<p><strong>ಹೆಚ್ಚಿದ ‘ಅಪವಿತ್ರ ಮೈತ್ರಿ’ ರಾಜ್ಯಪಾಲರ ಕಳವಳ</strong></p><p><strong>ಬೆಂಗಳೂರು, ಜ. 26–</strong> ಹೆಚ್ಚುತ್ತಿರುವ ಭ್ರಷ್ಟಾಚಾರ, ಕುಸಿಯುತ್ತಿರುವ ನೈತಿಕ ಮೌಲ್ಯಗಳು, ರಾಜಕಾರಣಿಗಳು, ಉದ್ಯಮಿಗಳು ಮತ್ತು ಆಡಳಿತಶಾಹಿಗಳ ನಡುವೆ ಹೆಚ್ಚುತ್ತಿರುವ ‘ಅಪವಿತ್ರ ಮೈತ್ರಿ’ಯ ಬಗ್ಗೆ ರಾಜ್ಯಪಾಲ ಖುರ್ಷಿದ್ ಆಲಂಖಾನ್ ಅವರು ಇಂದು ಇಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.</p><p>ಗಣರಾಜ್ಯೋತ್ಸವದ ಅಂಗವಾಗಿ ಇಲ್ಲಿನ ಫೀಲ್ಡ್ ಮಾರ್ಷಲ್ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡಿ ಮಾತನಾಡಿದ ಅವರು, ಶ್ರೇಷ್ಠ ವ್ಯಕ್ತಿಗಳಿಗೆ ನೆಲೆ ನೀಡಿದ ಈ ನಾಡು ಭ್ರಷ್ಟಾಚಾರದ ಸುಳಿಯಲ್ಲಿ ಮತ್ತು ನೈತಿಕ ಮೌಲ್ಯಗಳ ಅವಸಾನದಲ್ಲಿ ಸಿಲುಕುತ್ತಿರುವುದನ್ನು ನೋಡಿದರೆ ಸಂಕಟ ಆಗುತ್ತಿದೆ ಎಂದು ವಿಷಾದಿಸಿದರು.</p><p>ಇತ್ತೀಚೆಗೆ ನಡೆಯುತ್ತಿರುವ ಎಲ್ಲಾ ರಾಜಕೀಯ ಸಂಘರ್ಷಗಳೂ ವ್ಯಕ್ತಿಗತ ಸಂಘರ್ಷಗಳಾಗುತ್ತಿರುವುದು ವಿಪರ್ಯಾಸ. ಇದು ಕೇವಲ ರಾಜಕೀಯ ಪ್ರಾಬಲ್ಯಕ್ಕಾಗಿ ನಡೆಯುತ್ತಿದೆಯೇ ವಿನಾ ಯಾವುದೇ ತಾತ್ವಿಕ ನೆಲೆಗಟ್ಟಿಗಾಗಿ ಅಲ್ಲ. ನಮ್ಮ ಶಿಕ್ಷಣದ ಮೌಲ್ಯವೂ ನಶಿಸುತ್ತಿರುವುದು ಹಲವು ಕೆಡುಕುಗಳಿಗೆ ಕಾರಣ ಎಂದರು.</p><p>***</p><p><strong>ಮತಾಂತರ ಆಜನ್ಮಸಿದ್ಧ ಹಕ್ಕು ಸಾಹಿತಿ ಅನಂತಮೂರ್ತಿ</strong></p><p><strong>ಬೆಂಗಳೂರು, ಜ. 26–</strong> ಮತಾಂತರವಾಗುವುದು ಆಜನ್ಮಸಿದ್ಧ ಹಕ್ಕು. ಆದ್ದರಿಂದ ಮತಾಂತರ ನಿಷೇಧ ಕಾನೂನನ್ನು ಜಾರಿಗೆ ತರುವುದಕ್ಕೆ ಬಿಡಬಾರದು ಎಂದು ಸಾಹಿತಿ ಡಾ. ಯು.ಆರ್. ಅನಂತಮೂರ್ತಿ ಇಂದು ಇಲ್ಲಿ ಹೇಳಿದರು.