ರಾಜ್ಯ ಸರ್ಕಾರವು ಭಿನ್ನ ಅಭಿಪ್ರಾಯ ದಾಖಲಿಸಿದವರನ್ನು ಹುಡುಕಿ ಬಂಧಿಸುವ ಕ್ರಮದ ಭಾಗವಾಗಿ ಶಂಕರ್ ಅವರ ವಿರುದ್ಧ ಕ್ರಮ ಕೈಗೊಂಡಿದೆ. ಶಂಕರ್ ಅವರಿಗೆ ಕಿರುಕುಳ ನೀಡಲು, ಅವರನ್ನು ಜೈಲಿನಲ್ಲಿಯೇ ಇರಿಸಲು ಈ ರೀತಿ ಮಾಡಿದೆ. ಅದರಲ್ಲೂ, ಅವರಿಗೆ ಬಹುತೇಕ ಪ್ರಕರಣಗಳಲ್ಲಿ ಜಾಮೀನು ಸಿಕ್ಕಿರುವಾಗ, ಗೂಂಡಾ ಕಾಯ್ದೆಯ ಅಡಿಯಲ್ಲಿ ಮೊದಲು ಬಂಧಿಸಿದ್ದ ಕ್ರಮ ರದ್ದಾಗಿರುವಾಗಲೂ ಹೀಗೆ ಮಾಡಲಾಗಿದೆ ಎಂದು ಕಮಲಾ ಅವರು ಹೇಳಿದ್ದರು.