<p><strong>ನವದೆಹಲಿ, ಮಾರ್ಚ್ 8</strong>– ಬಿಹಾರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಿದ ಸುಗ್ರೀವಾಜ್ಞೆಯನ್ನು ಇಂದು ರಾತ್ರಿ ವಾಪಸ್ ಪಡೆಯುವ ಮೂಲಕ, 24 ದಿನಗಳ ನಂತರ ರಾಬ್ಡಿದೇವಿ ನೇತೃತ್ವದ ರಾಷ್ಟ್ರೀಯ ಜನತಾದಳ ನೇತೃತ್ವದ ಸರ್ಕಾರದ ಪುನರ್ ಪ್ರತಿಷ್ಠಾಪನೆಗೆ ದಾರಿ ಮಾಡಿಕೊಡಲಾಯಿತು.</p><p>ರಾಷ್ಟ್ರಪತಿ ಆಳ್ವಿಕೆಯ ಆಜ್ಞೆಯನ್ನು ಹಿಂತೆಗೆದುಕೊಂಡಿರುವುದನ್ನು ಗೃಹ ಸಚಿವ ಅಡ್ವಾಣಿ ಲೋಕಸಭೆಗೆ ಮುಜುಗರದಿಂದ ತಿಳಿಸಿದರು. ಪ್ರಧಾನಿ ವಾಜಪೇಯಿ ಅವರು ರಾಜ್ಯಸಭೆಯಲ್ಲಿ ಬಿಹಾರದ ಗೊತ್ತುವಳಿಗೆ ಕಾಂಗ್ರೆಸ್ ಪಕ್ಷದ ಬೆಂಬಲ ಪಡೆಯಲು ಅದರ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಜತೆ ನಡೆಸಿದ ಮಾತುಕತೆ ವಿಫಲವಾಗಿತ್ತು.</p><p>ಗೊತ್ತುವಳಿಯನ್ನು ವಿರೋಧಿ ಕಾಂಗ್ರೆಸ್ ಪಕ್ಷವು ರಾಜ್ಯಸಭೆಯಲ್ಲಿ ಬೆಂಬಲಿಸದೇ ಇರಲು ಕೈಗೊಂಡ ದೃಢ ನಿರ್ಧಾರದ ಹಿನ್ನೆಲೆಯಲ್ಲಿ ಕೇಂದ್ರಕ್ಕೆ ಕೈಕಟ್ಟಿದಂತಾಯಿತು. ಇಂದು ಬೆಳಿಗ್ಗೆ ನಡೆದ ಸಚಿವ ಸಂಪುಟದ ಸಭೆಯು ರಾಷ್ಟ್ರಪತಿ ಆಜ್ಞೆಯನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ, ಮಾರ್ಚ್ 8</strong>– ಬಿಹಾರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಿದ ಸುಗ್ರೀವಾಜ್ಞೆಯನ್ನು ಇಂದು ರಾತ್ರಿ ವಾಪಸ್ ಪಡೆಯುವ ಮೂಲಕ, 24 ದಿನಗಳ ನಂತರ ರಾಬ್ಡಿದೇವಿ ನೇತೃತ್ವದ ರಾಷ್ಟ್ರೀಯ ಜನತಾದಳ ನೇತೃತ್ವದ ಸರ್ಕಾರದ ಪುನರ್ ಪ್ರತಿಷ್ಠಾಪನೆಗೆ ದಾರಿ ಮಾಡಿಕೊಡಲಾಯಿತು.</p><p>ರಾಷ್ಟ್ರಪತಿ ಆಳ್ವಿಕೆಯ ಆಜ್ಞೆಯನ್ನು ಹಿಂತೆಗೆದುಕೊಂಡಿರುವುದನ್ನು ಗೃಹ ಸಚಿವ ಅಡ್ವಾಣಿ ಲೋಕಸಭೆಗೆ ಮುಜುಗರದಿಂದ ತಿಳಿಸಿದರು. ಪ್ರಧಾನಿ ವಾಜಪೇಯಿ ಅವರು ರಾಜ್ಯಸಭೆಯಲ್ಲಿ ಬಿಹಾರದ ಗೊತ್ತುವಳಿಗೆ ಕಾಂಗ್ರೆಸ್ ಪಕ್ಷದ ಬೆಂಬಲ ಪಡೆಯಲು ಅದರ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಜತೆ ನಡೆಸಿದ ಮಾತುಕತೆ ವಿಫಲವಾಗಿತ್ತು.</p><p>ಗೊತ್ತುವಳಿಯನ್ನು ವಿರೋಧಿ ಕಾಂಗ್ರೆಸ್ ಪಕ್ಷವು ರಾಜ್ಯಸಭೆಯಲ್ಲಿ ಬೆಂಬಲಿಸದೇ ಇರಲು ಕೈಗೊಂಡ ದೃಢ ನಿರ್ಧಾರದ ಹಿನ್ನೆಲೆಯಲ್ಲಿ ಕೇಂದ್ರಕ್ಕೆ ಕೈಕಟ್ಟಿದಂತಾಯಿತು. ಇಂದು ಬೆಳಿಗ್ಗೆ ನಡೆದ ಸಚಿವ ಸಂಪುಟದ ಸಭೆಯು ರಾಷ್ಟ್ರಪತಿ ಆಜ್ಞೆಯನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>