ಆರ್ಎಸ್ಎಸ್ ಅಥವಾ ಬಿಜೆಪಿ, ಪ್ರಧಾನಿ ಮೋದಿ ಅಥವಾ ವಿಶ್ವದ ಯಾವ ಶಕ್ತಿಯು ಇಂಡಿಯಾ ಬಣ ನಡೆಸುವ ಜಾತಿ ಗಣತಿಯನ್ನು ತಡೆಯಲು ಸಾಧ್ಯವಿಲ್ಲ. ಪ್ರಸ್ತುತ ಮೀಸಲಾತಿಯ ಅಂಕಿ–ಅಂಶ ನೈಜತೆಯಿಂದ ಕೂಡಿಲ್ಲ. ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಶೇ 50ರಷ್ಟು ಮೀಸಲಾತಿಯನ್ನು ತೊಡೆದು ಹಾಕಲಾಗುವುದು ಎಂದು ಹೇಳಿದ್ದಾರೆ.
‘ನಮಗೆ ಸರಿಯಾದ ಅಂಕಿ– ಅಂಶ ಬೇಕು. ದಲಿತರು, ಹಿಂದುಳಿದ ವರ್ಗ, ಬುಡಕಟ್ಟುಗಳು, ಮಹಿಳೆಯರು, ಅಲ್ಪಸಂಖ್ಯಾತರು ಮತ್ತು ಸಾಮಾನ್ಯ ಜಾತಿಯ ಜನರು ಎಷ್ಟು ಪ್ರಮಾಣದಲ್ಲಿದ್ದಾರೆ. ಜಾತಿ ಜನಗಣತಿಯಿಂದಾಗಿ ಸಂವಿಧಾನವನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದೇವೆ’ ಎಂದು ತಿಳಿಸಿದ್ದಾರೆ.