<p>ಲಾಹೋರ್, ಫೆ. 21– ಪಾಕಿಸ್ತಾನದ ಕಾದಂಬರಿಕಾರ್ತಿಯೊಬ್ಬಳು ಭಾರತದ ಪ್ರಧಾನಿ ಎ.ಬಿ.ವಾಜಪೇಯಿ ಅವರನ್ನು ವಿವಾಹವಾಗಲು ಮುಂದೆ ಬಂದಿದ್ದಾರೆ!</p>.<p>ಆದರೆ ಅದಕ್ಕೆ ಅವರದು ಒಂದೇ ಷರತ್ತು. ವಾಜಪೇಯಿ ಅವರು ಕಾಶ್ಮೀರ ಸಮಸ್ಯೆಯನ್ನು ಪಾಕಿಸ್ತಾನ ಬಯಸುವಂತೆ ಬಗೆಹರಿಸಬೇಕು!</p>.<p>ವಾಜಪೇಯಿ ಅವರು ಕಾಶ್ಮೀರದ ವಿಷಯದಲ್ಲಿ ಮಾತುಕತೆ ಪುನರಾರಂಭಿಸಿರುವುದರಿಂದ ಹಾಗೂ ಪಾಕಿಸ್ತಾನದ ಜತೆ ಬಾಂಧವ್ಯವೃದ್ಧಿಗೆ ಪ್ರಯತ್ನ ನಡೆಸಿರುವುದರಿಂದ ಅವರ ಬಗ್ಗೆ ತಮಗೆ ಮೆಚ್ಚುಗೆ ಇದೆ ಎಂದು 37 ವರ್ಷದ ಅತಿಯಾ ಶಂಶದ್ ಹೇಳಿರುವುದಾಗಿ ಉರ್ದು ಪತ್ರಿಕೆ ‘ಜಂಗ್’ ವರದಿ ಮಾಡಿದೆ.</p>.<p>ನಾನು 1992ರಲ್ಲಿ ರಸಾಯನ ವಿಜ್ಞಾನದಲ್ಲಿ ಪಿಎಚ್.ಡಿ ಗಳಿಸಿದ್ದೇನೆ. ಭಾರತದ ಪ್ರಧಾನಿ ಕಾಶ್ಮೀರ ವಿವಾದವನ್ನು ಪಾಕಿಸ್ತಾನಕ್ಕೆ ಅನುಕೂಲಕರವಾಗಿ ತೀರ್ಮಾನಿಸಲು ಒಪ್ಪಿದರೆ ಅವರ ಜತೆ ವೈಯಕ್ತಕ ಸಂಬಂಧದ ಹೊಸ ರಸಾಯನ ವಿಜ್ಞಾನ ಅಭ್ಯಸಿಸಲಿಕ್ಕೂ ತಯಾರು’ ಎಂದು ಶಂಶದ್ ಹೇಳಿದ್ದಾರೆ.</p>.<p> ಎಲ್ಲ ಪ್ರಶ್ನೆ ಇತ್ಯರ್ಥಕ್ಕೆ ಭಾರತ–ಪಾಕ್ ಸಮ್ಮತಿ</p>.<p>ಲಾಹೋರ್, ಫೆ. 21–ಜಮ್ಮು–ಕಾಶ್ಮೀರವೂ ಸೇರಿದಂತೆ ಎಲ್ಲಾ ದ್ವಿಪಕ್ಷೀಯ ಪ್ರಶ್ನೆಗಳನ್ನು ಬಗೆಹರಿಸುವುದಕ್ಕೆ ಪ್ರಯತ್ನ ನಡೆಸುವುದಾಗಿ ಭಾರತ–ಪಾಕಿಸ್ತಾನ ಇಂದು ಇಲ್ಲಿ ಒಪ್ಪಂದ ಮಾಡಿಕೊಂಡವಲ್ಲದೆ, ಪರಸ್ಪರ ಆಂತರಿಕ ವಿಚಾರಗಳಲ್ಲಿ ಮಧ್ಯಪ್ರವೇಶ ಹಾಗೂ ಹಸ್ತಕ್ಷೇಪ ಮಾಡದೇ ಇರಲು ಸಮ್ಮತಿಸಿದವು.</p>.<p>ಭಾರತದ ಪ್ರಧಾನಿ ಎ.ಬಿ.ವಾಯಪೇಯಿ ಅವರ ಚಾರಿತ್ರಿಕ ಬಸ್ ಪ್ರಯಾಣದ ನಂತರ ಅವರು ಪಾಕಿಸ್ತಾನ ಪ್ರಧಾನಮಂತ್ರಿ ನವಾಜ್ ಷರೀಫ್ ಅವರ ಜತೆ ನಡೆಸಿದ ಶೃಂಗಸಭೆಯಲ್ಲಿ ಈ ಒಪ್ಪಂದಕ್ಕೆ ಬರಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಲಾಹೋರ್, ಫೆ. 