ಬತ್ತಿದ ಬಾವಿಗಳ ವಿದ್ಯುತ್ ಬಿಲ್ ಬಾಕಿ ಮನ್ನಾ
ಬೆಂಗಳೂರು, ಜುಲೈ 1– ನೈಸರ್ಗಿಕ ಕಾರಣಗಳಿಂದ ನೀರು ಬತ್ತಿಹೋಗಿರುವ ತೆರೆದ ಬಾವಿಗಳ ರೈತರು ಕೆಇಬಿಗೆ ಕೊಡಬೇಕಾಗಿರುವ ವಿದ್ಯುತ್ ದರದ ಬಾಕಿ ಅದರ ಮೇಲಿನ ಬಡ್ಡಿ ಹಾಗೂ ಸುಸ್ತಿಬಡ್ಡಿಯನ್ನು ಮನ್ನಾ ಮಾಡಲಾಗುವುದೆಂದು ಕೃಷಿ ಸಚಿವ ಸಿ. ಬೈರೇಗೌಡ ಅವರು ವಿಧಾನಸಭೆಯಲ್ಲಿ ಇಂದು ಪ್ರಕಟಿಸಿದರು.