</p><p>ಮಾಜಿ ಸಚಿವ ಬಿ. ಬಸವಲಿಂಗಪ್ಪನವರ ಸ್ಮರಣಾರ್ಥ ದಲಿತ ಸಂಘರ್ಷ ಸಮಿತಿಯು ಏರ್ಪಡಿಸಿದ್ದ ‘ಜನಸಾಹಿತ್ಯ– ಜನಚಳವಳಿ’ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.</p><p>‘ಬೂಸಾ ಚಳವಳಿ’ಗೆ 25 ವರ್ಷವಾಗಿರುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.</p><p>ಹಿಂದೂ ಧರ್ಮದಿಂದ ಬೇರೆ ಧರ್ಮಕ್ಕೆ ಯಾರಾದರೂ ಮತಾಂತರ ಆದರೆ ಮೊದಲು ಹಿಂದೂ ಧರ್ಮದ ಮಠಾಧಿಪತಿಗಳು ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಇನ್ನು ಕ್ರೈಸ್ತ ಅಥವಾ ಇತರ ಧರ್ಮೀಯರು ಹಿಂದೂ ಧರ್ಮಕ್ಕೆ ಮತಾಂತರವಾಗಬೇಕು ಎಂದುಕೊಂಡರೂ ಈ ಧರ್ಮದಲ್ಲಿರುವ ನಾನಾ ಜಾತಿಗಳಿಂದಾಗಿ ಅವರಿಗೆ ತಾವು ಯಾವ ಜಾತಿಗೆ ಸೇರಬೇಕೆಂಬ ಸಮಸ್ಯೆ ಎದುರಾಗುತ್ತದೆ ಎಂದು ಅವರು ವಿವರಿಸಿದರು.</p><p>***</p><p><strong>ಬಿಹಾರದ ರಣವೀರ ಸೇನೆ ಅಟ್ಟಹಾಸ: 21 ಮಂದಿಯ ಕಗ್ಗೊಲೆ</strong></p><p><strong>ಪಟ್ನಾ, ಜ. 26– (ಯುಎನ್ಐ, ಪಿಟಿಐ)–</strong> ಬಿಹಾರ ಭೂ ಮಾಲೀಕರ ನಿಷೇಧಿತ ರಣವೀರ ಸೇನೆಯು ನಕ್ಸಲೀಯರ ಉಪಟಳ ಹೆಚ್ಚಿರುವ ಜೆಹಾನಾಬಾದ್ ಜಿಲ್ಲೆಯ ಶಂಕರ್ ಬಿಘಾ ಗ್ರಾಮದ ಪರಿಶಿಷ್ಟರ ಕೇರಿಯ ಮೇಲೆ ಶನಿವಾರ ರಾತ್ರಿ ದಾಳಿ ಮಾಡಿ, ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ 21 ಮಂದಿಯನ್ನು ಕೊಂದುಹಾಕಿದೆ.</p><p>ಸತ್ತವರಲ್ಲಿ ಆರು ಮಕ್ಕಳು ಹಾಗೂ ಐವರು ಮಹಿಳೆಯರು ಸೇರಿದ್ದಾರೆ. ಇತರ 12 ಮಂದಿ ತೀವ್ರವಾಗಿ ಗಾಯಗೊಂಡಿದ್ದು ಅವರನ್ನು ಪಟ್ನಾ ವೈದ್ಯಕೀಯ ಆಸ್ಪತ್ರೆಗೆ ಸೇರಿಸಲಾಗಿದೆ.</p><p>ಸುಮಾರು 100ಕ್ಕೂ ಹೆಚ್ಚು ಜನರಿದ್ದ ಶಸ್ತ್ರಸಜ್ಜಿತ ರಣವೀರ ಸೇನೆಯ ಗುಂಪು ಗಣರಾಜ್ಯೋತ್ಸವದ ಮುನ್ನಾ ದಿನ ನಡೆಸಿದ ಈ ಕರಾಳ ಕೃತ್ಯದಿಂದಾಗಿ ಬಿಹಾರದಲ್ಲಿ ಉದ್ರಿಕ್ತ ಪರಿಸ್ಥಿತಿ ನಿರ್ಮಾಣವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೆಚ್ಚಿದ ‘ಅಪವಿತ್ರ ಮೈತ್ರಿ’ ರಾಜ್ಯಪಾಲರ ಕಳವಳ</strong></p><p><strong>ಬೆಂಗಳೂರು, ಜ. 26–</strong> ಹೆಚ್ಚುತ್ತಿರುವ ಭ್ರಷ್ಟಾಚಾರ, ಕುಸಿಯುತ್ತಿರುವ ನೈತಿಕ ಮೌಲ್ಯಗಳು, ರಾಜಕಾರಣಿಗಳು, ಉದ್ಯಮಿಗಳು ಮತ್ತು ಆಡಳಿತಶಾಹಿಗಳ ನಡುವೆ ಹೆಚ್ಚುತ್ತಿರುವ ‘ಅಪವಿತ್ರ ಮೈತ್ರಿ’ಯ ಬಗ್ಗೆ ರಾಜ್ಯಪಾಲ ಖುರ್ಷಿದ್ ಆಲಂಖಾನ್ ಅವರು ಇಂದು ಇಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.</p><p>ಗಣರಾಜ್ಯೋತ್ಸವದ ಅಂಗವಾಗಿ ಇಲ್ಲಿನ ಫೀಲ್ಡ್ ಮಾರ್ಷಲ್ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡಿ ಮಾತನಾಡಿದ ಅವರು, ಶ್ರೇಷ್ಠ ವ್ಯಕ್ತಿಗಳಿಗೆ ನೆಲೆ ನೀಡಿದ ಈ ನಾಡು ಭ್ರಷ್ಟಾಚಾರದ ಸುಳಿಯಲ್ಲಿ ಮತ್ತು ನೈತಿಕ ಮೌಲ್ಯಗಳ ಅವಸಾನದಲ್ಲಿ ಸಿಲುಕುತ್ತಿರುವುದನ್ನು ನೋಡಿದರೆ ಸಂಕಟ ಆಗುತ್ತಿದೆ ಎಂದು ವಿಷಾದಿಸಿದರು.</p><p>ಇತ್ತೀಚೆಗೆ ನಡೆಯುತ್ತಿರುವ ಎಲ್ಲಾ ರಾಜಕೀಯ ಸಂಘರ್ಷಗಳೂ ವ್ಯಕ್ತಿಗತ ಸಂಘರ್ಷಗಳಾಗುತ್ತಿರುವುದು ವಿಪರ್ಯಾಸ. ಇದು ಕೇವಲ ರಾಜಕೀಯ ಪ್ರಾಬಲ್ಯಕ್ಕಾಗಿ ನಡೆಯುತ್ತಿದೆಯೇ ವಿನಾ ಯಾವುದೇ ತಾತ್ವಿಕ ನೆಲೆಗಟ್ಟಿಗಾಗಿ ಅಲ್ಲ. ನಮ್ಮ ಶಿಕ್ಷಣದ ಮೌಲ್ಯವೂ ನಶಿಸುತ್ತಿರುವುದು ಹಲವು ಕೆಡುಕುಗಳಿಗೆ ಕಾರಣ ಎಂದರು.</p><p>***</p><p><strong>ಮತಾಂತರ ಆಜನ್ಮಸಿದ್ಧ ಹಕ್ಕು ಸಾಹಿತಿ ಅನಂತಮೂರ್ತಿ</strong></p><p><strong>ಬೆಂಗಳೂರು, ಜ. 26–</strong> ಮತಾಂತರವಾಗುವುದು ಆಜನ್ಮಸಿದ್ಧ ಹಕ್ಕು. ಆದ್ದರಿಂದ ಮತಾಂತರ ನಿಷೇಧ ಕಾನೂನನ್ನು ಜಾರಿಗೆ ತರುವುದಕ್ಕೆ ಬಿಡಬಾರದು ಎಂದು ಸಾಹಿತಿ ಡಾ. ಯು.ಆರ್. ಅನಂತಮೂರ್ತಿ ಇಂದು ಇಲ್ಲಿ ಹೇಳಿದರು.</p><p>ಮಾಜಿ ಸಚಿವ ಬಿ. ಬಸವಲಿಂಗಪ್ಪನವರ ಸ್ಮರಣಾರ್ಥ ದಲಿತ ಸಂಘರ್ಷ ಸಮಿತಿಯು ಏರ್ಪಡಿಸಿದ್ದ ‘ಜನಸಾಹಿತ್ಯ– ಜನಚಳವಳಿ’ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.