<p><strong>ಮೂರು ರಾಜ್ಯಗಳಲ್ಲಿ ಸರ್ಕಾರ ರಚಿಸಲು ಕಾಂಗ್ರೆಸ್ ಸಿದ್ಧತೆ</strong></p><p><strong>ನವದೆಹಲಿ, ನ. 29–</strong> ಬಿಜೆಪಿ ವಿರೋಧಿ ಅಲೆಯಿಂದಾಗಿ ರಾಜಸ್ಥಾನ, ದೆಹಲಿ ಮತ್ತು ಮಧ್ಯಪ್ರದೇಶದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಈ ರಾಜ್ಯಗಳಲ್ಲಿ ಸರ್ಕಾರ ರಚಿಸಲು ಸಿದ್ಧವಾಗಿದೆ.</p><p>ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಗೆ ಹೊಸದಾಗಿ ಆಯ್ಕೆಯಾಗಿರುವ ಕಾಂಗ್ರೆಸ್ ಶಾಸಕರು ಡಿಸೆಂಬರ್ ಒಂದರಂದು ಸಭೆ ಸೇರುವರು ಎಂದು ಪಕ್ಷದ ವಕ್ತಾರರು ಇಂದು ರಾತ್ರಿ ತಿಳಿಸಿದರು.</p><p>_____________________</p><p><strong>ಸುಂದರ ಕನ್ನಡ ಭವನ ನಾಡಿಗೆ ಸಮರ್ಪಣೆ</strong></p><p><strong>ಬೆಂಗಳೂರು, ನ. 29:</strong> ಹಿತವಾದ ಚಳಿಯ ಎಳೆ ಬಿಸಿಲಿನ ಹಗಲಲ್ಲಿ, ಪ್ರಖ್ಯಾತ ಗಾಯಕ–ಗಾಯಕಿಯರಿಂದ ಹರಿದ ಗಾನ ಲಹರಿ ಹಿನ್ನೆಲೆಯ ಅದ್ಧೂರಿ ಸಮಾರಂಭದಲ್ಲಿ ಸಾಂಸ್ಕೃತಿಕ ಸೌಧ ‘ಕನ್ನಡ ಭವನ’ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರಿಂದ ಇಂದು ಇಲ್ಲಿ ನಾಡಿಗೆ ಸಮರ್ಪಿತವಾಯಿತು.</p><p>ವಿಶ್ವ ಕನ್ನಡ ಸಮ್ಮೇಳನ ಮುಗಿದ ನಂತರ 1984ರಿಂದ ಆರಂಭವಾಗಿ ಆರಕ್ಕೂ ಹೆಚ್ಚು ಬಾರಿ ಕೇವಲ ಅಡಿಗಲ್ಲು ಸಮಾರಂಭದ ಹಂತದಲ್ಲಿ ಮಾತ್ರ ಉಳಿದಿದ್ದ ಭವನದ ಅಜ್ಞಾತವಾಸ ಇದರೊಂದಿಗೆ ಮುಗಿದಂತಾಯಿತು.</p><p>ಮಳೆಯಿಂದಾಗಿ ರಾಜ್ಯೋತ್ಸವ ದಿನ ಉದ್ಘಾಟನೆ ಆಗದ ಇಲ್ಲಿನ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ನಿರ್ಮಾಣವಾದ ಈ ಭವನಕ್ಕೆ ಇನ್ನು ಕೇವಲ ಕಾಲು ಭಾಗ ಮಾತ್ರ ಕಾಮಗಾರಿ ಮುಗಿಯಬೇಕಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೂರು ರಾಜ್ಯಗಳಲ್ಲಿ ಸರ್ಕಾರ ರಚಿಸಲು ಕಾಂಗ್ರೆಸ್ ಸಿದ್ಧತೆ</strong></p><p><strong>ನವದೆಹಲಿ, ನ. 29–</strong> ಬಿಜೆಪಿ ವಿರೋಧಿ ಅಲೆಯಿಂದಾಗಿ ರಾಜಸ್ಥಾನ, ದೆಹಲಿ ಮತ್ತು ಮಧ್ಯಪ್ರದೇಶದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಈ ರಾಜ್ಯಗಳಲ್ಲಿ ಸರ್ಕಾರ ರಚಿಸಲು ಸಿದ್ಧವಾಗಿದೆ.</p><p>ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಗೆ ಹೊಸದಾಗಿ ಆಯ್ಕೆಯಾಗಿರುವ ಕಾಂಗ್ರೆಸ್ ಶಾಸಕರು ಡಿಸೆಂಬರ್ ಒಂದರಂದು ಸಭೆ ಸೇರುವರು ಎಂದು ಪಕ್ಷದ ವಕ್ತಾರರು ಇಂದು ರಾತ್ರಿ ತಿಳಿಸಿದರು.</p><p>_____________________</p><p><strong>ಸುಂದರ ಕನ್ನಡ ಭವನ ನಾಡಿಗೆ ಸಮರ್ಪಣೆ</strong></p><p><strong>ಬೆಂಗಳೂರು, ನ. 29:</strong> ಹಿತವಾದ ಚಳಿಯ ಎಳೆ ಬಿಸಿಲಿನ ಹಗಲಲ್ಲಿ, ಪ್ರಖ್ಯಾತ ಗಾಯಕ–ಗಾಯಕಿಯರಿಂದ ಹರಿದ ಗಾನ ಲಹರಿ ಹಿನ್ನೆಲೆಯ ಅದ್ಧೂರಿ ಸಮಾರಂಭದಲ್ಲಿ ಸಾಂಸ್ಕೃತಿಕ ಸೌಧ ‘ಕನ್ನಡ ಭವನ’ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರಿಂದ ಇಂದು ಇಲ್ಲಿ ನಾಡಿಗೆ ಸಮರ್ಪಿತವಾಯಿತು.</p><p>ವಿಶ್ವ ಕನ್ನಡ ಸಮ್ಮೇಳನ ಮುಗಿದ ನಂತರ 1984ರಿಂದ ಆರಂಭವಾಗಿ ಆರಕ್ಕೂ ಹೆಚ್ಚು ಬಾರಿ ಕೇವಲ ಅಡಿಗಲ್ಲು ಸಮಾರಂಭದ ಹಂತದಲ್ಲಿ ಮಾತ್ರ ಉಳಿದಿದ್ದ ಭವನದ ಅಜ್ಞಾತವಾಸ ಇದರೊಂದಿಗೆ ಮುಗಿದಂತಾಯಿತು.</p><p>ಮಳೆಯಿಂದಾಗಿ ರಾಜ್ಯೋತ್ಸವ ದಿನ ಉದ್ಘಾಟನೆ ಆಗದ ಇಲ್ಲಿನ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ನಿರ್ಮಾಣವಾದ ಈ ಭವನಕ್ಕೆ ಇನ್ನು ಕೇವಲ ಕಾಲು ಭಾಗ ಮಾತ್ರ ಕಾಮಗಾರಿ ಮುಗಿಯಬೇಕಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>