‘ಗೃಹ ಸಚಿವರ ಹಿಂದಿನ ಹೇಳಿಕೆಗೂ, ಇವತ್ತಿನ ಹೇಳಿಕೆಗೂ ಬಹಳಷ್ಟು ವ್ಯತ್ಯಾಸವಿದೆ. ಆವತ್ತು ಅವರು ದೂರದಾರರ ವ್ಯಕ್ತಿತ್ವವನ್ನೇ ಅನಾವರಣಗೊಳಿಸಿದ್ದರು. ಈಗ ಅಗತ್ಯವಿದ್ದರೆ ಯಡಿಯೂರಪ್ಪ ಅವರನ್ನು ಬಂಧಿಸಲು ಸಿದ್ದ ಎಂದು ಹೇಳಿದ್ದಾರೆ. ಸರ್ಕಾರದ ನಿಲುವು ಬದಲಾಗಲು ಕಾರಣವೇನು? ಲೋಕಸಭಾ ಚುನಾವಣೆಯಲ್ಲಿನ ಸೋಲು ಕಾರಣವೇ? ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ತವರು ಜಿಲ್ಲೆಗಳಲ್ಲೇ ಸೋತಿದ್ದು ಕಾರಣ ಇರಬಹುದೇ’ ಎಂದು ಪ್ರಶ್ನಿಸಿದರು.