<p><strong>ನವದೆಹಲಿ: </strong>ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿಯೂ ಆಗಿರುವ ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಓಮರ್ ಅಬ್ದುಲ್ಲಾ ಸಲ್ಲಿಸಿರುವ ವಿಚ್ಚೇದನ ಅರ್ಜಿಯನ್ನು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಸೋಮವಾರ ಒಪ್ಪಿದೆ.</p>.ಜಮ್ಮು–ಕಾಶ್ಮೀರ:ಇಲ್ಲಿ ಏನಾಗುತ್ತಿದೆ? ಕೇಂದ್ರ ಪ್ರತಿಕ್ರಿಯಿಸಲಿ–ಓಮರ್ ಅಬ್ದುಲ್ಲಾ.<p>15 ವರ್ಷಗಳಿಂದ ಪತ್ನಿಯಿಂದ ದೂರ ಇದ್ದು, ವಿವಾಹ ಅಂತ್ಯವಾಗಿದೆ. ಹೀಗಾಗಿ ವಿಚ್ಛೇದನ ನೀಡಬೇಕು ಎಂದು ಕೋರಿ ಓಮರ್ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು.</p><p>ನ್ಯಾಯಮೂರ್ತಿಗಳಾದ ಸುದಾಂಶು ಧುಲಿಯಾ ಹಾಗೂ ಅಹ್ಸಾನುದ್ದೀನ್ ಅಮಾನುಲ್ಲಾ ಅವರಿದ್ದ ಪೀಠ ಅರ್ಜಿಯ ವಿಚಾರಣೆಗೆ ಒಪ್ಪಿತು. ಓಮರ್ ಪರ ಹಿರಿಯ ವಕೀಲರಾದ ಕಪಿಲ್ ಸಿಬಲ್ ಅವರು ವಾದ ಮಂಡಿಸಿದರು.</p>.ಭೂ ರಕ್ಷಣೆ ಕಾನೂನು ಜಮ್ಮು–ಕಾಶ್ಮೀರಕ್ಕೆ ಏಕಿಲ್ಲ?–ಓಮರ್ ಅಬ್ದುಲ್ಲಾ.<p>‘ನನ್ನ ಕಕ್ಷಿದಾರರು ಹಾಗೂ ಅವರ ಪತ್ನಿ ಕಳೆದ 15 ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಅವರ ವಿವಾಹ ಅಂತ್ಯವಾಗಿದೆ. ಹೀಗಾಗಿ ಸಂವಿಧಾನದ ಪರಿಚ್ಛೇದ 142ರ ಅನ್ವಯ ವಿವಾಹವನ್ನು ಕೊನೆಯಾಗಿಸಬೇಕು’ ಎಂದು ಸಿಬಲ್ ವಾದ ಮಂಡಿಸಿದ್ದರು.</p><p>ಓಮರ್ ಹಾಗೂ ಪಾಯಲ್ 1994ರ ಸೆಪ್ಟೆಂಬರ್ 1ರಂದು ವಿವಾಹವಾಗಿದ್ದರು. 2009ರಿಂದ ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ.</p>.'ವಿಶೇಷ ಸ್ಥಾನಮಾನ'ವಿಲ್ಲದೆ ಚುನಾವಣೆಗೆ ನಿಲ್ಲುವುದಿಲ್ಲ: ಮೆಹಬೂಬ ಮುಫ್ತಿ, ಓಮರ್. <p>ಕ್ರೌರ್ಯದ ಆಧಾರದಲ್ಲಿ ತಮಗೆ ವಿಚ್ಛೇದನ ನೀಡಬೇಕು ಎಂದು ಈ ಹಿಂದೆ ದೆಹಲಿ ಹೈಕೋರ್ಟ್ನಲ್ಲಿ ಓಮರ್ ಅಬ್ದುಲ್ಲಾ ಅರ್ಜಿ ಸಲ್ಲಿಸಿದ್ದರು. ಆದರೆ ಅವರ ಅರ್ಜಿಯನ್ನು ಕೋರ್ಟ್ ತಳ್ಳಿಹಾಕಿತ್ತು.</p> .