<p>‘ಇವೆಲ್ಲ ನೋಡಿರೆ ಬಲು ಸಂಕಟಾಯ್ತದೆ ಕನವ್ವ’ ಅಂದಳು ಅಕ್ಕಯ್ಯ.</p><p>‘ಅದ್ಯಾಕೆ ನನ ತಾಯಿ, ನೀನ್ಯಾಕವ್ವ ಅಲ್ಲಿಗೋಗಿದ್ದೆ? ಬುಟ್ರಾ ನಿನ್ನ?’ ಕೇಳಿದಳು ಚಿಗವ್ವ.</p><p>‘ಚಿಗವ್ವ ನೀನು ತಪ್ಪು ತಿಳಕಬ್ಯಾಡ. ನಾನೇನಾದ್ರೂ ಅತ್ತಗೋಗಿದ್ರೆ ನನ್ನ ತಿಂದು ಮುಗಿಸಿಬಿಡೋರು’ ಅಕ್ಕಯ್ಯ ವಿವರಣೆ ಕೊಟ್ಟಳು.</p><p>‘ನಾನೂ ಅದ್ನೇ ಕನೆ ಅಂದುದ್ದು. ಈಗ ಅದೇ ಸುದ್ದಿಯಾಗ್ಯದೆ. ಸನ್ನುಗಳು ಹೆಣ್ಮಕ್ಕಳ ಕೊಲ್ಲತಾವ್ರಂತೆ. ಉಸಾರು’ ಚಿಗವ್ವ ಬುದ್ಧಿಮಾತು ಹೇಳಿದಳು.</p><p>‘ಚಿಗವ್ವ ನಾನು ಹೇಳ್ತಿರದು ಬಿಸಿಲಿನ ಸನ್ ಸ್ಟ್ರೋಕ್ ಬಗ್ಗೆ ಕನೆ. ನಮ್ಮ ಕತೆ ನೋಡು, ಕೊಳಕು ನೀರು ಕುಡಿದು ಕಣ್ಣು ಮೆಡ್ಡರಿಸಿಕ್ಯಂದು ವಯಕ್ ಅಂತಿದ್ದೀವಿ. ಈಗ ವೈನಾಗಿ ಮಳೆ ಹೂದು ತಂಪಾಗ್ಯದೆ ಅನ್ಕಂದರೆ ಕೊಳೆ-ಪಳೆ ಕೊಚ್ಚಿಕ್ಯಂದು ಕೆರೆ ನೀರಿಗೆ ಸೇರಿ ಉಸಿರು ಹಿಡಿತಾದೆ ಕನ ನನ ತಾಯಿ’ ಅಕ್ಕಯ್ಯ ಬೇಸರಿಸಿಕೊಂಡಳು.</p><p>‘ನಮಗೆ ವಿಷದ ನೀರು, ಅಲ್ಲಿ ನಶೆ, ಬೀರು. ರಾಜಕೀಯದವು ಮೇಲ್ಮನೆ ಟಿಕೆಟ್ ತಕ್ಕೋಕೆ ಬಕ್ಕಬಾರಲು ಬೀಳ್ತಾವಂತೆ’ ಚಿಕ್ಕಮೀನಮ್ಮ ಬೆರಗಾದಳು.</p><p>‘ಇದೇ ಕನೆ ರಾಜಕೀಯ ಅಂದ್ರೆ. ರೋಡು ರಿಪೇರಿಯಾಗದೇ ಗುಂಡಿ ಬಿದ್ದವಂತೆ, ನಲ್ಲೀಲಿ ನೀರು ಬತ್ತಿಲ್ಲವಂತೆ. ಜನ ಯವಸಾಯನೇ ಮರೆತುಬುಟ್ಟವ್ರೆ’ ಚಿಗವ್ವನಿಗೂ ಬೇಸರಾಯ್ತು.</p><p>‘ಹೂ ಕಾ ಚಿಗವ್ವ, ಇಸದ ನೀರು ಕುಡಿದು ಸಾವಿರಗಟ್ಲೆ ಮೀನಮ್ಮದೀರು ನಮ್ಮ ಕೆರೇಲೇ ಸಾಯ್ತಾವ್ರೆ. ನಾವು ಸತ್ರೂ ಮಾರನೇಗೆ ಪೇಪರಲ್ಲಿ ಸುದ್ದಿಯಾತದೆ ‘ಕೊಳಕು ನೀರಿನಿಂದ ಸಾವಿರಾರು ಮೀನುಗಳ ಮಾರಣಹೋಮ’ ಅಂತ, ಆಟೇಯ. ನಮ್ಮದೂ ಒಂದು ಬಾಳೇವು ನೋಡವ್ವ. ಕೆರೆ ಉಳಿಸಿಗ್ಯಳೋ ಬುದ್ಧಿ ಈ ನರಮನುಸರಿಗೆ ಬರ್ನೇ ಇಲ್ಲವಲ್ಲ ತಾಯಿ’ ಅಂದಳು ಮೀನಕ್ಕಯ್ಯ.</p><p>‘ಅಕ್ಕಯ್ಯ ಮೀನು ದೊಡವ್ವ, ಮೀನು ಚಿಗಪ್ಪ, ಮೀನು ಅಪಪ್ಪ ಉಸಿರು ಮ್ಯಾಕ್ಕೆ ಕೆಳಿಕ್ಕೆ ಮಾಡ್ತಾವ್ರೆ! ಬಲ್ರಿ!’ ಅಂದು ಓಡಿದಳು ಮೀನು ತಂಗ್ಯವ್ವ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಇವೆಲ್ಲ ನೋಡಿರೆ ಬಲು ಸಂಕಟಾಯ್ತದೆ ಕನವ್ವ’ ಅಂದಳು ಅಕ್ಕಯ್ಯ.