</p><p>‘ಬೂಸಾ ಚಳವಳಿ’ಗೆ 25 ವರ್ಷವಾಗಿರುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.</p><p>ಹಿಂದೂ ಧರ್ಮದಿಂದ ಬೇರೆ ಧರ್ಮಕ್ಕೆ ಯಾರಾದರೂ ಮತಾಂತರ ಆದರೆ ಮೊದಲು ಹಿಂದೂ ಧರ್ಮದ ಮಠಾಧಿಪತಿಗಳು ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಇನ್ನು ಕ್ರೈಸ್ತ ಅಥವಾ ಇತರ ಧರ್ಮೀಯರು ಹಿಂದೂ ಧರ್ಮಕ್ಕೆ ಮತಾಂತರವಾಗಬೇಕು ಎಂದುಕೊಂಡರೂ ಈ ಧರ್ಮದಲ್ಲಿರುವ ನಾನಾ ಜಾತಿಗಳಿಂದಾಗಿ ಅವರಿಗೆ ತಾವು ಯಾವ ಜಾತಿಗೆ ಸೇರಬೇಕೆಂಬ ಸಮಸ್ಯೆ ಎದುರಾಗುತ್ತದೆ ಎಂದು ಅವರು ವಿವರಿಸಿದರು.</p><p>***</p><p><strong>ಬಿಹಾರದ ರಣವೀರ ಸೇನೆ ಅಟ್ಟಹಾಸ: 21 ಮಂದಿಯ ಕಗ್ಗೊಲೆ</strong></p><p><strong>ಪಟ್ನಾ, ಜ. 26– (ಯುಎನ್ಐ, ಪಿಟಿಐ)–</strong> ಬಿಹಾರ ಭೂ ಮಾಲೀಕರ ನಿಷೇಧಿತ ರಣವೀರ ಸೇನೆಯು ನಕ್ಸಲೀಯರ ಉಪಟಳ ಹೆಚ್ಚಿರುವ ಜೆಹಾನಾಬಾದ್ ಜಿಲ್ಲೆಯ ಶಂಕರ್ ಬಿಘಾ ಗ್ರಾಮದ ಪರಿಶಿಷ್ಟರ ಕೇರಿಯ ಮೇಲೆ ಶನಿವಾರ ರಾತ್ರಿ ದಾಳಿ ಮಾಡಿ, ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ 21 ಮಂದಿಯನ್ನು ಕೊಂದುಹಾಕಿದೆ.</p><p>ಸತ್ತವರಲ್ಲಿ ಆರು ಮಕ್ಕಳು ಹಾಗೂ ಐವರು ಮಹಿಳೆಯರು ಸೇರಿದ್ದಾರೆ. ಇತರ 12 ಮಂದಿ ತೀವ್ರವಾಗಿ ಗಾಯಗೊಂಡಿದ್ದು ಅವರನ್ನು ಪಟ್ನಾ ವೈದ್ಯಕೀಯ ಆಸ್ಪತ್ರೆಗೆ ಸೇರಿಸಲಾಗಿದೆ.</p><p>ಸುಮಾರು 100ಕ್ಕೂ ಹೆಚ್ಚು ಜನರಿದ್ದ ಶಸ್ತ್ರಸಜ್ಜಿತ ರಣವೀರ ಸೇನೆಯ ಗುಂಪು ಗಣರಾಜ್ಯೋತ್ಸವದ ಮುನ್ನಾ ದಿನ ನಡೆಸಿದ ಈ ಕರಾಳ ಕೃತ್ಯದಿಂದಾಗಿ ಬಿಹಾರದಲ್ಲಿ ಉದ್ರಿಕ್ತ ಪರಿಸ್ಥಿತಿ ನಿರ್ಮಾಣವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>