<p><strong>ಬಳ್ಳಾರಿ:</strong> ಸಂಡೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ಸಿಗದೆ ಮುನಿಸಿಕೊಂಡಿದ್ದ ದಿವಾಕರ್ ಅವರಿಗೆ ಪಕ್ಷದ ರಾಜ್ಯ ಕಾರ್ಯದರ್ಶಿ ಹುದ್ದೆ ನೀಡಿ, ಬಂಡಾಯ ಶಮನ ಮಾಡುವಲ್ಲಿ ಬಿಜೆಪಿ ನಾಯಕರು ಯಶಸ್ವಿಯಾಗಿದ್ದಾರೆ. </p>.<p>‘ದಿವಾಕರ್ ಅವರು ಪಕ್ಷದ ರಾಜ್ಯ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ. ಅವರು ಪಕ್ಷದಲ್ಲೇ ಉಳಿಯುತ್ತಾರೆ’ ಎಂದು ಬಳ್ಳಾರಿಯಲ್ಲಿ ಮಂಗಳವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಬಿಜೆಪಿ ಶಾಸಕ ಜನಾರ್ದನ ರೆಡ್ಡಿ ಘೋಷಿಸಿದರು.</p>.<p>ಖಳನಿಗೆ ಹೋಲಿಕೆ: ‘ಬಾಹುಬಲಿ’ ಸಿನಿಮಾದಲ್ಲಿ ರಾಜನನ್ನಾಗಿ ಒಬ್ಬನನ್ನು, ಸೇನಾಧಿಪತಿಯಾಗಿ ಪ್ರಭಾಸ್ಗೆ ಘೋಷಣೆ ಮಾಡಲಾಗುತ್ತದೆ. ರಾಜನನ್ನಾಗಿ ಘೋಷಣೆ ಮಾಡಿದವರ ಬಗ್ಗೆ ಸ್ಪಂದನೆಯೇ ಬರುವುದಿಲ್ಲ. ಪ್ರಭಾಸ್ ಸೇನಾಧಿಪತಿ ಎಂದು ಘೋಷಣೆಯಾದ ತಕ್ಷಣ ಸ್ಪಂದನೆ ಸಿಗುತ್ತದೆ. ಅದೇ ಪರಿಸ್ಥಿತಿ ದಿವಾಕರ್ಗೆ ಬಂದಿದೆ’ ಎಂದ ಜನಾರ್ದನ ರೆಡ್ಡಿ ತಿಳಿಸಿದರು.</p>.<p>‘ಯಡಿಯೂರಪ್ಪ ಸೈಕಲ್, ಬಸ್ನಲ್ಲಿ ತಿರುಗಿ ಪಕ್ಷ ಸಂಘಟಿಸಿ 66ನೇ ವಯಸ್ಸಿನಲ್ಲಿ ಮುಖ್ಯಮಂತ್ರಿ ಆದರು. ನನಗೆ ಈಗಿನ್ನೂ 57 ವರ್ಷ ವಯಸ್ಸು. ಆ ಲೆಕ್ಕದಲ್ಲಿ ನನಗೆ ಇನ್ನೂ 9 ರಿಂದ 10 ವರ್ಷ ಸಮಯವಿದೆ’ ಎಂದು ಅವರು ಮುಖ್ಯಮಂತ್ರಿ ಆಗುವ ಇಂಗಿತ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಳ್ಳಾರಿ:</strong> ಸಂಡೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ಸಿಗದೆ ಮುನಿಸಿಕೊಂಡಿದ್ದ ದಿವಾಕರ್ ಅವರಿಗೆ ಪಕ್ಷದ ರಾಜ್ಯ ಕಾರ್ಯದರ್ಶಿ ಹುದ್ದೆ ನೀಡಿ, ಬಂಡಾಯ ಶಮನ ಮಾಡುವಲ್ಲಿ ಬಿಜೆಪಿ ನಾಯಕರು ಯಶಸ್ವಿಯಾಗಿದ್ದಾರೆ. </p>.<p>‘ದಿವಾಕರ್ ಅವರು ಪಕ್ಷದ ರಾಜ್ಯ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ. ಅವರು ಪಕ್ಷದಲ್ಲೇ ಉಳಿಯುತ್ತಾರೆ’ ಎಂದು ಬಳ್ಳಾರಿಯಲ್ಲಿ ಮಂಗಳವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಬಿಜೆಪಿ ಶಾಸಕ ಜನಾರ್ದನ ರೆಡ್ಡಿ ಘೋಷಿಸಿದರು.</p>.<p>ಖಳನಿಗೆ ಹೋಲಿಕೆ: ‘ಬಾಹುಬಲಿ’ ಸಿನಿಮಾದಲ್ಲಿ ರಾಜನನ್ನಾಗಿ ಒಬ್ಬನನ್ನು, ಸೇನಾಧಿಪತಿಯಾಗಿ ಪ್ರಭಾಸ್ಗೆ ಘೋಷಣೆ ಮಾಡಲಾಗುತ್ತದೆ. ರಾಜನನ್ನಾಗಿ ಘೋಷಣೆ ಮಾಡಿದವರ ಬಗ್ಗೆ ಸ್ಪಂದನೆಯೇ ಬರುವುದಿಲ್ಲ. ಪ್ರಭಾಸ್ ಸೇನಾಧಿಪತಿ ಎಂದು ಘೋಷಣೆಯಾದ ತಕ್ಷಣ ಸ್ಪಂದನೆ ಸಿಗುತ್ತದೆ. ಅದೇ ಪರಿಸ್ಥಿತಿ ದಿವಾಕರ್ಗೆ ಬಂದಿದೆ’ ಎಂದ ಜನಾರ್ದನ ರೆಡ್ಡಿ ತಿಳಿಸಿದರು.</p>.<p>‘ಯಡಿಯೂರಪ್ಪ ಸೈಕಲ್, ಬಸ್ನಲ್ಲಿ ತಿರುಗಿ ಪಕ್ಷ ಸಂಘಟಿಸಿ 66ನೇ ವಯಸ್ಸಿನಲ್ಲಿ ಮುಖ್ಯಮಂತ್ರಿ ಆದರು. ನನಗೆ ಈಗಿನ್ನೂ 57 ವರ್ಷ ವಯಸ್ಸು. ಆ ಲೆಕ್ಕದಲ್ಲಿ ನನಗೆ ಇನ್ನೂ 9 ರಿಂದ 10 ವರ್ಷ ಸಮಯವಿದೆ’ ಎಂದು ಅವರು ಮುಖ್ಯಮಂತ್ರಿ ಆಗುವ ಇಂಗಿತ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>