<p><strong>ಕಲಬುರಗಿ</strong>: ವಚನ ಭ್ರಷ್ಟರು ವಚನ ಪರಿಪಾಲಕ ರಾಮನ ಹೆಸರನ್ನು ಚುನಾವಣೆಗೆ ಬಳಸುವುದು ರಾಮನಿಗೆ ಮಾಡುವ ಮಹಾ ಅವಮಾನ ಎಂದು ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ಮುಖಂಡರನ್ನು ಟೀಕಿಸಿದ್ದಾರೆ.</p><p>10 ವರ್ಷಗಳ ಹಿಂದೆ ಬಿಜೆಪಿಯವರು ಭವಿಷ್ಯ ಕಾಲದ ಕನಸುಗಳನ್ನು ಬಿತ್ತಿ ಮತ ಕೇಳಿದ್ದರು. ಈಗ 10 ವರ್ಷ ಕಳೆದ ನಂತರ ಭೂತಕಾಲದ ವಿಷಯಗಳ ಮೇಲೆ ಮತ ಕೇಳುತ್ತಿದ್ದಾರೆ ಎಂದು ಎಕ್ಸ್ನಲ್ಲಿ ಆರೋಪಿಸಿದ್ದಾರೆ.</p><p>ಈ ಭವಿಷ್ಯದಿಂದ ಭೂತಕಾಲದ ರಾಜಕೀಯದ ನಡುವಿನ 10 ವರ್ಷ ಯಾವುದೇ ಸಾಧನೆ ಇಲ್ಲದೆ, ಆಡಳಿತ ನಡೆಸಿದರು. 10 ವರ್ಷಗಳ ಆಡಳಿತದ ನಂತರವೂ ಅಚ್ಛೆ ದಿನಗಳ ಭರವಸೆ ಈಡೇರಲಿಲ್ಲ. ವಾರ್ಷಿಕ 2 ಕೋಟಿ ಉದ್ಯೋಗ ಸಿಗಲಿಲ್ಲ, ಆರ್ಥಿಕ ಸಮಾನತೆ ಬರಲಿಲ್ಲ, ಬೆಲೆ ಏರಿಕೆ ಪರಿಹಾರ ಸಿಗಲಿಲ್ಲ, ರೂಪಾಯಿ ಮೌಲ್ಯ ಕಾಣಲಿಲ್ಲ, ರೈತರ ಆದಾಯ ಡಬಲ್ ಆಗಲಿಲ್ಲ, ಸ್ವಿಸ್ ಬ್ಯಾಂಕ್ ಮಾಹಿತಿ ತರುತ್ತೇವೆ ಅಂದವರು ಎಸ್ಬಿಐ ಬ್ಯಾಂಕ್ ಮಾಹಿತಿಯನ್ನು ಮುಚ್ಚಿಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರಗಿ</strong>: ವಚನ ಭ್ರಷ್ಟರು ವಚನ ಪರಿಪಾಲಕ ರಾಮನ ಹೆಸರನ್ನು ಚುನಾವಣೆಗೆ ಬಳಸುವುದು ರಾಮನಿಗೆ ಮಾಡುವ ಮಹಾ ಅವಮಾನ ಎಂದು ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ಮುಖಂಡರನ್ನು ಟೀಕಿಸಿದ್ದಾರೆ.</p><p>10 ವರ್ಷಗಳ ಹಿಂದೆ ಬಿಜೆಪಿಯವರು ಭವಿಷ್ಯ ಕಾಲದ ಕನಸುಗಳನ್ನು ಬಿತ್ತಿ ಮತ ಕೇಳಿದ್ದರು. ಈಗ 10 ವರ್ಷ ಕಳೆದ ನಂತರ ಭೂತಕಾಲದ ವಿಷಯಗಳ ಮೇಲೆ ಮತ ಕೇಳುತ್ತಿದ್ದಾರೆ ಎಂದು ಎಕ್ಸ್ನಲ್ಲಿ ಆರೋಪಿಸಿದ್ದಾರೆ.</p><p>ಈ ಭವಿಷ್ಯದಿಂದ ಭೂತಕಾಲದ ರಾಜಕೀಯದ ನಡುವಿನ 10 ವರ್ಷ ಯಾವುದೇ ಸಾಧನೆ ಇಲ್ಲದೆ, ಆಡಳಿತ ನಡೆಸಿದರು. 10 ವರ್ಷಗಳ ಆಡಳಿತದ ನಂತರವೂ ಅಚ್ಛೆ ದಿನಗಳ ಭರವಸೆ ಈಡೇರಲಿಲ್ಲ. ವಾರ್ಷಿಕ 2 ಕೋಟಿ ಉದ್ಯೋಗ ಸಿಗಲಿಲ್ಲ, ಆರ್ಥಿಕ ಸಮಾನತೆ ಬರಲಿಲ್ಲ, ಬೆಲೆ ಏರಿಕೆ ಪರಿಹಾರ ಸಿಗಲಿಲ್ಲ, ರೂಪಾಯಿ ಮೌಲ್ಯ ಕಾಣಲಿಲ್ಲ, ರೈತರ ಆದಾಯ ಡಬಲ್ ಆಗಲಿಲ್ಲ, ಸ್ವಿಸ್ ಬ್ಯಾಂಕ್ ಮಾಹಿತಿ ತರುತ್ತೇವೆ ಅಂದವರು ಎಸ್ಬಿಐ ಬ್ಯಾಂಕ್ ಮಾಹಿತಿಯನ್ನು ಮುಚ್ಚಿಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>