ಮಹಾತ್ಮ ಗಾಂಧೀಜಿ, ಜವಾಹರಲಾಲ್ ನೆಹರೂ, ಡಾ.ಬಿ. ಆರ್. ಅಂಬೇಡ್ಕರ್, ಗೋಪಾಲಕೃಷ್ಣ ಗೋಖಲೆ, ಜಾನ್ಸಿರಾಣಿ ಲಕ್ಷ್ಮಿಬಾಯಿ, ಖಾನ್ ಅಬ್ದುಲ್ ಗಫರ್ ಖಾನ್, ಗೋವಿಂದ ವಲ್ಲಭ ಪಂಥ್, ಮದನಮೋಹನ ಮಾಳವೀಯ, ಕಸ್ತೂರಿ ಬಾ ಗಾಂಧಿ, ಒನಕೆ ಓಬ್ಬವ್ವ, ಬಲವಂತ ಫಡಕೆ, ಸರೋಜಿನಿ ನಾಯ್ದು ಹೀಗೆ 40 ಜನ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳನ್ನು ದೇವಸ್ಥಾನದಲ್ಲಿ ಹಾಕಲಾಗಿದೆ. ಅಂದಾಜು 100 ರಾಷ್ಟ್ರಧ್ವಜಗಳಿಂದ ದೇವಸ್ಥಾನದ ಒಳಗಿನ ಭಾಗವನ್ನು ಅಲಂಕಾರ ಮಾಡಿ, ಭಾರತ ನಕಾಶೆ ಬಿಡಿಸಲಾಗಿದೆ.