲಹೆಗಳು ನಿಮಗೆ ಸರ್ಕಾರದ ಮಟ್ಟದಲ್ಲಿ ಲಾಭವನ್ನು ತರುತ್ತವೆ.
ಮೀನ
( ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ) ಅತಿಯಾದ ಸ್ವಾಭಿಮಾನ ನಿಮ್ಮನ್ನು ಆವರಿಸಿರುತ್ತದೆ. ನಿಮ್ಮ ಮಾತಿನಿಂದಲೇ ನಿಮಗೆ ಅಪಕೀರ್ತಿ ಬರುವ ಸಾಧ್ಯತೆ ಇದೆ. ಆದಾಯವು ಮಧ್ಯಮ ಗತಿಯಲ್ಲಿರುತ್ತದೆ. ಹಿರಿಯರಮೂಲಕ ಕೆಲವೊಂದು ಸಮಸ್ಯೆಗಳನ್ನು ಈಗ ಬಗೆಹರಿಸಿ ಕೊಳ್ಳಲು ಪ್ರಯತ್ನ ಮಾಡುವಿರಿ. ಕೃಷಿ ಭೂಮಿ ಕೊಳ್ಳುವ ಯೋಗವಿದೆ. ವಿದ್ಯಾರ್ಥಿಗಳಿಗೆ ಹೆಚ್ಚು ಫಲಿತಾಂಶ ಪಡೆಯುವ ಯೋಗವಿದೆ. ಮಕ್ಕಳ ಬಗ್ಗೆ ದ್ವಂದ್ವ ವಾರ್ತೆಗಳನ್ನು ಕೇಳುವಿರಿ. ನಿಮ್ಮ ಸಂಗಾತಿಗೆ ತಲೆನೋವು ಕಾಣಿಸಬಹುದು. ಸಂಗಾತಿಯ ಸಹಕಾರದಿಂದಸರ್ಕಾರಿಕಚೇರಿಯ ಕೆಲಸ ಕಾರ್ಯಗಳಲ್ಲಿ ಅನುಕೂಲವಾಗುವುದು. ಹಿರಿಯರ ಆಸ್ತಿಯಲ್ಲಿ ಸ್ವಲ್ಪಭಾಗ ನಿಮಗೆ ದೊರೆ ಯಬಹುದು.
ADVERTISEMENT
ADVERTISEMENT