<p><strong>356ನೇ ವಿಧಿ ಬಳಕೆ: ಒಮ್ಮತ ಅಭಿಪ್ರಾಯಕ್ಕೆ ಪ್ರಧಾನಿ ಕರೆ</strong></p><p><strong>ನವದೆಹಲಿ, ಜ. 22 (ಪಿಟಿಐ, ಯುಎನ್ಐ)–</strong> ರಾಜ್ಯ ಸರ್ಕಾರಗಳನ್ನು ವಜಾ ಮಾಡಲು ಅಧಿಕಾರ ನೀಡುವ ಸಂವಿಧಾನದ 356ನೇ ವಿಧಿಯ ಬಗ್ಗೆ ಒಮ್ಮತದ ಅಭಿಪ್ರಾಯವನ್ನು ಮೂಡಿಸಲು ವ್ಯಾಪಕವಾದ ಚರ್ಚೆ ನಡೆಯಬೇಕೆಂದು ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಇಂದು ಸೂಚಿಸಿದರು. </p><p>‘ರಕ್ಷಣಾ ಸಚಿವ ಜಾರ್ಜ್ ಫರ್ನಾಂಡೀಸ್ ಅವರ ಅಧ್ಯಕ್ಷತೆಯಲ್ಲಿ ಈ ಸಂಬಂಧ ರಚಿಸಿರುವ ಸಮಿತಿಯ ಸಭೆಯಲ್ಲಿ ಒಮ್ಮತ ಮೂಡದಿರುವುದರಿಂದ ವ್ಯಾಪಕ ಚರ್ಚೆಯ ಅಗತ್ಯವಿದೆ’ ಎಂದು ಅಂತರರಾಜ್ಯ ಮಂಡಳಿಯ ಐದನೇ ಸಭೆಗೆ ಅವರು ತಿಳಿಸಿದರು.</p><p>__________</p><p><strong>ನೆರವು ನಿಲ್ಲಿಸಲು ಇವರಾರು: ಪಟೇಲ್</strong></p><p><strong>ನವದೆಹಲಿ, ಜ. 22–</strong> ‘ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಸುವುದು ವಿಳಂಬವಾದರೆ, ಅದನ್ನು ಆಧಾರವಾಗಿ ಇಟ್ಟುಕೊಂಡು ಕೇಂದ್ರದಿಂದ ಬರಬೇಕಾದ ಹಣವನ್ನು ನಿಲ್ಲಿಸಲು ಇವರಾರು?’</p><p>ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಉದ್ಯೋಗಾವಕಾಶಗಳ ಖಾತೆ ಸಚಿವ ಬಾಬಾ ಗೌಡ ಪಾಟೀಲ ಅವರಿಗೆ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರ ನೇರ ಪ್ರಶ್ನೆ ಇದು. </p><p>ಕರ್ನಾಟಕ ಸರ್ಕಾರವು ಗ್ರಾಮ ಪಂಚಾಯಿತಿಗಳ ಚುನಾವಣೆಯನ್ನು ನಡೆಸದೆ ಮುಂದೂಡಿರುವುದರಿಂದ ಕೇಂದ್ರದ ಹಣವನ್ನು ನಿಲ್ಲಿಸುವುದಾಗಿ ಪಾಟೀಲ ಅವರು ನೀಡಿರುವ ಎಚ್ಚರಿಕೆ ಬಗೆಗೆ ಕೇಳಿದ ಪ್ರಶ್ನೆಗೆ ಪಟೇಲ್ ಸಿಡುಕಿನಿಂದಲೇ ಉತ್ತರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>356ನೇ ವಿಧಿ ಬಳಕೆ: ಒಮ್ಮತ ಅಭಿಪ್ರಾಯಕ್ಕೆ ಪ್ರಧಾನಿ ಕರೆ</strong></p><p><strong>ನವದೆಹಲಿ, ಜ. 22 (ಪಿಟಿಐ, ಯುಎನ್ಐ)–</strong> ರಾಜ್ಯ ಸರ್ಕಾರಗಳನ್ನು ವಜಾ ಮಾಡಲು ಅಧಿಕಾರ ನೀಡುವ ಸಂವಿಧಾನದ 356ನೇ ವಿಧಿಯ ಬಗ್ಗೆ ಒಮ್ಮತದ ಅಭಿಪ್ರಾಯವನ್ನು ಮೂಡಿಸಲು ವ್ಯಾಪಕವಾದ ಚರ್ಚೆ ನಡೆಯಬೇಕೆಂದು ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಇಂದು ಸೂಚಿಸಿದರು. </p><p>‘ರಕ್ಷಣಾ ಸಚಿವ ಜಾರ್ಜ್ ಫರ್ನಾಂಡೀಸ್ ಅವರ ಅಧ್ಯಕ್ಷತೆಯಲ್ಲಿ ಈ ಸಂಬಂಧ ರಚಿಸಿರುವ ಸಮಿತಿಯ ಸಭೆಯಲ್ಲಿ ಒಮ್ಮತ ಮೂಡದಿರುವುದರಿಂದ ವ್ಯಾಪಕ ಚರ್ಚೆಯ ಅಗತ್ಯವಿದೆ’ ಎಂದು ಅಂತರರಾಜ್ಯ ಮಂಡಳಿಯ ಐದನೇ ಸಭೆಗೆ ಅವರು ತಿಳಿಸಿದರು.</p><p>__________</p><p><strong>ನೆರವು ನಿಲ್ಲಿಸಲು ಇವರಾರು: ಪಟೇಲ್</strong></p><p><strong>ನವದೆಹಲಿ, ಜ. 22–</strong> ‘ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಸುವುದು ವಿಳಂಬವಾದರೆ, ಅದನ್ನು ಆಧಾರವಾಗಿ ಇಟ್ಟುಕೊಂಡು ಕೇಂದ್ರದಿಂದ ಬರಬೇಕಾದ ಹಣವನ್ನು ನಿಲ್ಲಿಸಲು ಇವರಾರು?’</p><p>ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಉದ್ಯೋಗಾವಕಾಶಗಳ ಖಾತೆ ಸಚಿವ ಬಾಬಾ ಗೌಡ ಪಾಟೀಲ ಅವರಿಗೆ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರ ನೇರ ಪ್ರಶ್ನೆ ಇದು. </p><p>ಕರ್ನಾಟಕ ಸರ್ಕಾರವು ಗ್ರಾಮ ಪಂಚಾಯಿತಿಗಳ ಚುನಾವಣೆಯನ್ನು ನಡೆಸದೆ ಮುಂದೂಡಿರುವುದರಿಂದ ಕೇಂದ್ರದ ಹಣವನ್ನು ನಿಲ್ಲಿಸುವುದಾಗಿ ಪಾಟೀಲ ಅವರು ನೀಡಿರುವ ಎಚ್ಚರಿಕೆ ಬಗೆಗೆ ಕೇಳಿದ ಪ್ರಶ್ನೆಗೆ ಪಟೇಲ್ ಸಿಡುಕಿನಿಂದಲೇ ಉತ್ತರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>