<p><strong>ನಾಡಿಗೆ ಬಂದು ಸೆರೆಯಾದ ಕಾಡುಕೋಣ</strong></p>.<p>ವಿಜಾಪುರ, ಮಾರ್ಚ್ 21– ವಿಜಾಪುರ ಜಿಲ್ಲೆಯ ಮುಳಸಾವಳಗಿ ಗ್ರಾಮದಲ್ಲಿ ಕಳೆದ 10 ದಿನಗಳಿಂದ ಜೋಳ, ಕಬ್ಬು, ಬಾಳೆ ತೋಟಗಳಲ್ಲಿ ದಾಂದಲೆ ಮಾಡುತ್ತಿದ್ದ ತುಂಟ ಕಾಡುಕೋಣವೊಂದನ್ನು ಊರ ಜನರು ಹಿಡಿದು ಕಟ್ಟಿಹಾಕಿದ್ದು, ಅದನ್ನು ಸೋಮವಾರ ಮುಂಜಾನೆ ಬೆಂಗಳೂರಿನ ಬನ್ನೇರುಘಟ್ಟ ಪ್ರಾಣಿ ಸಂಗ್ರಹಾಲಯಕ್ಕೆ ಸಾಗಿಸಲಾಗುತ್ತಿದೆ.</p>.<p>ಸುಮಾರು 5 ಕ್ವಿಂಟಲ್ ತೂಕದ ಈ ಕೋಣವನ್ನು ಮುಳಸಾವಳಗಿಯ ಎಂಟು ಯುವಕರು ಹಗ್ಗದ ಬಲೆಯಲ್ಲಿ ಅಡ್ಡಗಟ್ಟಿ ಬೀಳಿಸಿ, ಮೂಗುದಾರ ಹಾಕಿ, ಕಾಲಿಗೆ ಹಗ್ಗ ಸಿಕ್ಕಿಸಿ ಮರಕ್ಕೆ ಕಟ್ಟಿ ಹಾಕುವ ಸಾಹಸ ಮೆರೆದಿದ್ದಾರೆ. ಇಬ್ಬರು ಗಾಯಗೊಂಡಿದ್ದಾರೆ.</p>.<p>ಕ್ರೂರ ನೋಟದ ಕಂದು ಮಿಶ್ರಿತ ತಿಳಿ ಕಪ್ಪುಬಣ್ಣದ, ಆರು ಹಲ್ಲಿನ ಈ ಆಜಾನುಬಾಹು ಕೋಣವನ್ನು ನೋಡಲು ಗ್ರಾಮದ ಸುತ್ತಮುತ್ತಲ ಊರಿನ ಜನರು ಜಾತ್ರೆಯ ಮಾದರಿಯಲ್ಲಿ ಬಂದು ಹೋಗುತ್ತಿದ್ದಾರೆ. ಹಿಂದೆಂದೂ ನಾವು ಇಂತಹ <br>ಕಾಡುಪ್ರಾಣಿಯನ್ನು ನೋಡಿರಲಿಲ್ಲ ಎಂದು ವಿಸ್ಮಯ ವ್ಯಕ್ತಪಡಿಸುತ್ತಿದ್ದಾರೆ.</p>.<p><strong>ಜಯಾ ರಕ್ಷಣೆಗೆ ಕೇಂದ್ರದ ಯತ್ನ ಇಲ್ಲ: ವಾಜಪೇಯಿ</strong></p>.<p>ತಿರುಚಿ, ಮಾರ್ಚ್ 21– ಬಿಜೆಪಿ ನೇತೃತ್ವದ ಸರ್ಕಾರ ತನ್ನ ಉಳಿವಿಗಾಗಿ ಎಐಎಡಿಎಂಕೆ ನಾಯಕಿ ಜಯಲಲಿತಾ ಅವರನ್ನು ಭ್ರಷ್ಟಾಚಾರದ ಆಪಾದನೆಯಿಂದ ಮುಕ್ತಗೊಳಿಸಲು ಯತ್ನಿಸುತ್ತಿದೆ ಎಂಬ ಆರೋಪವನ್ನು ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ತಳ್ಳಿಹಾಕಿದರು.</p>.<p>ಕಾನೂನು ತಜ್ಞರ ಅಭಿಪ್ರಾಯ ಪಡೆದೇ ಜಯಲಲಿತಾ ವಿರುದ್ಧದ ಭ್ರಷ್ಟಾಚಾರ ಪ್ರಕರಣ ಗಳನ್ನು ಮೂರು ವಿಶೇಷ ನ್ಯಾಯಾಲಯ<br>ಗಳಿಂದ ಬೇರೆಡೆಗೆ ವರ್ಗ ಮಾಡಲಾಗಿದೆ ಎಂದು ವಾಜಪೇಯಿ ತಮ್ಮ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನಾಡಿಗೆ ಬಂದು ಸೆರೆಯಾದ ಕಾಡುಕೋಣ</strong></p>.