<p><strong>ನವದೆಹಲಿ</strong>: ವನವಾಸದ ನಂತರ ತಮಿಳುನಾಡಿನ ರಾಮೇಶ್ವರಂನಿಂದ ಅಯೋಧ್ಯೆಯ ತನ್ನ ರಾಜ್ಯಕ್ಕೆ ಮರಳಲು ಭಗವಾನ್ ರಾಮನು ಅನುಸರಿಸಿದ ಮಾರ್ಗವನ್ನು ಪತ್ತೆಹಚ್ಚಲು 500ಕ್ಕೂ ಹೆಚ್ಚು ಸಾಮಾಜಿಕ ಮಾಧ್ಯಮ ಇನ್ಫ್ಲುಯನ್ಸರ್ಗಳು ಒಂದು ತಿಂಗಳ ಅವಧಿಯ 4,500 ಕಿಮೀ ಯಾತ್ರೆಯನ್ನು ಕೈಗೊಳ್ಳಲು ಸಜ್ಜಾಗಿದ್ದಾರೆ.</p><p>ರಾಮೋತ್ಸವ ಯಾತ್ರೆಯ ಆಯೋಜಕರ ಪ್ರಕಾರ, ತಮಿಳುನಾಡು, ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ ಯಾತ್ರೆ ಸಂಚರಿಸಲಿದೆ.</p><p>ರಾಮೋತ್ಸವ ಯಾತ್ರಾ ತಂಡದ ಭಾಗವಾಗಿರುವ ಅಪೂರ್ವ ಸಿಂಗ್ ಮಂಗಳವಾರ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಜನವರಿ 14ರಂದು ಒಂದು ತಿಂಗಳ ಯಾತ್ರೆ ಪ್ರಾರಂಭವಾಗಲಿದೆ.</p><p>‘500ಕ್ಕೂ ಹೆಚ್ಚು ಇನ್ಸ್ಟಾಗ್ರಾಮರ್ಗಳು, ಯೂಟ್ಯೂಬರ್ಗಳು, ಬ್ಲಾಗರ್ಗಳು, ಕ್ರೀಡಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವವರು ಮತ್ತು ಬಾಲಿವುಡ್ ಸೆಲೆಬ್ರಿಟಿಗಳು ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ’ ಎಂದು ಸಂಘಟನಾ ತಂಡದ ಇನ್ನೊಬ್ಬ ಪ್ರಮುಖ ಸದಸ್ಯ ಮಲಯ್ ದೀಕ್ಷಿತ್ ಪಿಟಿಐಗೆ ತಿಳಿಸಿದ್ದಾರೆ.</p><p>ಆಲ್ ಇಂಡಿಯಾ ಇನ್ಫ್ಲುಯನ್ಸರ್ಸ್ ಅಸೋಸಿಯೇಶನ್ ರಚಿಸಿರುವ ರಾಮೋತ್ಸವ ಯಾತ್ರಾ ಸಮಿತಿಯು ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ ಎಂದು ಅವರು ಹೇಳಿದರು.</p><p>‘ನಮ್ಮ ಈ ಪ್ರಯಾಣವು ಕೇವಲ ನೀತಿಬೋಧಕವಲ್ಲ, ಆದರೆ, ಅರಣ್ಯಗಳ ಮೂಲಕ ಭಗವಾನ್ ಶ್ರೀರಾಮನ ಪ್ರಯಾಣದ ಆಚರಣೆಯಾಗಿದೆ. ಇದು ಭಾರತೀಯ ಸಾಂಸ್ಕೃತಿಕ ಪರಂಪರೆಯನ್ನು ನಮಗೆ ಪರಿಚಯಿಸುತ್ತದೆ‘ ಎಂದು ದೀಕ್ಷಿತ್ ಹೇಳಿದರು.</p><p>‘ಯಾತ್ರೆಯ ಸಮಯದಲ್ಲಿ ಭಗವಾನ್ ಶ್ರೀರಾಮನ ನಿಜವಾದ ಅರಣ್ಯ ಪ್ರಯಾಣವನ್ನು ಅನುಕರಿಸಲು ಮತ್ತು ಅದನ್ನು ದಾಖಲಿಸಲು ನಮಗೆ ಅವಕಾಶ ಸಿಗುತ್ತದೆ’ಎಂದು ಅವರು ಹೇಳಿದರು.</p><p>ಅಯೋಧ್ಯೆಗೆ ಹೋಗುವ ದಾರಿಯ ಪ್ರಮುಖ ಸ್ಥಳಗಳಿಂದ ಮಣ್ಣನ್ನು ಸಂಗ್ರಹಿಸಿ ಅಯೋಧ್ಯೆಯಲ್ಲಿ ಸಸಿಗಳನ್ನು ನೆಡಲಾಗುತ್ತದೆ. ಅವಕ್ಕೆ 'ರಾಮಾಯಾನ' ಎಂದು ಹೆಸರಿಡಲಾಗುತ್ತದೆ ಎಂದರು.