ಶಾಂತಿಯನ್ನು ಪಾಕಿಸ್ತಾನವೂ ಬಯಸುತ್ತಿದೆ; ಮಾತುಕತೆಗೆ ಸಕಾಲ: ಫಾರೂಕ್ ಅಬ್ದುಲ್ಲಾ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ: </strong>ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿಯೂ ಆಗಿರುವ ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಓಮರ್ ಅಬ್ದುಲ್ಲಾ ಸಲ್ಲಿಸಿರುವ ವಿಚ್ಚೇದನ ಅರ್ಜಿಯನ್ನು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಸೋಮವಾರ ಒಪ್ಪಿದೆ.</p>.ಜಮ್ಮು–ಕಾಶ್ಮೀರ:ಇಲ್ಲಿ ಏನಾಗುತ್ತಿದೆ? ಕೇಂದ್ರ ಪ್ರತಿಕ್ರಿಯಿಸಲಿ–ಓಮರ್ ಅಬ್ದುಲ್ಲಾ.<p>15 ವರ್ಷಗಳಿಂದ ಪತ್ನಿಯಿಂದ ದೂರ ಇದ್ದು, ವಿವಾಹ ಅಂತ್ಯವಾಗಿದೆ. ಹೀಗಾಗಿ ವಿಚ್ಛೇದನ ನೀಡಬೇಕು ಎಂದು ಕೋರಿ ಓಮರ್ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು.</p><p>ನ್ಯಾಯಮೂರ್ತಿಗಳಾದ ಸುದಾಂಶು ಧುಲಿಯಾ ಹಾಗೂ ಅಹ್ಸಾನುದ್ದೀನ್ ಅಮಾನುಲ್ಲಾ ಅವರಿದ್ದ ಪೀಠ ಅರ್ಜಿಯ ವಿಚಾರಣೆಗೆ ಒಪ್ಪಿತು. ಓಮರ್ ಪರ ಹಿರಿಯ ವಕೀಲರಾದ ಕಪಿಲ್ ಸಿಬಲ್ ಅವರು ವಾದ ಮಂಡಿಸಿದರು.</p>.ಭೂ ರಕ್ಷಣೆ ಕಾನೂನು ಜಮ್ಮು–ಕಾಶ್ಮೀರಕ್ಕೆ ಏಕಿಲ್ಲ?–ಓಮರ್ ಅಬ್ದುಲ್ಲಾ.<p>‘ನನ್ನ ಕಕ್ಷಿದಾರರು ಹಾಗೂ ಅವರ ಪತ್ನಿ ಕಳೆದ 15 ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಅವರ ವಿವಾಹ ಅಂತ್ಯವಾಗಿದೆ. ಹೀಗಾಗಿ ಸಂವಿಧಾನದ ಪರಿಚ್ಛೇದ 142ರ ಅನ್ವಯ ವಿವಾಹವನ್ನು ಕೊನೆಯಾಗಿಸಬೇಕು’ ಎಂದು ಸಿಬಲ್ ವಾದ ಮಂಡಿಸಿದ್ದರು.</p><p>ಓಮರ್ ಹಾಗೂ ಪಾಯಲ್ 1994ರ ಸೆಪ್ಟೆಂಬರ್ 1ರಂದು ವಿವಾಹವಾಗಿದ್ದರು. 2009ರಿಂದ ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ.</p>.'ವಿಶೇಷ ಸ್ಥಾನಮಾನ'ವಿಲ್ಲದೆ ಚುನಾವಣೆಗೆ ನಿಲ್ಲುವುದಿಲ್ಲ: ಮೆಹಬೂಬ ಮುಫ್ತಿ, ಓಮರ್. <p>ಕ್ರೌರ್ಯದ ಆಧಾರದಲ್ಲಿ ತಮಗೆ ವಿಚ್ಛೇದನ ನೀಡಬೇಕು ಎಂದು ಈ ಹಿಂದೆ ದೆಹಲಿ ಹೈಕೋರ್ಟ್ನಲ್ಲಿ ಓಮರ್ ಅಬ್ದುಲ್ಲಾ ಅರ್ಜಿ ಸಲ್ಲಿಸಿದ್ದರು. ಆದರೆ ಅವರ ಅರ್ಜಿಯನ್ನು ಕೋರ್ಟ್ ತಳ್ಳಿಹಾಕಿತ್ತು.</p> .ಶಾಂತಿಯನ್ನು ಪಾಕಿಸ್ತಾನವೂ ಬಯಸುತ್ತಿದೆ; ಮಾತುಕತೆಗೆ ಸಕಾಲ: ಫಾರೂಕ್ ಅಬ್ದುಲ್ಲಾ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>