‘ಮಗಳನ್ನು ಹೊರಗಡೆ ಬಿಟ್ಟು ಮಠದ ಒಳಗೆ ಹೋಗಿ ಹಿರಿಯ ಸ್ವಾಮೀಜಿಯೊಬ್ಬರನ್ನು ಭೇಟಿ ಮಾಡಿ, ‘ಯಾಕೆ ನೀವು ಗಾಲಿ ಕುರ್ಚಿಯನ್ನು ಮಠದ ಒಳಗೆ ಬಿಡುವುದಿಲ್ಲ’ ಎಂದು ಕೇಳಿದೆ. ಅದಕ್ಕೆ ಅವರು, ‘ಗಾಲಿಕುರ್ಚಿಯು ರಸ್ತೆಯಲ್ಲಿ ತಿರುಗಾಡಿರುತ್ತದೆ. ಅದರ ಗಾಲಿಗಳಿಗೆ ಕೊಳಕು, ಗಲೀಜು ಮೆತ್ತಿಕೊಂಡಿರುತ್ತದೆ. ಅದನ್ನು ಪವಿತ್ರ ಸ್ಥಳವಾದ ಮಠದೊಳಗೆ ಬಿಟ್ಟುಕೊಳ್ಳುವುದು ಹೇಗೆ?’ ಎಂದು ಪ್ರಶ್ನಿಸಿದರು. ಆಗ ನಾನು ಮೌನವಾಗಿ ಮಠದಿಂದ ಹೊರ ಬಂದೆ. ಮಠದ ಹೊರ ಆವರಣದಿಂದ ಮನೆಗೆ ಹೋಗುವಾಗ ನನ್ನ ಮಗಳ ಕಣ್ಣುಗಳಿಂದ ನೀರು ಬರುತ್ತಿತ್ತು’ ಎಂದು ಬರ್ಮನ್ ಬರೆದುಕೊಂಡಿದ್ದಾರೆ.