</p><p>‘ಅದ್ಯಾಕೆ ನನ ತಾಯಿ, ನೀನ್ಯಾಕವ್ವ ಅಲ್ಲಿಗೋಗಿದ್ದೆ? ಬುಟ್ರಾ ನಿನ್ನ?’ ಕೇಳಿದಳು ಚಿಗವ್ವ.</p><p>‘ಚಿಗವ್ವ ನೀನು ತಪ್ಪು ತಿಳಕಬ್ಯಾಡ. ನಾನೇನಾದ್ರೂ ಅತ್ತಗೋಗಿದ್ರೆ ನನ್ನ ತಿಂದು ಮುಗಿಸಿಬಿಡೋರು’ ಅಕ್ಕಯ್ಯ ವಿವರಣೆ ಕೊಟ್ಟಳು.</p><p>‘ನಾನೂ ಅದ್ನೇ ಕನೆ ಅಂದುದ್ದು. ಈಗ ಅದೇ ಸುದ್ದಿಯಾಗ್ಯದೆ. ಸನ್ನುಗಳು ಹೆಣ್ಮಕ್ಕಳ ಕೊಲ್ಲತಾವ್ರಂತೆ. ಉಸಾರು’ ಚಿಗವ್ವ ಬುದ್ಧಿಮಾತು ಹೇಳಿದಳು.</p><p>‘ಚಿಗವ್ವ ನಾನು ಹೇಳ್ತಿರದು ಬಿಸಿಲಿನ ಸನ್ ಸ್ಟ್ರೋಕ್ ಬಗ್ಗೆ ಕನೆ. ನಮ್ಮ ಕತೆ ನೋಡು, ಕೊಳಕು ನೀರು ಕುಡಿದು ಕಣ್ಣು ಮೆಡ್ಡರಿಸಿಕ್ಯಂದು ವಯಕ್ ಅಂತಿದ್ದೀವಿ. ಈಗ ವೈನಾಗಿ ಮಳೆ ಹೂದು ತಂಪಾಗ್ಯದೆ ಅನ್ಕಂದರೆ ಕೊಳೆ-ಪಳೆ ಕೊಚ್ಚಿಕ್ಯಂದು ಕೆರೆ ನೀರಿಗೆ ಸೇರಿ ಉಸಿರು ಹಿಡಿತಾದೆ ಕನ ನನ ತಾಯಿ’ ಅಕ್ಕಯ್ಯ ಬೇಸರಿಸಿಕೊಂಡಳು.</p><p>‘ನಮಗೆ ವಿಷದ ನೀರು, ಅಲ್ಲಿ ನಶೆ, ಬೀರು. ರಾಜಕೀಯದವು ಮೇಲ್ಮನೆ ಟಿಕೆಟ್ ತಕ್ಕೋಕೆ ಬಕ್ಕಬಾರಲು ಬೀಳ್ತಾವಂತೆ’ ಚಿಕ್ಕಮೀನಮ್ಮ ಬೆರಗಾದಳು.</p><p>‘ಇದೇ ಕನೆ ರಾಜಕೀಯ ಅಂದ್ರೆ. ರೋಡು ರಿಪೇರಿಯಾಗದೇ ಗುಂಡಿ ಬಿದ್ದವಂತೆ, ನಲ್ಲೀಲಿ ನೀರು ಬತ್ತಿಲ್ಲವಂತೆ. ಜನ ಯವಸಾಯನೇ ಮರೆತುಬುಟ್ಟವ್ರೆ’ ಚಿಗವ್ವನಿಗೂ ಬೇಸರಾಯ್ತು.</p><p>‘ಹೂ ಕಾ ಚಿಗವ್ವ, ಇಸದ ನೀರು ಕುಡಿದು ಸಾವಿರಗಟ್ಲೆ ಮೀನಮ್ಮದೀರು ನಮ್ಮ ಕೆರೇಲೇ ಸಾಯ್ತಾವ್ರೆ. ನಾವು ಸತ್ರೂ ಮಾರನೇಗೆ ಪೇಪರಲ್ಲಿ ಸುದ್ದಿಯಾತದೆ ‘ಕೊಳಕು ನೀರಿನಿಂದ ಸಾವಿರಾರು ಮೀನುಗಳ ಮಾರಣಹೋಮ’ ಅಂತ, ಆಟೇಯ. ನಮ್ಮದೂ ಒಂದು ಬಾಳೇವು ನೋಡವ್ವ. ಕೆರೆ ಉಳಿಸಿಗ್ಯಳೋ ಬುದ್ಧಿ ಈ ನರಮನುಸರಿಗೆ ಬರ್ನೇ ಇಲ್ಲವಲ್ಲ ತಾಯಿ’ ಅಂದಳು ಮೀನಕ್ಕಯ್ಯ.</p><p>‘ಅಕ್ಕಯ್ಯ ಮೀನು ದೊಡವ್ವ, ಮೀನು ಚಿಗಪ್ಪ, ಮೀನು ಅಪಪ್ಪ ಉಸಿರು ಮ್ಯಾಕ್ಕೆ ಕೆಳಿಕ್ಕೆ ಮಾಡ್ತಾವ್ರೆ! ಬಲ್ರಿ!’ ಅಂದು ಓಡಿದಳು ಮೀನು ತಂಗ್ಯವ್ವ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>