<p><strong>ನವದೆಹಲಿ:</strong> ‘ಶಿವಲಿಂಗದ ಮೇಲೆ ಚೇಳು ಕೂತಿದೆ. ಅದನ್ನು ಕೈಯಲ್ಲಿ ಹಿಡಿದು ಎಸೆಯಲೂ ಆಗದು, ಚಪ್ಪಲಿಯಲ್ಲಿ ಹೊಡೆಯಲೂ ಆಗದು’ ಎಂಬ ಹೇಳಿಕೆಗೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ ದಾಖಲಿಸಿದ್ದ ಪ್ರಕರಣದಲ್ಲಿ, ಸಂಸದ ಶಶಿ ತರೂರ್ ವಿರುದ್ಧದ ಮಾನಹಾನಿ ಪ್ರಕರಣ ಕೈಬಿಡಲು ದೆಹಲಿ ಹೈಕೋರ್ಟ್ ನಿರಾಕರಿಸಿದೆ.</p><p>ಮಾನನಷ್ಟ ಮೊಕದ್ದಮೆ ಪ್ರಶ್ನಿಸಿ ತರೂರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಅನೂಪ್ ಕುಮಾರ್ ಮೆಂಡಿರತ್ತ ಅವರಿದ್ದ ಪೀಠವು, ಪ್ರಕರಣ ಕೈಬಿಡಲು ನಿರಾಕರಿಸಿತು.</p><p>‘ಅನಾಮದೇಯ ಆರ್ಎಸ್ಎಸ್ ಮುಖಂಡರೊಬ್ಬರು ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ಶಿವಲಿಂಗದ ಮೇಲೆ ಕುಳಿತ ಚೇಳು’ ಎಂದು ಹೋಲಿಕೆ ಮಾಡಿದ್ದಾರೆ’ ಎಂದು 2018ರಲ್ಲಿ ಹೇಳಿಕೆ ನೀಡಿದ್ದ ತರೂರ್, ಅದನ್ನು ತಮ್ಮದೇ ಆದ ಧಾಟಿಯಲ್ಲಿ ವಿವರಿಸಿದ್ದರು.</p><p>ಈ ಕುರಿತು 2018ರ ನ. 2ರಂದು ಬಿಜೆಪಿ ಮುಖಂಡ ರಾಜೀವ್ ಬಬ್ಬರ್ ಅವರು ಮಾನಹಾನಿ ಪ್ರಕರಣವನ್ನು ದಾಖಲಿಸಿದರು. ‘ನಾನೊಬ್ಬ ಭಗವಾನ್ ಶಿವನ ಭಕ್ತನಾಗಿದ್ದು, ತರೂರ್ ಅವರು ಅಸಂಖ್ಯಾತ ಶಿವ ಭಕ್ತರ ಭಾವನೆಗಳಿಗೆ ತಮ್ಮ ಹೇಳಿಕೆ ಮೂಲಕ ಧಕ್ಕೆ ತಂದಿದ್ದಾರೆ’ ಎಂದು ಆರೋಪಿಸಿದ್ದರು. </p><p>ಸೆಶನ್ಸ್ ನ್ಯಾಯಾಲಯದಲ್ಲಿ ದಾಖಲಾದ ಕ್ರಿಮಿನಲ್ ಪ್ರಕರಣ ರದ್ಧತಿ ಕೋರಿ ತರೂರ್ ಅವರು 2020ರಲ್ಲಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಕ್ರಿಮಿನಲ್ ಮೊಕ್ಕದಮೆಗೆ ಹೈಕೋರ್ಟ್ ತಡೆ ನೀಡಿತ್ತು. </p><p>ವಿಚಾರಣೆಯನ್ನು ಮುಂದುವರಿಸಿದ ಹೈಕೋರ್ಟ್, ‘ಈ ಹಂತದಲ್ಲಿ ಪ್ರಕರಣ ಕೈಬಿಡಲು ಯಾವುದೇ ಆಧಾರವಿಲ್ಲ. ನ್ಯಾಯದ ದೃಷ್ಟಿಕೋನದಿಂದ, ವಿಚಾರಣಾ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಮುಂದುವರಿಸುವುದು ಸೂಕ್ತ’ ಎಂದು ಪೀಠ ಆದೇಶ ಪ್ರಕಟಿಸಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ‘ಶಿವಲಿಂಗದ ಮೇಲೆ ಚೇಳು ಕೂತಿದೆ. ಅದನ್ನು ಕೈಯಲ್ಲಿ ಹಿಡಿದು ಎಸೆಯಲೂ ಆಗದು, ಚಪ್ಪಲಿಯಲ್ಲಿ ಹೊಡೆಯಲೂ ಆಗದು’ ಎಂಬ ಹೇಳಿಕೆಗೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ ದಾಖಲಿಸಿದ್ದ ಪ್ರಕರಣದಲ್ಲಿ, ಸಂಸದ ಶಶಿ ತರೂರ್ ವಿರುದ್ಧದ ಮಾನಹಾನಿ ಪ್ರಕರಣ ಕೈಬಿಡಲು ದೆಹಲಿ ಹೈಕೋರ್ಟ್ ನಿರಾಕರಿಸಿದೆ.</p><p>ಮಾನನಷ್ಟ ಮೊಕದ್ದಮೆ ಪ್ರಶ್ನಿಸಿ ತರೂರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಅನೂಪ್ ಕುಮಾರ್ ಮೆಂಡಿರತ್ತ ಅವರಿದ್ದ ಪೀಠವು, ಪ್ರಕರಣ ಕೈಬಿಡಲು ನಿರಾಕರಿಸಿತು.</p><p>‘ಅನಾಮದೇಯ ಆರ್ಎಸ್ಎಸ್ ಮುಖಂಡರೊಬ್ಬರು ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ಶಿವಲಿಂಗದ ಮೇಲೆ ಕುಳಿತ ಚೇಳು’ ಎಂದು ಹೋಲಿಕೆ ಮಾಡಿದ್ದಾರೆ’ ಎಂದು 2018ರಲ್ಲಿ ಹೇಳಿಕೆ ನೀಡಿದ್ದ ತರೂರ್, ಅದನ್ನು ತಮ್ಮದೇ ಆದ ಧಾಟಿಯಲ್ಲಿ ವಿವರಿಸಿದ್ದರು.</p><p>ಈ ಕುರಿತು 2018ರ ನ. 2ರಂದು ಬಿಜೆಪಿ ಮುಖಂಡ ರಾಜೀವ್ ಬಬ್ಬರ್ ಅವರು ಮಾನಹಾನಿ ಪ್ರಕರಣವನ್ನು ದಾಖಲಿಸಿದರು. ‘ನಾನೊಬ್ಬ ಭಗವಾನ್ ಶಿವನ ಭಕ್ತನಾಗಿದ್ದು, ತರೂರ್ ಅವರು ಅಸಂಖ್ಯಾತ ಶಿವ ಭಕ್ತರ ಭಾವನೆಗಳಿಗೆ ತಮ್ಮ ಹೇಳಿಕೆ ಮೂಲಕ ಧಕ್ಕೆ ತಂದಿದ್ದಾರೆ’ ಎಂದು ಆರೋಪಿಸಿದ್ದರು. </p><p>ಸೆಶನ್ಸ್ ನ್ಯಾಯಾಲಯದಲ್ಲಿ ದಾಖಲಾದ ಕ್ರಿಮಿನಲ್ ಪ್ರಕರಣ ರದ್ಧತಿ ಕೋರಿ ತರೂರ್ ಅವರು 2020ರಲ್ಲಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಕ್ರಿಮಿನಲ್ ಮೊಕ್ಕದಮೆಗೆ ಹೈಕೋರ್ಟ್ ತಡೆ ನೀಡಿತ್ತು. </p><p>ವಿಚಾರಣೆಯನ್ನು ಮುಂದುವರಿಸಿದ ಹೈಕೋರ್ಟ್, ‘ಈ ಹಂತದಲ್ಲಿ ಪ್ರಕರಣ ಕೈಬಿಡಲು ಯಾವುದೇ ಆಧಾರವಿಲ್ಲ. ನ್ಯಾಯದ ದೃಷ್ಟಿಕೋನದಿಂದ, ವಿಚಾರಣಾ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಮುಂದುವರಿಸುವುದು ಸೂಕ್ತ’ ಎಂದು ಪೀಠ ಆದೇಶ ಪ್ರಕಟಿಸಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>