<p><strong>ಪ್ರಯಾಗ್ರಾಜ್</strong>: ಮಥುರಾದ ಕೃಷ್ಣ ಜನ್ಮಭೂಮಿ –ಶಾಹಿ ಈದ್ಗಾ ವಿವಾದ ಕುರಿತ ಪ್ರಕರಣದಲ್ಲಿ ವಿವಾದಿತ ಆಸ್ತಿ ವಕ್ಫ್ ಮಂಡಳಿಗೆ ಸೇರಿದ್ದಲ್ಲ. ಈ ಆಸ್ತಿಗೆ ವಕ್ಫ್ ಕಾಯ್ದೆ ನಿಯಮಗಳು ಅನ್ವಯವಾಗುವುದಿಲ್ಲ ಎಂದು ಹಿಂದೂ ಪರ ವಕೀಲರು ವಾದ ಮಂಡಿಸಿದ್ದಾರೆ.</p>.<p>ಅಲಹಾಬಾದ್ ಹೈಕೋರ್ಟ್ ಎದುರು ಮುಸ್ಲಿಂ ಪರ ವಕೀಲರ ವಾದಕ್ಕೆ ಹೀಗೆ ಪ್ರತಿವಾದ ಮಂಡಿಸಲಾಗಿದೆ. ಪ್ರಕರಣದ ಸಿಂಧುತ್ವ ಪ್ರಶ್ನಿಸಿ ಮುಸ್ಲಿಂರ ಪರವಾಗಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಮಯಾಂಕ್ ಕುಮಾರ್ ಜೈನ್ ಅವರು ನಡೆಸುತ್ತಿದ್ದಾರೆ.</p>.<p>ಪ್ರತಿವಾದವನ್ನು ಮಂಡಿಸಿದ ಹಿಂದೂ ಪರ ವಕೀಲ ರಾಹುಲ್ ಸಹಾಯ್ ಅವರು, ಪ್ರಾರ್ಥನಾ ಸ್ಥಳಗಳ (ವಿಶೇಷ ನಿಯಮಗಳ) ಕಾಯ್ದೆ 1991ರ ನಿಯಮಗಳು ಇದಕ್ಕೆ ಅನ್ವಯವಾಗುವುದಿಲ್ಲ ಎಂದು ಪ್ರತಿಪಾದಿಸಿದರು.</p>.<p>ಪ್ರಾರ್ಥನಾ ಸ್ಥಳಗಳ ಕಾಯ್ದೆಯಲ್ಲಿ ಸ್ಥಳ ಅಥವಾ ನಿರ್ಮಾಣದ ಧಾರ್ಮಿಕ ಸ್ವರೂಪ ಕುರಿತಂತೆ ವ್ಯಾಖ್ಯಾನವಿಲ್ಲ. ಸ್ಥಳದ ಧಾರ್ಮಿಕ ಸ್ವರೂಪವನ್ನು ಸಾಕ್ಷ್ಯಗಳನ್ನು ಆಧರಿಸಿ ಸಿವಿಲ್ ಕೋರ್ಟ್ ನಿರ್ಧರಿಸಬೇಕಾಗಿದೆ ಎಂದರು.</p>.<p>ಈ ವಾದಕ್ಕೆ ಪೂರಕವಾಗಿ ಗ್ಯಾನವಾಪಿ ಪ್ರಕರಣದಲ್ಲಿ ಕೋರ್ಟ್ ನೀಡಿರುವ ಆದೇಶವನ್ನು ಉಲ್ಲೇಖಿಸಿದರು. </p>.<p>ಈಗ ಪ್ರಶ್ನಿಸಲಾದ ಆಸ್ತಿ ದೇಗುಲವಾಗಿತ್ತು. ಬಲವಂತವಾಗಿ ಸುಪರ್ದಿಗೆ ಪಡೆದು ಮುಸ್ಲಿಂರು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಇಂತಹ ನಡೆಯಿಂದ ಸ್ಥಳದ ಸ್ವರೂಪ ಬದಲಿಸಲಾಗದು. ಈ ಕಾರಣದಿಂದಲೂ ವಕ್ಫ್ ಕಾಯ್ದೆ ನಿಯಮಗಳು ಇಲ್ಲಿ ಅನ್ವಯವಾಗುವುದಿಲ್ಲ ಎಂದು ಹೇಳಿದರು.</p>.