21– ಪಾಕಿಸ್ತಾನದ ಕಾದಂಬರಿಕಾರ್ತಿಯೊಬ್ಬಳು ಭಾರತದ ಪ್ರಧಾನಿ ಎ.ಬಿ.ವಾಜಪೇಯಿ ಅವರನ್ನು ವಿವಾಹವಾಗಲು ಮುಂದೆ ಬಂದಿದ್ದಾರೆ!</p>.<p>ಆದರೆ ಅದಕ್ಕೆ ಅವರದು ಒಂದೇ ಷರತ್ತು. ವಾಜಪೇಯಿ ಅವರು ಕಾಶ್ಮೀರ ಸಮಸ್ಯೆಯನ್ನು ಪಾಕಿಸ್ತಾನ ಬಯಸುವಂತೆ ಬಗೆಹರಿಸಬೇಕು!</p>.<p>ವಾಜಪೇಯಿ ಅವರು ಕಾಶ್ಮೀರದ ವಿಷಯದಲ್ಲಿ ಮಾತುಕತೆ ಪುನರಾರಂಭಿಸಿರುವುದರಿಂದ ಹಾಗೂ ಪಾಕಿಸ್ತಾನದ ಜತೆ ಬಾಂಧವ್ಯವೃದ್ಧಿಗೆ ಪ್ರಯತ್ನ ನಡೆಸಿರುವುದರಿಂದ ಅವರ ಬಗ್ಗೆ ತಮಗೆ ಮೆಚ್ಚುಗೆ ಇದೆ ಎಂದು 37 ವರ್ಷದ ಅತಿಯಾ ಶಂಶದ್ ಹೇಳಿರುವುದಾಗಿ ಉರ್ದು ಪತ್ರಿಕೆ ‘ಜಂಗ್’ ವರದಿ ಮಾಡಿದೆ.</p>.<p>ನಾನು 1992ರಲ್ಲಿ ರಸಾಯನ ವಿಜ್ಞಾನದಲ್ಲಿ ಪಿಎಚ್.ಡಿ ಗಳಿಸಿದ್ದೇನೆ. ಭಾರತದ ಪ್ರಧಾನಿ ಕಾಶ್ಮೀರ ವಿವಾದವನ್ನು ಪಾಕಿಸ್ತಾನಕ್ಕೆ ಅನುಕೂಲಕರವಾಗಿ ತೀರ್ಮಾನಿಸಲು ಒಪ್ಪಿದರೆ ಅವರ ಜತೆ ವೈಯಕ್ತಕ ಸಂಬಂಧದ ಹೊಸ ರಸಾಯನ ವಿಜ್ಞಾನ ಅಭ್ಯಸಿಸಲಿಕ್ಕೂ ತಯಾರು’ ಎಂದು ಶಂಶದ್ ಹೇಳಿದ್ದಾರೆ.</p>.<p> ಎಲ್ಲ ಪ್ರಶ್ನೆ ಇತ್ಯರ್ಥಕ್ಕೆ ಭಾರತ–ಪಾಕ್ ಸಮ್ಮತಿ</p>.<p>ಲಾಹೋರ್, ಫೆ. 21–ಜಮ್ಮು–ಕಾಶ್ಮೀರವೂ ಸೇರಿದಂತೆ ಎಲ್ಲಾ ದ್ವಿಪಕ್ಷೀಯ ಪ್ರಶ್ನೆಗಳನ್ನು ಬಗೆಹರಿಸುವುದಕ್ಕೆ ಪ್ರಯತ್ನ ನಡೆಸುವುದಾಗಿ ಭಾರತ–ಪಾಕಿಸ್ತಾನ ಇಂದು ಇಲ್ಲಿ ಒಪ್ಪಂದ ಮಾಡಿಕೊಂಡವಲ್ಲದೆ, ಪರಸ್ಪರ ಆಂತರಿಕ ವಿಚಾರಗಳಲ್ಲಿ ಮಧ್ಯಪ್ರವೇಶ ಹಾಗೂ ಹಸ್ತಕ್ಷೇಪ ಮಾಡದೇ ಇರಲು ಸಮ್ಮತಿಸಿದವು.</p>.<p>ಭಾರತದ ಪ್ರಧಾನಿ ಎ.ಬಿ.ವಾಯಪೇಯಿ ಅವರ ಚಾರಿತ್ರಿಕ ಬಸ್ ಪ್ರಯಾಣದ ನಂತರ ಅವರು ಪಾಕಿಸ್ತಾನ ಪ್ರಧಾನಮಂತ್ರಿ ನವಾಜ್ ಷರೀಫ್ ಅವರ ಜತೆ ನಡೆಸಿದ ಶೃಂಗಸಭೆಯಲ್ಲಿ ಈ ಒಪ್ಪಂದಕ್ಕೆ ಬರಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>