ಗದಗ ಜಿಲ್ಲೆ ರೋಣ ತಾಲ್ಲೂಕಿನ ಬೆಳವಣಿಕಿ, ಯಾವಗಲ್, ಕೌಜಗೇರಿ ಸೇರಿ ಸುತ್ತಮುತ್ತಲಿನ ರೈತರು ಒಣಬೇಸಾಯದಲ್ಲಿ ‘ಅಣ್ಣಿಗೇರಿ ಡಿಲಕ್ಸ್’ (ಜವಾರಿ) ತಳಿಯ ಕೆಂಪುಮೆಣಸಿನಕಾಯಿ ಬೆಳೆದಿದ್ದರು. ಎಕರೆಗೆ ₹30 ಸಾವಿರ ಖರ್ಚು ಆಗಿತ್ತು. ಬೆಳೆ ಬರುವುದಕ್ಕೂ ಮುನ್ನ ಕ್ವಿಂಟಲ್ಗೆ ₹45 ಸಾವಿರ ಇದ್ದ ಕೆಂಪುಮೆಣಸಿನಕಾಯಿ ದರ ಈಗ ₹8,500ಕ್ಕೆ ಕುಸಿದಿದೆ. ಬೆಳೆಯನ್ನು ಇಟ್ಟುಕೊಳ್ಳಲು ಮತ್ತು ಮಾರಲು ಆಗದೇ ರೈತರು ಅಸಹಾಯಕ ಸ್ಥಿತಿಯಲ್ಲಿದ್ದಾರೆ.