<p>ಡಿ.ಎಲ್.ನರಸಿಂಹಾಚಾರ್ ನಗರ (ಕನಕಪುರ), ಫೆ. 26– ಕರ್ನಾಟಕದಲ್ಲಿ ಕನ್ನಡವೇ ಶಿಕ್ಷಣ ಮಾಧ್ಯಮವಾಗ<br>ಬೇಕು; ಆಡಳಿತ ಭಾಷೆಯಾಗಬೇಕು; ಇದಕ್ಕೆ ಸಂವಿಧಾನದ ಯಾವುದೇ ಅನುಚ್ಛೇದ<br>ಅಡ್ಡಿಯಾಗುವಂತಿದ್ದರೆ ಅದನ್ನು ನಿವಾರಿಸಲು ಸೂಕ್ತ ತಿದ್ದುಪಡಿ ತರಬೇಕು; ಗಡಿ ಸೀಮೆಯ ರಕ್ಷಣೆ, ಕನ್ನಡಿಗರಿಗೆ ಉದ್ಯೋಗಾವಕಾಶ ಸೇರಿದಂತೆ ನಾಡು–ನುಡಿ ರಕ್ಷಣೆಗೆ ಸರ್ಕಾರ ರಾಜಕೀಯ ಸಂಕಲ್ಪ ಮಾಡಬೇಕು ಎಂದು ಅಖಿಲ ಭಾರತ ಅರವತ್ತೇಳನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಹಾಗೂ ಹೆಸರಾಂತ ಕಾದಂಬರಿಕಾರ ಡಾ. ಎಸ್.ಎಲ್. ಭೈರಪ್ಪ ಕರೆ ನೀಡಿದರು.</p><p>ಇಂದು ಇಲ್ಲಿನ ಡಾ. ಅನುಪಮಾ ನಿರಂಜನ ವೇದಿಕೆಯಲ್ಲಿ ಆರಂಭವಾದ ಅರವತ್ತೇಳನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಅವರು, ‘ಕನ್ನಡ ನಾಡು–ನುಡಿಯ ಏಳ್ಗೆಗಾಗಿ ಒಳನೋಟ, ವಿಶ್ಲೇಷಣೆ, ಚಿಂತನೆಗಳಿಗೆ ಕರ್ನಾಟಕದಲ್ಲಿ ಯಾವತ್ತೂ ಕೊರತೆ ಇಲ್ಲ; ಕೊರತೆಯಿರುವುದು ಅವುಗಳನ್ನು<br>ಕಾರ್ಯಗತಗೊಳಿಸಲು ಬೇಕಾದ ರಾಜಕೀಯ ಸಂಕಲ್ಪ ಶಕ್ತಿಯಲ್ಲಿ; ನಾಡು–ನುಡಿಗಳ ಹಿತರಕ್ಷಣೆ ಮತ್ತು ಬೆಳವಣಿಗೆಗಳ ಬಗೆಗೆ ನೆರೆ ರಾಜ್ಯಗಳ ಜನರಿಗಿರುವಷ್ಟು ಸ್ಪಷ್ಟ ಪ್ರಜ್ಞೆ<br>ಕನ್ನಡಿಗರಿಗಿಲ್ಲ’ ಎಂದು ವಿಷಾದಿಸಿದರು.</p><p>‘ಮುಂದಿನ ಸಾಹಿತ್ಯ ಹೀಗೇ ಇರುತ್ತದೆ ಎಂದು ಯಾರೂ ಖಚಿತವಾಗಿ ಹೇಳಲು ಸಾಧ್ಯವಿಲ್ಲ; ಆದರೆ ಕನ್ನಡ ಸಾಹಿತ್ಯವು ಮುಂದೆಯೂ ಉಳಿಯುತ್ತದೆಯೇ ಬೆಳೆಯುತ್ತದೆಯೇ ಎಂಬ ಬಗೆಗೆ ಪ್ರತಿಯೊಬ್ಬರೂ ಆತಂಕಪಡಬೇಕಾದ ಪರಿಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿದೆ’ ಎಂದು ಆತಂಕ ವ್ಯಕ್ತಪಡಿಸಿದರು.