ಯುವಕನ ಮೇಲೆ ಕಾರು ಹರಿಸಿದಾಗ ಸ್ಥಳದಲ್ಲಿದ್ದ ಕೆಲವು ವ್ಯಕ್ತಿಗಳು ಪರಾರಿಯಾಗಲು ಯತ್ನಿಸಿದ ಮಾಧುರಿ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ಅವರ ಜೊತೆ ಸ್ನೇಹಿತೆಯೂ ಇದ್ದರು. ಕೂಡಲೇ ಅಡ್ಯಾರ್ ಪೊಲೀಸರು ಸ್ಥಳಕ್ಕಾಗಮಿಸಿ ಆರೋಪಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆದುಕೊಂಡು ಹೋಗಿದ್ದರು. ಆದರೆ, ಠಾಣೆ ಜಾಮೀನು ಮೇಲೆ ಅವರನ್ನು ಅಂದೇ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಶಾಸ್ತ್ರೀ ನಗರದಲ್ಲಿರುವ ಮೃತನ ಸಂಬಂಧಿಕರು ದೂರು ನೀಡಿದ್ದು ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಬೀಡಾ ಮಸ್ತಾನ್ ರಾವ್ ಅವರು ಜಿಎಂಆರ್ ಗ್ರೂಪ್ ಕಂಪನಿಯ ಮುಖ್ಯಸ್ಥರೂ ಆಗಿದ್ದು ಅವರು ಈ ಹಿಂದೆ ಒಮ್ಮೆ ಆಂಧ್ರಪ್ರದೇಶದ ಶಾಸಕರೂ ಆಗಿದ್ದರು.
ಮಾಧುರಿ ಅವರ ವರ್ತನೆಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.