‘2000ರಲ್ಲಿ ಈ ಜಮೀನಿಗೆ ಸಂಬಂಧಿಸಿದಂತೆ ಪಹಣಿ ಮಾಡಿದ್ದು, ಅದರಲ್ಲಿ 13 ಎಕರೆಯನ್ನಷ್ಟೇ ತೋರಿಸಲಾಗಿದೆ. ಜಮೀನಿನ ನಕ್ಷೆ ತರಿಸಿಕೊಂಡು, ಉಳಿದ 9 ಎಕರೆ 8 ಗುಂಟೆಯನ್ನು ಗುರುತಿಸಿ ಮತ್ತು ದಾಖಲೆಗಳನ್ನು ಪಡೆದುಕೊಳ್ಳಿ. ಈ ಜಮೀನಿನ ಮರುವಶಕ್ಕೆ ಈವರೆಗೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಎರಡು ದಿನಗಳ ಒಳಗೆ ವರದಿ ನೀಡಿ’ ಎಂದು ಸಚಿವ ಖಂಡ್ರೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.