<p>ನಾವೆಲ್ಲ ಸುವರ್ಣ ವಿಧಾನಸೌಧದ ಮುಂದೆ ನಿಂತುಗಂಡು ‘ಅಹಾ! ಯಂಗೈತೆ!’ ಅಂತ ಮಾತಾಡಿಕ್ಯತಿದ್ದೋ. ಅಸೆಂಬ್ಲಿ ಸುರುವಾಗಿ ಏಟೊತ್ತಾದ್ರೂ ಮಂತ್ರಿಗಳು, ಶಾಸಕರು ಬರಲೇ ಇಲ್ಲ.</p>.<p>‘ಎಲ್ಲೋದ್ರುಲಾ ಇವರೆಲ್ಲಾ? ಕೋಟಿ ಕಾರುಗಳು ಒಂದೂ ಕಾಣತಿಲ್ಲ. ನೆನ್ನೆ ಕಮಲದವು ಬೇಜಾರು ಮಾಡಿಕ್ಯಂದು ಅಧ್ಯಕ್ಸರ ಮುಂದೆ ಇರೋ ಬಾವಿಗೆ ಬಿದ್ದವಂತೆ. ಏಟು ಜನಕ್ಕೆ ಏಟು ಬಿತ್ತೋ ಗೊತ್ತಿಲ್ಲ’ ಯಂಟಪ್ಪಣ್ಣ ಲೊಚಗುಟ್ಟಿತು.</p>.<p>‘ಅಣೈ, ಅದು ನೀರಿನ ಬಾವಿ ಅಲ್ಲ, ಅಧ್ಯಕ್ಸರ ಪೀಠದ ಮುಂದಿರೋ ಖಾಲಿ ಜಾಗ. ಅಲ್ಲಿ ನಿಂತುಗಂಡು ಗಲಾಟೆ ಮಾಡಿ ಸ್ವಂತ ಕಾಯಕಕ್ಕೆ ಕಡೆದು ಹೊಂಟೋಗ್ಯವ್ರೆ. ಇಲ್ಲಿ ಕಾಣ್ತಿರೋ ಕಾರುಗಳು ಶಾಸಕರು, ಮಂತ್ರಿಗಳ ಚೋಟಾಳು, ಮೋಟಾಳುಗಳದ್ದು’ ಅಂದ ಚಂದ್ರು.</p>.<p>‘ಅಸೋಕಣ್ಣ ‘ನಮ್ಮ ಹಲ್ಲಂಡೆಕೋರರು ಪಕ್ಸಾನೇ ಕೊಲ್ತಾವ್ರೆ. ಅಧಿಕಾರ ಇದ್ರೂ ಕಷ್ಟ, ಇಲ್ಲದಿದ್ರೂ ಕಷ್ಟ. ಇವುಕ್ಕೆ ಬಾಯಿಬೀಗ ಹಾಕದು ಯಂಗೆ?’ ಅಂತ ತಲೆ ಮ್ಯಾಲೆ ಕೈಹೊತುಗಂಡು ಕೂತದೆ. ಕೈ ಪಕ್ಸದ್ದೂ ಇದೇ ಕಥೆ’ ನಾನು ವಿಷಾದ ವ್ಯಕ್ತಪಡಿಸಿದೆ.</p>.<p>‘ಅಲ್ಲ ಕನ್ರೊ, ಅಧಿವೇಶನದಲ್ಲಿ ಮಂತನಸ್ಥರು ಒಪ್ಪಂಗೆ ನಾಕು ಮಾತಾಡನ ಅನ್ನೋ ಬುದ್ಧಿ ಬರಲೇ ಇಲ್ಲವಲ್ಲ ಇವುಕ್ಕೆ. ಸದನದಲ್ಲಿ ಸಂತೆ ಮಾಡತವಲ್ಲೋ’ ಯಂಟಪ್ಪಣ್ಣನಿಗೆ ಸಿಟ್ಟು ಬಂದಿತ್ತು.</p>.<p>‘ಅಣೈ, ಮೂಗಿಡಕಂದು ಸಂತೆ ಅನ್ರಿ’ ಚಂದ್ರು ಹಳೆ ವರಸೆ ತೆಗೆದ.</p>.<p>ಮೂಗು ಹಿಡಕಂದ ಯಂಟಪ್ಪಣ್ಣ ‘ಸತ್ತೆ, ಸತ್ತೆ’ ಅಂದು ಸುಮ್ಮಗಾಯ್ತು... ‘ಪ್ರಜಾಪ್ರಭುತ್ವದಲ್ಲಿ ಪ್ರಜೆಗಳ ಹಿತ ಸತ್ತೋಯ್ತು ಕನಣೈ’ ಅಂತಂದರು ತುರೇಮಣೆ.</p>.<p>‘ಅಲ್ಲ ಕನಣೈ, ಸುಳ್ಳು ಪತ್ತೆ ಮಾಡಕ್ಕೆ ಸರ್ಕಾರ ಐದು ಸಂಸ್ಥೆ ನೇಮಕ ಮಾಡ್ಯದಂತೆ. ಅವ್ಯಾಕೆ ಬೇಕಿತ್ತು? ಯಾವತ್ತೂ ಸತ್ಯ ನುಡಿದೇ ಇರೋ ರಾಜಕೀಯದವುಕ್ಕೆ ಏನೆನ್ನಬೈದು?’ ಚಂದ್ರು ವಿಷಯಾಂತರ ಮಾಡಿದ.</p>.<p>‘ಅವುಕ್ಕೆ ಇನ್ನೇನಂದರ್ಲಾ? ಅನಾಯಕತ್ವದ ನಾಯಕರು ಅನ್ನಬೈದಷ್ಟೀಯೆ!’ ತುರೇಮಣೆ ಲೇವಡಿ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನಾವೆಲ್ಲ ಸುವರ್ಣ ವಿಧಾನಸೌಧದ ಮುಂದೆ ನಿಂತುಗಂಡು ‘ಅಹಾ! ಯಂಗೈತೆ!’ ಅಂತ ಮಾತಾಡಿಕ್ಯತಿದ್ದೋ. ಅಸೆಂಬ್ಲಿ ಸುರುವಾಗಿ ಏಟೊತ್ತಾದ್ರೂ ಮಂತ್ರಿಗಳು, ಶಾಸಕರು ಬರಲೇ ಇಲ್ಲ.</p>.<p>‘ಎಲ್ಲೋದ್ರುಲಾ ಇವರೆಲ್ಲಾ? ಕೋಟಿ ಕಾರುಗಳು ಒಂದೂ ಕಾಣತಿಲ್ಲ. ನೆನ್ನೆ ಕಮಲದವು ಬೇಜಾರು ಮಾಡಿಕ್ಯಂದು ಅಧ್ಯಕ್ಸರ ಮುಂದೆ ಇರೋ ಬಾವಿಗೆ ಬಿದ್ದವಂತೆ. ಏಟು ಜನಕ್ಕೆ ಏಟು ಬಿತ್ತೋ ಗೊತ್ತಿಲ್ಲ’ ಯಂಟಪ್ಪಣ್ಣ ಲೊಚಗುಟ್ಟಿತು.</p>.<p>‘ಅಣೈ, ಅದು ನೀರಿನ ಬಾವಿ ಅಲ್ಲ, ಅಧ್ಯಕ್ಸರ ಪೀಠದ ಮುಂದಿರೋ ಖಾಲಿ ಜಾಗ. ಅಲ್ಲಿ ನಿಂತುಗಂಡು ಗಲಾಟೆ ಮಾಡಿ ಸ್ವಂತ ಕಾಯಕಕ್ಕೆ ಕಡೆದು ಹೊಂಟೋಗ್ಯವ್ರೆ. ಇಲ್ಲಿ ಕಾಣ್ತಿರೋ ಕಾರುಗಳು ಶಾಸಕರು, ಮಂತ್ರಿಗಳ ಚೋಟಾಳು, ಮೋಟಾಳುಗಳದ್ದು’ ಅಂದ ಚಂದ್ರು.</p>.<p>‘ಅಸೋಕಣ್ಣ ‘ನಮ್ಮ ಹಲ್ಲಂಡೆಕೋರರು ಪಕ್ಸಾನೇ ಕೊಲ್ತಾವ್ರೆ. ಅಧಿಕಾರ ಇದ್ರೂ ಕಷ್ಟ, ಇಲ್ಲದಿದ್ರೂ ಕಷ್ಟ. ಇವುಕ್ಕೆ ಬಾಯಿಬೀಗ ಹಾಕದು ಯಂಗೆ?’ ಅಂತ ತಲೆ ಮ್ಯಾಲೆ ಕೈಹೊತುಗಂಡು ಕೂತದೆ. ಕೈ ಪಕ್ಸದ್ದೂ ಇದೇ ಕಥೆ’ ನಾನು ವಿಷಾದ ವ್ಯಕ್ತಪಡಿಸಿದೆ.</p>.<p>‘ಅಲ್ಲ ಕನ್ರೊ, ಅಧಿವೇಶನದಲ್ಲಿ ಮಂತನಸ್ಥರು ಒಪ್ಪಂಗೆ ನಾಕು ಮಾತಾಡನ ಅನ್ನೋ ಬುದ್ಧಿ ಬರಲೇ ಇಲ್ಲವಲ್ಲ ಇವುಕ್ಕೆ. ಸದನದಲ್ಲಿ ಸಂತೆ ಮಾಡತವಲ್ಲೋ’ ಯಂಟಪ್ಪಣ್ಣನಿಗೆ ಸಿಟ್ಟು ಬಂದಿತ್ತು.</p>.<p>‘ಅಣೈ, ಮೂಗಿಡಕಂದು ಸಂತೆ ಅನ್ರಿ’ ಚಂದ್ರು ಹಳೆ ವರಸೆ ತೆಗೆದ.</p>.<p>ಮೂಗು ಹಿಡಕಂದ ಯಂಟಪ್ಪಣ್ಣ ‘ಸತ್ತೆ, ಸತ್ತೆ’ ಅಂದು ಸುಮ್ಮಗಾಯ್ತು... ‘ಪ್ರಜಾಪ್ರಭುತ್ವದಲ್ಲಿ ಪ್ರಜೆಗಳ ಹಿತ ಸತ್ತೋಯ್ತು ಕನಣೈ’ ಅಂತಂದರು ತುರೇಮಣೆ.</p>.<p>‘ಅಲ್ಲ ಕನಣೈ, ಸುಳ್ಳು ಪತ್ತೆ ಮಾಡಕ್ಕೆ ಸರ್ಕಾರ ಐದು ಸಂಸ್ಥೆ ನೇಮಕ ಮಾಡ್ಯದಂತೆ. ಅವ್ಯಾಕೆ ಬೇಕಿತ್ತು? ಯಾವತ್ತೂ ಸತ್ಯ ನುಡಿದೇ ಇರೋ ರಾಜಕೀಯದವುಕ್ಕೆ ಏನೆನ್ನಬೈದು?’ ಚಂದ್ರು ವಿಷಯಾಂತರ ಮಾಡಿದ.</p>.<p>‘ಅವುಕ್ಕೆ ಇನ್ನೇನಂದರ್ಲಾ? ಅನಾಯಕತ್ವದ ನಾಯಕರು ಅನ್ನಬೈದಷ್ಟೀಯೆ!’ ತುರೇಮಣೆ ಲೇವಡಿ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>