‘ಸಿದ್ದರಾಮಯ್ಯ ವಿರುದ್ಧ ಮುಡಾ ದಾಖಲೆಗಳನ್ನು ಅವರ ಪಕ್ಷದವರೇ ನೀಡಿದ್ದಾರೆ. ಅವರಲ್ಲಿರುವ ಒಳಜಗಳ ಇಂದು ರಾಜೀನಾಮೆ ಪಡೆಯುವ ಹಂತಕ್ಕೆ ಬಂದಿದೆ. ಮುಖ್ಯಮಂತ್ರಿಯಾಗಲು ಕಾಂಗ್ರೆಸ್ನಲ್ಲಿ ಹಪಾಹಪಿ ಜೋರಾಗಿದೆ. ಇಂದು ಸಿದ್ದರಾಮಯ್ಯ ಅವರೊಂದಿಗೆ ಯಾರೂ ಇಲ್ಲ. ಇಷ್ಟು ದಿನ ಅವರ ಹಿಂದೆ ಇದ್ದವರೆಲ್ಲ ಈಗ ಸಿ.ಎಂ ಕುರ್ಚಿಗಾಗಿ ಓಡಾಟ ನಡೆಸಿದ್ದಾರೆ. ಸಿದ್ದರಾಮಯ್ಯವರನ್ನು ಮುಗಿಸುವ ಷಡ್ಯಂತ್ರ ಕಾಂಗ್ರೆಸನಲ್ಲೇ ನಡೆದಿದೆ, ವಿರೋಧ ಪಕ್ಷದಲ್ಲಿ ಅಲ್ಲ’ ಎಂದು ಹೇಳಿದರು.