<p>ವಿಜಾಪುರ, ಮಾರ್ಚ್ 21– ವಿಜಾಪುರ ಜಿಲ್ಲೆಯ ಮುಳಸಾವಳಗಿ ಗ್ರಾಮದಲ್ಲಿ ಕಳೆದ 10 ದಿನಗಳಿಂದ ಜೋಳ, ಕಬ್ಬು, ಬಾಳೆ ತೋಟಗಳಲ್ಲಿ ದಾಂದಲೆ ಮಾಡುತ್ತಿದ್ದ ತುಂಟ ಕಾಡುಕೋಣವೊಂದನ್ನು ಊರ ಜನರು ಹಿಡಿದು ಕಟ್ಟಿಹಾಕಿದ್ದು, ಅದನ್ನು ಸೋಮವಾರ ಮುಂಜಾನೆ ಬೆಂಗಳೂರಿನ ಬನ್ನೇರುಘಟ್ಟ ಪ್ರಾಣಿ ಸಂಗ್ರಹಾಲಯಕ್ಕೆ ಸಾಗಿಸಲಾಗುತ್ತಿದೆ.</p>.<p>ಸುಮಾರು 5 ಕ್ವಿಂಟಲ್ ತೂಕದ ಈ ಕೋಣವನ್ನು ಮುಳಸಾವಳಗಿಯ ಎಂಟು ಯುವಕರು ಹಗ್ಗದ ಬಲೆಯಲ್ಲಿ ಅಡ್ಡಗಟ್ಟಿ ಬೀಳಿಸಿ, ಮೂಗುದಾರ ಹಾಕಿ, ಕಾಲಿಗೆ ಹಗ್ಗ ಸಿಕ್ಕಿಸಿ ಮರಕ್ಕೆ ಕಟ್ಟಿ ಹಾಕುವ ಸಾಹಸ ಮೆರೆದಿದ್ದಾರೆ. ಇಬ್ಬರು ಗಾಯಗೊಂಡಿದ್ದಾರೆ.</p>.<p>ಕ್ರೂರ ನೋಟದ ಕಂದು ಮಿಶ್ರಿತ ತಿಳಿ ಕಪ್ಪುಬಣ್ಣದ, ಆರು ಹಲ್ಲಿನ ಈ ಆಜಾನುಬಾಹು ಕೋಣವನ್ನು ನೋಡಲು ಗ್ರಾಮದ ಸುತ್ತಮುತ್ತಲ ಊರಿನ ಜನರು ಜಾತ್ರೆಯ ಮಾದರಿಯಲ್ಲಿ ಬಂದು ಹೋಗುತ್ತಿದ್ದಾರೆ. ಹಿಂದೆಂದೂ ನಾವು ಇಂತಹ <br>ಕಾಡುಪ್ರಾಣಿಯನ್ನು ನೋಡಿರಲಿಲ್ಲ ಎಂದು ವಿಸ್ಮಯ ವ್ಯಕ್ತಪಡಿಸುತ್ತಿದ್ದಾರೆ.</p>.<p><strong>ಜಯಾ ರಕ್ಷಣೆಗೆ ಕೇಂದ್ರದ ಯತ್ನ ಇಲ್ಲ: ವಾಜಪೇಯಿ</strong></p>.<p>ತಿರುಚಿ, ಮಾರ್ಚ್ 21– ಬಿಜೆಪಿ ನೇತೃತ್ವದ ಸರ್ಕಾರ ತನ್ನ ಉಳಿವಿಗಾಗಿ ಎಐಎಡಿಎಂಕೆ ನಾಯಕಿ ಜಯಲಲಿತಾ ಅವರನ್ನು ಭ್ರಷ್ಟಾಚಾರದ ಆಪಾದನೆಯಿಂದ ಮುಕ್ತಗೊಳಿಸಲು ಯತ್ನಿಸುತ್ತಿದೆ ಎಂಬ ಆರೋಪವನ್ನು ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ತಳ್ಳಿಹಾಕಿದರು.</p>.<p>ಕಾನೂನು ತಜ್ಞರ ಅಭಿಪ್ರಾಯ ಪಡೆದೇ ಜಯಲಲಿತಾ ವಿರುದ್ಧದ ಭ್ರಷ್ಟಾಚಾರ ಪ್ರಕರಣ ಗಳನ್ನು ಮೂರು ವಿಶೇಷ ನ್ಯಾಯಾಲಯ<br>ಗಳಿಂದ ಬೇರೆಡೆಗೆ ವರ್ಗ ಮಾಡಲಾಗಿದೆ ಎಂದು ವಾಜಪೇಯಿ ತಮ್ಮ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>