<p><strong>ಬಾಲೇಶ್ವರ(ಒಡಿಶಾ):</strong> ಭಾರತವು ಬುಧವಾರ ಒಡಿಶಾ ಕರಾವಳಿಯಲ್ಲಿ RudraM-II ಏರ್ ಟು ಸರ್ಫೇಸ್ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ ಎಂದು ರಕ್ಷಣಾ ಇಲಾಖೆಯ ಮೂಲಗಳು ತಿಳಿಸಿವೆ.</p><p>ಪ್ರಯೋಗದ ಎಲ್ಲ ಉದ್ದೇಶಗಳನ್ನು ಕ್ಷಿಪಣಿ ಪೂರ್ಣಗೊಳಿಸಿದ್ದು, ಪ್ರೊಪಲ್ಷನ್ ಸಿಸ್ಟಂ ಮತ್ತು ಕಂಟ್ರೋಲ್ ಹಾಗೂ ಗೈಡೆನ್ಸ್ ಅಲಗಾರಿದಂ ಅನ್ನು ಪೂರೈಸಿದೆ ಎಂದು ಅದು ಹೇಳಿದೆ. ಎಲ್ಲ ಗುರಿಗಳನ್ನು ನಿಖರವಾಗಿ ಮುಟ್ಟುವ ಮೂಲಕ ಕ್ಷಿಪಣಿ ಸಾಮರ್ಥ್ಯವನ್ನು ಸಾಬೀತು ಮಾಡಿದೆ.</p><p>RudraM-II ಕ್ಷಿಪಣಿಯು ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಸಾಲಿಡ್ ಪ್ರೊಪೆಲ್ಡ್ ಏರ್ ಲಾಂಚ್ಡ್ ಮಿಸೈಲ್ ವ್ಯವಸ್ಥೆಯಾಗಿದೆ. ಅಂದರೆ, ಏರ್ ಟು ಸರ್ಫೇಸ್ವರೆಗೆ ವಿವಿಧ ಕಡೆಗಳಿಂದ ಶತ್ರುಗಳನ್ನು ನಾಶಪಡಿಸುವ ಸಾಮರ್ಥ್ಯ ಹೊಂದಿದೆ.</p><p>ಭಾರತೀಯ ವಾಯುಪಡೆಯ ಎಸ್ಯು–30 ಎಂಕೆ–ಐ ಯುದ್ಧ ವಿಮಾನದ ಮೂಲಕ ಕ್ಷಿಪಣಿ ಪರೀಕ್ಷೆ ನಡೆಸಲಾಗಿದೆ. </p><p>ಫ್ಲೈಟ್ನ ಎಲೆಕ್ಟ್ರೋ ಆಪ್ಟಿಕಲ್ ಸಿಸ್ಟಂ, ರಾಡಾರ್ ಮತ್ತು ಟೆಲಿಮೀಟ್ರಿ ಸ್ಟೇಷನ್ಗಳು, ಹಡಗುಗಳ ಮೂಲಕ ಕ್ಷಿಪಣಿ ಸಾಮರ್ಥ್ಯವನ್ನು ಪತ್ತೆ ಮಾಡಲಾಗಿದೆ. </p><p>ಡಿಆರ್ಡಿಒ ಪ್ರಯೋಗಾಲಯಗಳಲ್ಲಿ ಅಭಿವೃದ್ಧಿಪಡಿಸಲಾಗಿರುವ , ಅತ್ಯಾಧುನಿಕ ತಂತ್ರಜ್ಞಾನ ಆಧರಿತ ಹಲವು ಸಾಧನಗಳನ್ನು ಈ ಕ್ಷಿಪಣಿ ವ್ಯವಸ್ಥೆಯಲ್ಲಿ ಅಳವಡಿಸಲಾಗಿದೆ. RudraM-II ಯಶಸ್ವಿ ಉಡಾವಣೆ ಕುರಿತಂತೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಡಿಆರ್ಡಿಒ ಮತ್ತು ವಾಯುಸೇನೆಗೆ ಅಭಿನಂದನೆ ಸಲ್ಲಿಸಿದ್ದಾರೆ.</p> <p>ಈ ಕ್ಷಿಪಣಿಯನ್ನು ದೇಶೀಯವಾಗಿಯೇ ಅಭಿವೃದ್ಧಿಪಡಿಸಲಾಗಿದೆ. ಯುದ್ಧವಿಮಾನಗಳಿಂದ ಉಡ್ಡಯನ ಮಾಡಬಹುದಾದ ಈ ಕ್ಷಿಪಣಿ ವ್ಯವಸ್ಥೆಯನ್ನು, ಭೂಮಿ ಮೇಲಿರುವ ಶತ್ರು ಪಾಳಯದ ಹಲವು ಬಗೆಯ ಸ್ವತ್ತುಗಳನ್ನು ನಾಶ ಮಾಡುವ ಉದ್ದೇಶದಿಂದಲೇ ಅಭಿವೃದ್ಧಿಪಡಿಸಲಾಗಿದೆ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಲೇಶ್ವರ(ಒಡಿಶಾ):</strong> ಭಾರತವು ಬುಧವಾರ ಒಡಿಶಾ ಕರಾವಳಿಯಲ್ಲಿ RudraM-II ಏರ್ ಟು ಸರ್ಫೇಸ್ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ ಎಂದು ರಕ್ಷಣಾ ಇಲಾಖೆಯ ಮೂಲಗಳು ತಿಳಿಸಿವೆ.</p><p>ಪ್ರಯೋಗದ ಎಲ್ಲ ಉದ್ದೇಶಗಳನ್ನು ಕ್ಷಿಪಣಿ ಪೂರ್ಣಗೊಳಿಸಿದ್ದು, ಪ್ರೊಪಲ್ಷನ್ ಸಿಸ್ಟಂ ಮತ್ತು ಕಂಟ್ರೋಲ್ ಹಾಗೂ ಗೈಡೆನ್ಸ್ ಅಲಗಾರಿದಂ ಅನ್ನು ಪೂರೈಸಿದೆ ಎಂದು ಅದು ಹೇಳಿದೆ. ಎಲ್ಲ ಗುರಿಗಳನ್ನು ನಿಖರವಾಗಿ ಮುಟ್ಟುವ ಮೂಲಕ ಕ್ಷಿಪಣಿ ಸಾಮರ್ಥ್ಯವನ್ನು ಸಾಬೀತು ಮಾಡಿದೆ.</p><p>RudraM-II ಕ್ಷಿಪಣಿಯು ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಸಾಲಿಡ್ ಪ್ರೊಪೆಲ್ಡ್ ಏರ್ ಲಾಂಚ್ಡ್ ಮಿಸೈಲ್ ವ್ಯವಸ್ಥೆಯಾಗಿದೆ. ಅಂದರೆ, ಏರ್ ಟು ಸರ್ಫೇಸ್ವರೆಗೆ ವಿವಿಧ ಕಡೆಗಳಿಂದ ಶತ್ರುಗಳನ್ನು ನಾಶಪಡಿಸುವ ಸಾಮರ್ಥ್ಯ ಹೊಂದಿದೆ.</p><p>ಭಾರತೀಯ ವಾಯುಪಡೆಯ ಎಸ್ಯು–30 ಎಂಕೆ–ಐ ಯುದ್ಧ ವಿಮಾನದ ಮೂಲಕ ಕ್ಷಿಪಣಿ ಪರೀಕ್ಷೆ ನಡೆಸಲಾಗಿದೆ. </p><p>ಫ್ಲೈಟ್ನ ಎಲೆಕ್ಟ್ರೋ ಆಪ್ಟಿಕಲ್ ಸಿಸ್ಟಂ, ರಾಡಾರ್ ಮತ್ತು ಟೆಲಿಮೀಟ್ರಿ ಸ್ಟೇಷನ್ಗಳು, ಹಡಗುಗಳ ಮೂಲಕ ಕ್ಷಿಪಣಿ ಸಾಮರ್ಥ್ಯವನ್ನು ಪತ್ತೆ ಮಾಡಲಾಗಿದೆ. </p><p>ಡಿಆರ್ಡಿಒ ಪ್ರಯೋಗಾಲಯಗಳಲ್ಲಿ ಅಭಿವೃದ್ಧಿಪಡಿಸಲಾಗಿರುವ , ಅತ್ಯಾಧುನಿಕ ತಂತ್ರಜ್ಞಾನ ಆಧರಿತ ಹಲವು ಸಾಧನಗಳನ್ನು ಈ ಕ್ಷಿಪಣಿ ವ್ಯವಸ್ಥೆಯಲ್ಲಿ ಅಳವಡಿಸಲಾಗಿದೆ. RudraM-II ಯಶಸ್ವಿ ಉಡಾವಣೆ ಕುರಿತಂತೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಡಿಆರ್ಡಿಒ ಮತ್ತು ವಾಯುಸೇನೆಗೆ ಅಭಿನಂದನೆ ಸಲ್ಲಿಸಿದ್ದಾರೆ.</p> <p>ಈ ಕ್ಷಿಪಣಿಯನ್ನು ದೇಶೀಯವಾಗಿಯೇ ಅಭಿವೃದ್ಧಿಪಡಿಸಲಾಗಿದೆ. ಯುದ್ಧವಿಮಾನಗಳಿಂದ ಉಡ್ಡಯನ ಮಾಡಬಹುದಾದ ಈ ಕ್ಷಿಪಣಿ ವ್ಯವಸ್ಥೆಯನ್ನು, ಭೂಮಿ ಮೇಲಿರುವ ಶತ್ರು ಪಾಳಯದ ಹಲವು ಬಗೆಯ ಸ್ವತ್ತುಗಳನ್ನು ನಾಶ ಮಾಡುವ ಉದ್ದೇಶದಿಂದಲೇ ಅಭಿವೃದ್ಧಿಪಡಿಸಲಾಗಿದೆ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>