ಎಎಸ್ಐ ಸಮೀಕ್ಷಾ ತಂಡವನ್ನು ಎರಡಾಗಿ ವಿಭಜಿಸಿರುವುದರ ವಿಚಾರವಾಗಿಯೂ ಸಮದ್ ಅವರು ಕಳವಳ ವ್ಯಕ್ತಪಡಿಸಿದರು. ‘ಮಸೀದಿ ಅಭಿವೃದ್ಧಿ ಸಮಿತಿಯ ಪರ ಪ್ರತಿನಿಧಿ ನಾನು ಮಾತ್ರ. ಸಮೀಕ್ಷೆ ನಡೆಸುತ್ತಿರುವ ಎಎಸ್ಐ ತಂಡವು ಒಂದು ಕಡೆ ಮಾತ್ರ ಗಮನ ನೀಡಿ ಕೆಲಸ ಮಾಡಬೇಕು, ತಂಡಗಳಲ್ಲಿ ಆ ಕೆಲಸ ಮಾಡಬಾರದು’ ಎಂದು ಸಮದ್ ಆಗ್ರಹಿಸಿದರು.