</p><p>ಯಾತ್ರಾರ್ಥಿಗಳು ಯಾತ್ರೆಯ ಸಮಯದಲ್ಲಿ, ರಾಮೇಶ್ವರಂ, ತ್ರಯಂಬಕೇಶ್ವರ, ಗ್ರಿಷ್ಣೇಶ್ವರ ಮತ್ತು ಕಾಶಿ ವಿಶ್ವನಾಥ ಸೇರಿ 4 ಜ್ಯೋತಿರ್ಲಿಂಗಗಳ ದರ್ಶನ ಪಡೆಯಲಿದ್ದಾರೆ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ವನವಾಸದ ನಂತರ ತಮಿಳುನಾಡಿನ ರಾಮೇಶ್ವರಂನಿಂದ ಅಯೋಧ್ಯೆಯ ತನ್ನ ರಾಜ್ಯಕ್ಕೆ ಮರಳಲು ಭಗವಾನ್ ರಾಮನು ಅನುಸರಿಸಿದ ಮಾರ್ಗವನ್ನು ಪತ್ತೆಹಚ್ಚಲು 500ಕ್ಕೂ ಹೆಚ್ಚು ಸಾಮಾಜಿಕ ಮಾಧ್ಯಮ ಇನ್ಫ್ಲುಯನ್ಸರ್ಗಳು ಒಂದು ತಿಂಗಳ ಅವಧಿಯ 4,500 ಕಿಮೀ ಯಾತ್ರೆಯನ್ನು ಕೈಗೊಳ್ಳಲು ಸಜ್ಜಾಗಿದ್ದಾರೆ.</p><p>ರಾಮೋತ್ಸವ ಯಾತ್ರೆಯ ಆಯೋಜಕರ ಪ್ರಕಾರ, ತಮಿಳುನಾಡು, ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ ಯಾತ್ರೆ ಸಂಚರಿಸಲಿದೆ.</p><p>ರಾಮೋತ್ಸವ ಯಾತ್ರಾ ತಂಡದ ಭಾಗವಾಗಿರುವ ಅಪೂರ್ವ ಸಿಂಗ್ ಮಂಗಳವಾರ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಜನವರಿ 14ರಂದು ಒಂದು ತಿಂಗಳ ಯಾತ್ರೆ ಪ್ರಾರಂಭವಾಗಲಿದೆ.</p><p>‘500ಕ್ಕೂ ಹೆಚ್ಚು ಇನ್ಸ್ಟಾಗ್ರಾಮರ್ಗಳು, ಯೂಟ್ಯೂಬರ್ಗಳು, ಬ್ಲಾಗರ್ಗಳು, ಕ್ರೀಡಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವವರು ಮತ್ತು ಬಾಲಿವುಡ್ ಸೆಲೆಬ್ರಿಟಿಗಳು ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ’ ಎಂದು ಸಂಘಟನಾ ತಂಡದ ಇನ್ನೊಬ್ಬ ಪ್ರಮುಖ ಸದಸ್ಯ ಮಲಯ್ ದೀಕ್ಷಿತ್ ಪಿಟಿಐಗೆ ತಿಳಿಸಿದ್ದಾರೆ.</p><p>ಆಲ್ ಇಂಡಿಯಾ ಇನ್ಫ್ಲುಯನ್ಸರ್ಸ್ ಅಸೋಸಿಯೇಶನ್ ರಚಿಸಿರುವ ರಾಮೋತ್ಸವ ಯಾತ್ರಾ ಸಮಿತಿಯು ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ ಎಂದು ಅವರು ಹೇಳಿದರು.</p><p>‘ನಮ್ಮ ಈ ಪ್ರಯಾಣವು ಕೇವಲ ನೀತಿಬೋಧಕವಲ್ಲ, ಆದರೆ, ಅರಣ್ಯಗಳ ಮೂಲಕ ಭಗವಾನ್ ಶ್ರೀರಾಮನ ಪ್ರಯಾಣದ ಆಚರಣೆಯಾಗಿದೆ. ಇದು ಭಾರತೀಯ ಸಾಂಸ್ಕೃತಿಕ ಪರಂಪರೆಯನ್ನು ನಮಗೆ ಪರಿಚಯಿಸುತ್ತದೆ‘ ಎಂದು ದೀಕ್ಷಿತ್ ಹೇಳಿದರು.</p><p>‘ಯಾತ್ರೆಯ ಸಮಯದಲ್ಲಿ ಭಗವಾನ್ ಶ್ರೀರಾಮನ ನಿಜವಾದ ಅರಣ್ಯ ಪ್ರಯಾಣವನ್ನು ಅನುಕರಿಸಲು ಮತ್ತು ಅದನ್ನು ದಾಖಲಿಸಲು ನಮಗೆ ಅವಕಾಶ ಸಿಗುತ್ತದೆ’ಎಂದು ಅವರು ಹೇಳಿದರು.</p><p>ಅಯೋಧ್ಯೆಗೆ ಹೋಗುವ ದಾರಿಯ ಪ್ರಮುಖ ಸ್ಥಳಗಳಿಂದ ಮಣ್ಣನ್ನು ಸಂಗ್ರಹಿಸಿ ಅಯೋಧ್ಯೆಯಲ್ಲಿ ಸಸಿಗಳನ್ನು ನೆಡಲಾಗುತ್ತದೆ. ಅವಕ್ಕೆ 'ರಾಮಾಯಾನ' ಎಂದು ಹೆಸರಿಡಲಾಗುತ್ತದೆ ಎಂದರು.</p><p>ಯಾತ್ರಾರ್ಥಿಗಳು ಯಾತ್ರೆಯ ಸಮಯದಲ್ಲಿ, ರಾಮೇಶ್ವರಂ, ತ್ರಯಂಬಕೇಶ್ವರ, ಗ್ರಿಷ್ಣೇಶ್ವರ ಮತ್ತು ಕಾಶಿ ವಿಶ್ವನಾಥ ಸೇರಿ 4 ಜ್ಯೋತಿರ್ಲಿಂಗಗಳ ದರ್ಶನ ಪಡೆಯಲಿದ್ದಾರೆ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>