<p><strong>ಶಂಕರ್ ಬದಲಾವಣೆಯಿಂದ ದಳದಲ್ಲಿ ಹೊಸ ಬಿಕ್ಕಟ್ಟು</strong></p><p>ಬೆಂಗಳೂರು, ಜ. 16– ಜನತಾದಳ ರಾಜ್ಯ ಘಟಕದ ಅಧ್ಯಕ್ಷ ಬಿ.ಎಲ್. ಶಂಕರ್<br>ಅವರನ್ನು ದಿಢೀರನೆ ಬದಲಿಸಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಧ್ಯಕ್ಷ ಸ್ಥಾನದ ಹೆಚ್ಚುವರಿ ಹೊಣೆಗಾರಿಕೆ ಕೊಟ್ಟಿರುವುದು ದಳದ ಹೊಸ ಬಿಕ್ಕಟ್ಟಿಗೆ ಹಾಗೂ ರಾಜ್ಯ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆಯ ಪ್ರಸ್ತಾವಕ್ಕೆ ಹೊಸ ಚಾಲನೆ ನೀಡಿರುವಂತಿದೆ.</p><p>ಭಿನ್ನಮತೀಯ ಶಾಸಕರೊಂದಿಗೆ ಗುರುತಿಸಿಕೊಂಡು ಮಾಜಿ ಪ್ರಧಾನಿ<br>ಎಚ್.ಡಿ.ದೇವೇಗೌಡರ ‘ಹೊಸ ಶಿಷ್ಯ’ರಾಗಿ ದೀಕ್ಷೆ ಪಡೆದ ಸಿದ್ದರಾಮಯ್ಯನವರಿಗೆ ಅಧ್ಯಕ್ಷ ಸ್ಥಾನ ದೊರೆತಿರುವುದು ಅವರ ಪಾಲಿಗೆ ಸಂಕ್ರಾಂತಿಯ ಉಡುಗೊರೆ.</p><p>ಆದರೆ ಇದರಿಂದ ಭಿನ್ನಮತ ಪೂರ್ತಿ ತಣ್ಣಗಾಗುವ ಬದಲು ಮತ್ತೆ ತಲೆ ಎತ್ತುತ್ತಿರು ವುದು ಜನತಾದಳ ‘ಜಗಳದ ಪಕ್ಷ’ವೆಂಬ ಜನಾಭಿಪ್ರಾಯವನ್ನು ಮತ್ತೊಮ್ಮೆ ಸಾಬೀತು ಮಾಡುತ್ತಿದೆ. ಪಕ್ಷದಲ್ಲಿ ಎಲ್ಲರ ಮೆಚ್ಚುಗೆ ಗಳಿಸಿದ್ದ ಉತ್ಸಾಹಿ ಯುವ ನಾಯಕ ಶಂಕರ್ ಅವರನ್ನು ವಿನಾಕಾರಣ ಪದಚ್ಯುತ<br>ಗೊಳಿಸಿರುವುದು ಒಕ್ಕಲಿಗ ನಾಯಕರನ್ನು ಕೆರಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಂಕರ್ ಬದಲಾವಣೆಯಿಂದ ದಳದಲ್ಲಿ ಹೊಸ ಬಿಕ್ಕಟ್ಟು</strong></p><p>ಬೆಂಗಳೂರು, ಜ. 16– ಜನತಾದಳ ರಾಜ್ಯ ಘಟಕದ ಅಧ್ಯಕ್ಷ ಬಿ.ಎಲ್. ಶಂಕರ್<br>ಅವರನ್ನು ದಿಢೀರನೆ ಬದಲಿಸಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಧ್ಯಕ್ಷ ಸ್ಥಾನದ ಹೆಚ್ಚುವರಿ ಹೊಣೆಗಾರಿಕೆ ಕೊಟ್ಟಿರುವುದು ದಳದ ಹೊಸ ಬಿಕ್ಕಟ್ಟಿಗೆ ಹಾಗೂ ರಾಜ್ಯ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆಯ ಪ್ರಸ್ತಾವಕ್ಕೆ ಹೊಸ ಚಾಲನೆ ನೀಡಿರುವಂತಿದೆ.</p><p>ಭಿನ್ನಮತೀಯ ಶಾಸಕರೊಂದಿಗೆ ಗುರುತಿಸಿಕೊಂಡು ಮಾಜಿ ಪ್ರಧಾನಿ<br>ಎಚ್.ಡಿ.ದೇವೇಗೌಡರ ‘ಹೊಸ ಶಿಷ್ಯ’ರಾಗಿ ದೀಕ್ಷೆ ಪಡೆದ ಸಿದ್ದರಾಮಯ್ಯನವರಿಗೆ ಅಧ್ಯಕ್ಷ ಸ್ಥಾನ ದೊರೆತಿರುವುದು ಅವರ ಪಾಲಿಗೆ ಸಂಕ್ರಾಂತಿಯ ಉಡುಗೊರೆ.</p><p>ಆದರೆ ಇದರಿಂದ ಭಿನ್ನಮತ ಪೂರ್ತಿ ತಣ್ಣಗಾಗುವ ಬದಲು ಮತ್ತೆ ತಲೆ ಎತ್ತುತ್ತಿರು ವುದು ಜನತಾದಳ ‘ಜಗಳದ ಪಕ್ಷ’ವೆಂಬ ಜನಾಭಿಪ್ರಾಯವನ್ನು ಮತ್ತೊಮ್ಮೆ ಸಾಬೀತು ಮಾಡುತ್ತಿದೆ. ಪಕ್ಷದಲ್ಲಿ ಎಲ್ಲರ ಮೆಚ್ಚುಗೆ ಗಳಿಸಿದ್ದ ಉತ್ಸಾಹಿ ಯುವ ನಾಯಕ ಶಂಕರ್ ಅವರನ್ನು ವಿನಾಕಾರಣ ಪದಚ್ಯುತ<br>ಗೊಳಿಸಿರುವುದು ಒಕ್ಕಲಿಗ ನಾಯಕರನ್ನು ಕೆರಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>