<p>ವಿಚಾರಣೆ ಬುಧವಾರ ಮುಂದುವರಿಯಲಿದೆ. ಹಿಂದೂ ಪರ ವಕೀಲರ ಬಳಿಕ ಮುಸಲ್ಮಾನರ ಪರ ವಕೀಲರು ವಾದ ಮಂಡಿಸಲಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪ್ರಯಾಗ್ರಾಜ್</strong>: ಮಥುರಾದ ಕೃಷ್ಣ ಜನ್ಮಭೂಮಿ –ಶಾಹಿ ಈದ್ಗಾ ವಿವಾದ ಕುರಿತ ಪ್ರಕರಣದಲ್ಲಿ ವಿವಾದಿತ ಆಸ್ತಿ ವಕ್ಫ್ ಮಂಡಳಿಗೆ ಸೇರಿದ್ದಲ್ಲ. ಈ ಆಸ್ತಿಗೆ ವಕ್ಫ್ ಕಾಯ್ದೆ ನಿಯಮಗಳು ಅನ್ವಯವಾಗುವುದಿಲ್ಲ ಎಂದು ಹಿಂದೂ ಪರ ವಕೀಲರು ವಾದ ಮಂಡಿಸಿದ್ದಾರೆ.</p>.<p>ಅಲಹಾಬಾದ್ ಹೈಕೋರ್ಟ್ ಎದುರು ಮುಸ್ಲಿಂ ಪರ ವಕೀಲರ ವಾದಕ್ಕೆ ಹೀಗೆ ಪ್ರತಿವಾದ ಮಂಡಿಸಲಾಗಿದೆ. ಪ್ರಕರಣದ ಸಿಂಧುತ್ವ ಪ್ರಶ್ನಿಸಿ ಮುಸ್ಲಿಂರ ಪರವಾಗಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಮಯಾಂಕ್ ಕುಮಾರ್ ಜೈನ್ ಅವರು ನಡೆಸುತ್ತಿದ್ದಾರೆ.</p>.<p>ಪ್ರತಿವಾದವನ್ನು ಮಂಡಿಸಿದ ಹಿಂದೂ ಪರ ವಕೀಲ ರಾಹುಲ್ ಸಹಾಯ್ ಅವರು, ಪ್ರಾರ್ಥನಾ ಸ್ಥಳಗಳ (ವಿಶೇಷ ನಿಯಮಗಳ) ಕಾಯ್ದೆ 1991ರ ನಿಯಮಗಳು ಇದಕ್ಕೆ ಅನ್ವಯವಾಗುವುದಿಲ್ಲ ಎಂದು ಪ್ರತಿಪಾದಿಸಿದರು.</p>.<p>ಪ್ರಾರ್ಥನಾ ಸ್ಥಳಗಳ ಕಾಯ್ದೆಯಲ್ಲಿ ಸ್ಥಳ ಅಥವಾ ನಿರ್ಮಾಣದ ಧಾರ್ಮಿಕ ಸ್ವರೂಪ ಕುರಿತಂತೆ ವ್ಯಾಖ್ಯಾನವಿಲ್ಲ. ಸ್ಥಳದ ಧಾರ್ಮಿಕ ಸ್ವರೂಪವನ್ನು ಸಾಕ್ಷ್ಯಗಳನ್ನು ಆಧರಿಸಿ ಸಿವಿಲ್ ಕೋರ್ಟ್ ನಿರ್ಧರಿಸಬೇಕಾಗಿದೆ ಎಂದರು.</p>.<p>ಈ ವಾದಕ್ಕೆ ಪೂರಕವಾಗಿ ಗ್ಯಾನವಾಪಿ ಪ್ರಕರಣದಲ್ಲಿ ಕೋರ್ಟ್ ನೀಡಿರುವ ಆದೇಶವನ್ನು ಉಲ್ಲೇಖಿಸಿದರು. </p>.<p>ಈಗ ಪ್ರಶ್ನಿಸಲಾದ ಆಸ್ತಿ ದೇಗುಲವಾಗಿತ್ತು. ಬಲವಂತವಾಗಿ ಸುಪರ್ದಿಗೆ ಪಡೆದು ಮುಸ್ಲಿಂರು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಇಂತಹ ನಡೆಯಿಂದ ಸ್ಥಳದ ಸ್ವರೂಪ ಬದಲಿಸಲಾಗದು. ಈ ಕಾರಣದಿಂದಲೂ ವಕ್ಫ್ ಕಾಯ್ದೆ ನಿಯಮಗಳು ಇಲ್ಲಿ ಅನ್ವಯವಾಗುವುದಿಲ್ಲ ಎಂದು ಹೇಳಿದರು.</p>.<p>ವಿಚಾರಣೆ ಬುಧವಾರ ಮುಂದುವರಿಯಲಿದೆ. ಹಿಂದೂ ಪರ ವಕೀಲರ ಬಳಿಕ ಮುಸಲ್ಮಾನರ ಪರ ವಕೀಲರು ವಾದ ಮಂಡಿಸಲಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>