<p><strong>ಚೆನ್ನೈ:</strong> ಕೊಯಮತ್ತೂರಿನಲ್ಲಿ ಐಎಸ್ ಪ್ರೇರಿತ ಕಾರ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್ಐಎ) ಶನಿವಾರ ತಮಿಳುನಾಡಿನ 27 ಸ್ಥಳಗಳಲ್ಲಿ ಶೋಧ ನಡೆಸಿದ್ದು, 15 ಜನರನ್ನು ಬಂಧಿಸಿದೆ.</p>.<p>ಚೆನ್ನೈ, ತಿರುಚಿರಾಪಳ್ಳಿ, ಮಧುರೈ, ತಿರುನೆಲ್ವೇಲಿ ಮತ್ತು ಕೊಯಮತ್ತೂರು ಜಿಲ್ಲೆಯ ವಿವಿಧೆಡೆ ಐಎಸ್ನೊಂದಿಗೆ ಸಂಪರ್ಕ ಹೊಂದಿರುವ ಶಂಕಿತರ ನೆಲೆಗಳ ಮೇಲೆ ದಾಳಿ ನಡೆದಿದೆ ಎಂದು ಮೂಲಗಳು ತಿಳಿಸಿವೆ.</p>.<p>ಬಂಧಿತನನ್ನು ಕೊಯಮತ್ತೂರು ನಿವಾಸಿ ತಹನಾಸೀರ್ ಎಂದು ಗುರುತಿಸಲಾಗಿದೆ.</p>.<p>‘ಕೊಯಮತ್ತೂರಿನ ಉಕ್ಕಡಂನ ಈಶ್ವರನ್ ಕೋವಿಲ್ ಬೀದಿಯಲ್ಲಿರುವ ಪುರಾತನ ಅರುಲ್ಮಿಗು ಕೊಟ್ಟೈ ಸಂಗಮೇಶ್ವರ ದೇಗುಲದ ಬಳಿ ಭಯೋತ್ಪಾದಕ ದಾಳಿ ನಡೆಸಲು ಜಮೇಶಾ ಮುಬೀನ್ ಮತ್ತು ಮೊಹಮ್ಮದ್ ತೌಫಿಕ್ ಜೊತೆ ಈತನು ಸಂಚಿನಲ್ಲಿ ಭಾಗಿಯಾಗಿದ್ದ’ ಎಂದು ಎನ್ಐಎ ಹೇಳಿದೆ.</p>.<p>‘ಕಚ್ಚಾಬಾಂಬ್ ಇದ್ದ ವಾಹನವನ್ನು ಜಮೇಶಾ ಚಲಾಯಿಸಿದ್ದ. ಈತನೊಂದಿಗೆ ತಹನಾಸೀರ್ ಮತ್ತು ತೌಫಿಕ್ ನಿಕಟ ಸಂಬಂಧ ಹೊಂದಿದ್ದರು’ ಎಂದು ತನಿಖಾ ಸಂಸ್ಥೆ ತಿಳಿಸಿದೆ.</p>.<p>ಆತ್ಮಾಹುತಿ ಬಾಂಬರ್ ಎಂದು ಗುರುತಿಸಲ್ಪಟ್ಟಿದ್ದ ಶಂಕಿತ ಜಮೇಶಾ ಮುಬೀನಾ, 2022ರ ಅಕ್ಟೋಬರ್ನಲ್ಲಿ ಕಾರ್ನಲ್ಲಿ ಕಚ್ಚಾಬಾಂಬ್ ಸಾಗಿಸುವಾಗ ಸ್ಫೋಟಗೊಂಡು ಮೃತಪಟ್ಟಿದ್ದ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚೆನ್ನೈ:</strong> ಕೊಯಮತ್ತೂರಿನಲ್ಲಿ ಐಎಸ್ ಪ್ರೇರಿತ ಕಾರ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್ಐಎ) ಶನಿವಾರ ತಮಿಳುನಾಡಿನ 27 ಸ್ಥಳಗಳಲ್ಲಿ ಶೋಧ ನಡೆಸಿದ್ದು, 15 ಜನರನ್ನು ಬಂಧಿಸಿದೆ.</p>.<p>ಚೆನ್ನೈ, ತಿರುಚಿರಾಪಳ್ಳಿ, ಮಧುರೈ, ತಿರುನೆಲ್ವೇಲಿ ಮತ್ತು ಕೊಯಮತ್ತೂರು ಜಿಲ್ಲೆಯ ವಿವಿಧೆಡೆ ಐಎಸ್ನೊಂದಿಗೆ ಸಂಪರ್ಕ ಹೊಂದಿರುವ ಶಂಕಿತರ ನೆಲೆಗಳ ಮೇಲೆ ದಾಳಿ ನಡೆದಿದೆ ಎಂದು ಮೂಲಗಳು ತಿಳಿಸಿವೆ.</p>.<p>ಬಂಧಿತನನ್ನು ಕೊಯಮತ್ತೂರು ನಿವಾಸಿ ತಹನಾಸೀರ್ ಎಂದು ಗುರುತಿಸಲಾಗಿದೆ.</p>.<p>‘ಕೊಯಮತ್ತೂರಿನ ಉಕ್ಕಡಂನ ಈಶ್ವರನ್ ಕೋವಿಲ್ ಬೀದಿಯಲ್ಲಿರುವ ಪುರಾತನ ಅರುಲ್ಮಿಗು ಕೊಟ್ಟೈ ಸಂಗಮೇಶ್ವರ ದೇಗುಲದ ಬಳಿ ಭಯೋತ್ಪಾದಕ ದಾಳಿ ನಡೆಸಲು ಜಮೇಶಾ ಮುಬೀನ್ ಮತ್ತು ಮೊಹಮ್ಮದ್ ತೌಫಿಕ್ ಜೊತೆ ಈತನು ಸಂಚಿನಲ್ಲಿ ಭಾಗಿಯಾಗಿದ್ದ’ ಎಂದು ಎನ್ಐಎ ಹೇಳಿದೆ.</p>.<p>‘ಕಚ್ಚಾಬಾಂಬ್ ಇದ್ದ ವಾಹನವನ್ನು ಜಮೇಶಾ ಚಲಾಯಿಸಿದ್ದ. ಈತನೊಂದಿಗೆ ತಹನಾಸೀರ್ ಮತ್ತು ತೌಫಿಕ್ ನಿಕಟ ಸಂಬಂಧ ಹೊಂದಿದ್ದರು’ ಎಂದು ತನಿಖಾ ಸಂಸ್ಥೆ ತಿಳಿಸಿದೆ.</p>.<p>ಆತ್ಮಾಹುತಿ ಬಾಂಬರ್ ಎಂದು ಗುರುತಿಸಲ್ಪಟ್ಟಿದ್ದ ಶಂಕಿತ ಜಮೇಶಾ ಮುಬೀನಾ, 2022ರ ಅಕ್ಟೋಬರ್ನಲ್ಲಿ ಕಾರ್ನಲ್ಲಿ ಕಚ್ಚಾಬಾಂಬ್ ಸಾಗಿಸುವಾಗ ಸ್ಫೋಟಗೊಂಡು ಮೃತಪಟ್ಟಿದ್ದ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>