</p><p>‘ಸಾವಿರದ ಐನೂರು ವರ್ಷಗಳ ಲಿಖಿತ ಇತಿಹಾಸವುಳ್ಳ ಕನ್ನಡ ಸಾಹಿತ್ಯದ ಸೃಜನಶೀಲತೆಯು ಇನ್ನು ಕೆಲವು ದಶಕಗಳಲ್ಲಿ ನಿಂತುಹೋಗುವ ಸಂಭವವಿದೆ. ಈ ಮುಂದಿನ ತಲೆಮಾರು ಇಂಗ್ಲಿಷಿನಲ್ಲಾದರೂ ಸಾಹಿತ್ಯ ಸೃಷ್ಟಿಸುವುದು ಸಾಧ್ಯವಿಲ್ಲ. ಏಕೆಂದರೆ ಅದು ಅವರ ಇಡೀ ಜನಾಂಗದ ಸಂಸ್ಕೃತಿಯನ್ನು ಅಭಿವ್ಯಕ್ತಿಸುವ ಭಾಷೆಯಲ್ಲ. ಎಸ್ಎಸ್ಎಲ್ಸಿ ಮುಗಿಯುವವರೆಗಾದರೂ ಕರ್ನಾಟಕದಲ್ಲಿ ಕನ್ನಡವೇ ಶಿಕ್ಷಣ ಮಾಧ್ಯಮ ಆಗಬೇಕು. ಭಾಷಾವಾರು ಪ್ರಾಂತ್ಯ ರಚನೆಯ ಮೂಲ ಉದ್ದೇಶಗಳಲ್ಲಿ ಇದೂ ಒಂದು’ ಎಂದು ಅಭಿಪ್ರಾಯಪಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಡಿ.ಎಲ್.ನರಸಿಂಹಾಚಾರ್ ನಗರ (ಕನಕಪುರ), ಫೆ. 26– ಕರ್ನಾಟಕದಲ್ಲಿ ಕನ್ನಡವೇ ಶಿಕ್ಷಣ ಮಾಧ್ಯಮವಾಗ<br>ಬೇಕು; ಆಡಳಿತ ಭಾಷೆಯಾಗಬೇಕು; ಇದಕ್ಕೆ ಸಂವಿಧಾನದ ಯಾವುದೇ ಅನುಚ್ಛೇದ<br>ಅಡ್ಡಿಯಾಗುವಂತಿದ್ದರೆ ಅದನ್ನು ನಿವಾರಿಸಲು ಸೂಕ್ತ ತಿದ್ದುಪಡಿ ತರಬೇಕು; ಗಡಿ ಸೀಮೆಯ ರಕ್ಷಣೆ, ಕನ್ನಡಿಗರಿಗೆ ಉದ್ಯೋಗಾವಕಾಶ ಸೇರಿದಂತೆ ನಾಡು–ನುಡಿ ರಕ್ಷಣೆಗೆ ಸರ್ಕಾರ ರಾಜಕೀಯ ಸಂಕಲ್ಪ ಮಾಡಬೇಕು ಎಂದು ಅಖಿಲ ಭಾರತ ಅರವತ್ತೇಳನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಹಾಗೂ ಹೆಸರಾಂತ ಕಾದಂಬರಿಕಾರ ಡಾ. ಎಸ್.ಎಲ್. ಭೈರಪ್ಪ ಕರೆ ನೀಡಿದರು.