<p><strong>ಮುಂಬೈ:</strong> ನಗರದ ಘಾಟ್ಕೋಪರ್ನಲ್ಲಿ ಬೃಹತ್ ಜಾಹೀರಾತು ಫಲಕ ಉರುಳಿ ಬಿದ್ದ ಪ್ರಕರಣದ ಪ್ರಮುಖ ಆರೋಪಿ ಜಾಹೀರಾತು ಸಂಸ್ಥೆಯ ನಿರ್ದೇಶಕ ಭವೇಶ್ ಭಿಂಡೆ ಅವರಿಗೆ ಮುಂಬೈ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. </p><p>ಜಾಮೀನು ಅರ್ಜಿ ವಿಚಾರಣೆ ನಡೆಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ವಿ.ಎಂ. ಪತಾಡಿ ಅವರು ಭಿಂಡೆಗೆ ಜಾಮೀನು ಮಂಜೂರು ಮಾಡಿದ್ದಾರೆ. </p><p>‘ಇದೊಂದು 'ದೇವರ ಕೃತ್ಯ’, ದುರದೃಷ್ಟಕರ ಘಟನೆಯಾಗಿದ್ದು, ರಾಜಕೀಯ ಸೇಡಿನಗಾಗಿ ಭವೇಶ್ ಭಿಂಡೆ ಅವರನ್ನು ಸಿಲುಕಿಸಲಾಗಿದೆ’ ಎಂದು ಭಿಂಡೆ ಪರ ವಕೀಲ ಸನಾ ಖಾನ್ ವಾದ ಮಂಡಿಸಿದ್ದಾರೆ. </p><p>‘ಘಾಟ್ಕೋಪರ್ ಪ್ರದೇಶದಲ್ಲಿ ಅಳವಡಿಸಲಾಗಿದ್ದ ಜಾಹೀರಾತು ಫಲಕವು ಅನಿರೀಕ್ಷಿತ, ವೇಗವಾಗಿ ಗಾಳಿ ಬಿಸಿದ್ದರಿಂದ ಉರುಳಿ ಬಿದ್ದಿದೆ. ಜಾಹೀರಾತು ಫಲಕವನ್ನು ಅಳವಡಿಸಿದ ಸಂದರ್ಭದಲ್ಲಿ ಭಿಂಡೆ ಅವರು ಸಂಸ್ಥೆಯ ನಿರ್ದೇಶಕರಾಗಿರಲಿಲ್ಲ. ಹಾಗಾಗಿ ಪ್ರಕರಣದಲ್ಲಿ ಭವೇಶ್ ಭಿಂಡೆ ಅವರದ್ದು ಯಾವುದೇ ಪಾತ್ರವಿಲ್ಲ’ ಎಂದು ಖಾನ್ ವಿವರಿಸಿದ್ದಾರೆ. </p><p>ಭಿಂಡೆ ಅವರ ಇಗೊ ಮಿಡಿಯಾ ಪ್ರೈವೆಟ್ ಲಿಮಿಟೆಡ್ ಸಂಸ್ಥೆಯ 120 ಅಡಿ ಅಗಲ ಮತ್ತು 120 ಅಡಿ ಎತ್ತರದ ಬೃಹತ್ ಜಾಹೀರಾತು ಫಲಕವು ಭಾರಿ ಧೂಳು ಸಹಿತ ಬಿರುಗಾಳಿ ಮಳೆಯಿಂದಾಗಿ ಮೇ 13ರಂದು ಪೆಟ್ರೋಲ್ ಪಂಪ್ ಮೇಲೆ ಕುಸಿದು ಬಿದ್ದಿತ್ತು. ಈ ವೇಳೆ ಅದರ ಅಡಿಯಲ್ಲಿ ಸಿಲುಕಿದ್ದ 17 ಜನರು ಸಾವಿಗೀಡಾಗಿದ್ದರು. </p><p>ಘಟನೆ ಬಳಿಕ ಭಿಂಡೆ ಪರಾರಿಯಾಗಿದ್ದರು. ಪೊಲೀಸರು ಅವರ ಮೇಲೆ ಸೆಕ್ಷನ್ 304ರ ಅಡಿ ಪ್ರಕರಣ ದಾಖಲಿಸಿದ್ದರು. ಬಳಿಕ ಮೇ 16ರಂದು ರಾಜಸ್ಥಾನದಲ್ಲಿ ಉದಯಪುರದಲ್ಲಿ ಭಿಂಡೆ ಅವರನ್ನು ಬಂಧಿಸಿ ಕರೆತರಲಾಗಿತ್ತು. </p><p>ಮುಂಬೈ ನಗರದಾದ್ಯಂತ ಸಂಸ್ಥೆಯು ಅಳವಡಿಸಿರುವ ಇತರ ಜಾಹೀರಾತು ಫಲಕಗಳ ಕುರಿತೂ ವಿಚಾರಣೆ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಭಿಂಡೆ ಅವರನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ:</strong> ನಗರದ ಘಾಟ್ಕೋಪರ್ನಲ್ಲಿ ಬೃಹತ್ ಜಾಹೀರಾತು ಫಲಕ ಉರುಳಿ ಬಿದ್ದ ಪ್ರಕರಣದ ಪ್ರಮುಖ ಆರೋಪಿ ಜಾಹೀರಾತು ಸಂಸ್ಥೆಯ ನಿರ್ದೇಶಕ ಭವೇಶ್ ಭಿಂಡೆ ಅವರಿಗೆ ಮುಂಬೈ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. </p><p>ಜಾಮೀನು ಅರ್ಜಿ ವಿಚಾರಣೆ ನಡೆಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ವಿ.ಎಂ. ಪತಾಡಿ ಅವರು ಭಿಂಡೆಗೆ ಜಾಮೀನು ಮಂಜೂರು ಮಾಡಿದ್ದಾರೆ. </p><p>‘ಇದೊಂದು 'ದೇವರ ಕೃತ್ಯ’, ದುರದೃಷ್ಟಕರ ಘಟನೆಯಾಗಿದ್ದು, ರಾಜಕೀಯ ಸೇಡಿನಗಾಗಿ ಭವೇಶ್ ಭಿಂಡೆ ಅವರನ್ನು ಸಿಲುಕಿಸಲಾಗಿದೆ’ ಎಂದು ಭಿಂಡೆ ಪರ ವಕೀಲ ಸನಾ ಖಾನ್ ವಾದ ಮಂಡಿಸಿದ್ದಾರೆ. </p><p>‘ಘಾಟ್ಕೋಪರ್ ಪ್ರದೇಶದಲ್ಲಿ ಅಳವಡಿಸಲಾಗಿದ್ದ ಜಾಹೀರಾತು ಫಲಕವು ಅನಿರೀಕ್ಷಿತ, ವೇಗವಾಗಿ ಗಾಳಿ ಬಿಸಿದ್ದರಿಂದ ಉರುಳಿ ಬಿದ್ದಿದೆ. ಜಾಹೀರಾತು ಫಲಕವನ್ನು ಅಳವಡಿಸಿದ ಸಂದರ್ಭದಲ್ಲಿ ಭಿಂಡೆ ಅವರು ಸಂಸ್ಥೆಯ ನಿರ್ದೇಶಕರಾಗಿರಲಿಲ್ಲ. ಹಾಗಾಗಿ ಪ್ರಕರಣದಲ್ಲಿ ಭವೇಶ್ ಭಿಂಡೆ ಅವರದ್ದು ಯಾವುದೇ ಪಾತ್ರವಿಲ್ಲ’ ಎಂದು ಖಾನ್ ವಿವರಿಸಿದ್ದಾರೆ. </p><p>ಭಿಂಡೆ ಅವರ ಇಗೊ ಮಿಡಿಯಾ ಪ್ರೈವೆಟ್ ಲಿಮಿಟೆಡ್ ಸಂಸ್ಥೆಯ 120 ಅಡಿ ಅಗಲ ಮತ್ತು 120 ಅಡಿ ಎತ್ತರದ ಬೃಹತ್ ಜಾಹೀರಾತು ಫಲಕವು ಭಾರಿ ಧೂಳು ಸಹಿತ ಬಿರುಗಾಳಿ ಮಳೆಯಿಂದಾಗಿ ಮೇ 13ರಂದು ಪೆಟ್ರೋಲ್ ಪಂಪ್ ಮೇಲೆ ಕುಸಿದು ಬಿದ್ದಿತ್ತು. ಈ ವೇಳೆ ಅದರ ಅಡಿಯಲ್ಲಿ ಸಿಲುಕಿದ್ದ 17 ಜನರು ಸಾವಿಗೀಡಾಗಿದ್ದರು. </p><p>ಘಟನೆ ಬಳಿಕ ಭಿಂಡೆ ಪರಾರಿಯಾಗಿದ್ದರು. ಪೊಲೀಸರು ಅವರ ಮೇಲೆ ಸೆಕ್ಷನ್ 304ರ ಅಡಿ ಪ್ರಕರಣ ದಾಖಲಿಸಿದ್ದರು. ಬಳಿಕ ಮೇ 16ರಂದು ರಾಜಸ್ಥಾನದಲ್ಲಿ ಉದಯಪುರದಲ್ಲಿ ಭಿಂಡೆ ಅವರನ್ನು ಬಂಧಿಸಿ ಕರೆತರಲಾಗಿತ್ತು. </p><p>ಮುಂಬೈ ನಗರದಾದ್ಯಂತ ಸಂಸ್ಥೆಯು ಅಳವಡಿಸಿರುವ ಇತರ ಜಾಹೀರಾತು ಫಲಕಗಳ ಕುರಿತೂ ವಿಚಾರಣೆ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಭಿಂಡೆ ಅವರನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>