‘ನನ್ನ ಪತಿ ಬಿಇ ಪಾಸ್ ಮಾಡಿದ್ದೇನೆ, ಎಂಜಿನಿಯರ್ ಇದ್ದೇನೆ ಎಂದು ಸುಳ್ಳು ಹೇಳಿ ಮದುವೆಯಾದ. ಆದರೆ, ಅವನು ಈಗ ಯಾವುದೋ ಕೋರ್ಸ್ ಕಲಿಯಲು ಬೆಂಗಳೂರಿಗೆ ಹೋಗಿದ್ದಾನೆ. ಮದುವೆ ಆದಾಗಿನಿಂದ ಇಲ್ಲಿಯವರೆಗೆ ₹ 7 ಲಕ್ಷ ನಗದು, ಚಿನ್ನಾಭರಣಗಳನ್ನು ವರದಕ್ಷಿಣೆ ನೀಡಿದ್ದೇವೆ. ಆದರೂ ವರದಕ್ಷಿಣೆಗಾಗಿ ದಿನವೂ ಹೊಡೆದು– ಬಡಿದು ಕಿರುಕುಳ ನೀಡುತ್ತಿದ್ದಾರೆ. ಈಗ ಹಣಕ್ಕಾಗಿಯೇ ನನ್ನ ಮನೆಯಿಂದ ಹೊರಹಾಕಿದ್ದಾರೆ’ ಎಂದು ಮಹಿಳೆ ಆರೋಪಿಸಿದ್ದಾರೆ.