</p><p>ಇಂದು ಇಲ್ಲಿನ ಡಾ. ಅನುಪಮಾ ನಿರಂಜನ ವೇದಿಕೆಯಲ್ಲಿ ಆರಂಭವಾದ ಅರವತ್ತೇಳನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಅವರು, ‘ಕನ್ನಡ ನಾಡು–ನುಡಿಯ ಏಳ್ಗೆಗಾಗಿ ಒಳನೋಟ, ವಿಶ್ಲೇಷಣೆ, ಚಿಂತನೆಗಳಿಗೆ ಕರ್ನಾಟಕದಲ್ಲಿ ಯಾವತ್ತೂ ಕೊರತೆ ಇಲ್ಲ; ಕೊರತೆಯಿರುವುದು ಅವುಗಳನ್ನು<br>ಕಾರ್ಯಗತಗೊಳಿಸಲು ಬೇಕಾದ ರಾಜಕೀಯ ಸಂಕಲ್ಪ ಶಕ್ತಿಯಲ್ಲಿ; ನಾಡು–ನುಡಿಗಳ ಹಿತರಕ್ಷಣೆ ಮತ್ತು ಬೆಳವಣಿಗೆಗಳ ಬಗೆಗೆ ನೆರೆ ರಾಜ್ಯಗಳ ಜನರಿಗಿರುವಷ್ಟು ಸ್ಪಷ್ಟ ಪ್ರಜ್ಞೆ<br>ಕನ್ನಡಿಗರಿಗಿಲ್ಲ’ ಎಂದು ವಿಷಾದಿಸಿದರು.</p><p>‘ಮುಂದಿನ ಸಾಹಿತ್ಯ ಹೀಗೇ ಇರುತ್ತದೆ ಎಂದು ಯಾರೂ ಖಚಿತವಾಗಿ ಹೇಳಲು ಸಾಧ್ಯವಿಲ್ಲ; ಆದರೆ ಕನ್ನಡ ಸಾಹಿತ್ಯವು ಮುಂದೆಯೂ ಉಳಿಯುತ್ತದೆಯೇ ಬೆಳೆಯುತ್ತದೆಯೇ ಎಂಬ ಬಗೆಗೆ ಪ್ರತಿಯೊಬ್ಬರೂ ಆತಂಕಪಡಬೇಕಾದ ಪರಿಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿದೆ’ ಎಂದು ಆತಂಕ ವ್ಯಕ್ತಪಡಿಸಿದರು.</p><p>‘ಸಾವಿರದ ಐನೂರು ವರ್ಷಗಳ ಲಿಖಿತ ಇತಿಹಾಸವುಳ್ಳ ಕನ್ನಡ ಸಾಹಿತ್ಯದ ಸೃಜನಶೀಲತೆಯು ಇನ್ನು ಕೆಲವು ದಶಕಗಳಲ್ಲಿ ನಿಂತುಹೋಗುವ ಸಂಭವವಿದೆ. ಈ ಮುಂದಿನ ತಲೆಮಾರು ಇಂಗ್ಲಿಷಿನಲ್ಲಾದರೂ ಸಾಹಿತ್ಯ ಸೃಷ್ಟಿಸುವುದು ಸಾಧ್ಯವಿಲ್ಲ. ಏಕೆಂದರೆ ಅದು ಅವರ ಇಡೀ ಜನಾಂಗದ ಸಂಸ್ಕೃತಿಯನ್ನು ಅಭಿವ್ಯಕ್ತಿಸುವ ಭಾಷೆಯಲ್ಲ. ಎಸ್ಎಸ್ಎಲ್ಸಿ ಮುಗಿಯುವವರೆಗಾದರೂ ಕರ್ನಾಟಕದಲ್ಲಿ ಕನ್ನಡವೇ ಶಿಕ್ಷಣ ಮಾಧ್ಯಮ ಆಗಬೇಕು. ಭಾಷಾವಾರು ಪ್ರಾಂತ್ಯ ರಚನೆಯ ಮೂಲ ಉದ್ದೇಶಗಳಲ್ಲಿ ಇದೂ ಒಂದು’ ಎಂದು ಅಭಿಪ್ರಾಯಪಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>