<p> <strong>ನಿಜಲಿಂಗಪ್ಪ ಕಿರೀಟಕ್ಕೆ ‘ಕರ್ನಾಟಕ ರತ್ನ’</strong></p> <p><strong>ಚಿತ್ರದುರ್ಗ, ಅ. 2–</strong> ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 131ನೇ ಜನ್ಮದಿನವಾದ ಇಂದು ಇಲ್ಲಿ ನಡೆದ ಭಾವಪೂರ್ಣ ಸಮಾರಂಭದಲ್ಲಿ ಹಿರಿಯ ಗಾಂಧಿವಾದಿ, ಮುತ್ಸದ್ದಿ, ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಅವರಿಗೆ ನಾಡಿನ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಕರ್ನಾಟಕ ರತ್ನ’ ಪ್ರದಾನ ಮಾಡಿ ಗೌರವಿಸಲಾಯಿತು.</p><p>98ರ ಇಳಿ ವಯಸ್ಸಿನ ಈ ಹಿರಿಯ ಚೇತನಕ್ಕೆ ಸಾವಿರಾರು ಅಭಿಮಾನಿಗಳ ಕಿವಿಗಡಚಿಕ್ಕುವ ಚಪ್ಪಾಳೆಯ ಹಿಮ್ಮೇಳದ ಮಧ್ಯೆ ರಾಜ್ಯ ಸರ್ಕಾರದ ಪರವಾಗಿ ಮುಖ್ಯಮಂತ್ರಿಗಳ ಗೈರುಹಾಜರಿಯಲ್ಲಿ ಗ್ರಾಮೀಣಾಭಿ<br>ವೃದ್ಧಿ ಸಚಿವ ಎಂ.ಪಿ. ಪ್ರಕಾಶ್ ಅವರು ಭಾರಿ ಗಾತ್ರದ ತ್ರಿವರ್ಣಮಯ ಹಾರ, ಚಿನ್ನದ ಪದಕ, ಪ್ರಶಸ್ತಿ ಫಲಕ, ಶಾಲು, ಫಲ–ತಾಂಬೂಲ ನೀಡಿ ಸನ್ಮಾನಿಸಿದರು.</p><p>‘ಇದು ಬದುಕಿನ ಅತ್ಯಂತ ಅಪರೂಪದ ಸಮಯ. ಭಾರತದ ಅಂತಃಸಾಕ್ಷಿಯ ಪ್ರತೀಕ, ಧೀಮಂತ ಚೇತನ ಎಸ್ಸೆನ್ಗೆ ಕರ್ನಾಟಕ ರತ್ನ ಪ್ರಶಸ್ತಿ ಕೊಡುವುದು ಹೆಗ್ಗಳಿಕೆಯಲ್ಲ. ಆದರೆ, ಅವರು ಅದನ್ನು ಸ್ವೀಕರಿಸಲು ಒಪ್ಪಿರುವುದು ನಮ್ಮೆಲ್ಲರ ಮತ್ತು ಈ ನಾಡಿನ ಸೌಭಾಗ್ಯ’ ಎಂದು ಪ್ರಕಾಶ್ ಭಾವಪರವಶರಾಗಿ ಹೇಳಿದರು.</p><p><strong>ಕುಂಸಿ: ಕಾಡುಗಳ್ಳರ ಮೇಲೆ ಗುಂಡು, ಒಬ್ಬನ ಸಾವು</strong></p><p>ಶಿವಮೊಗ್ಗ, ಅ. 2– ಕಾಡುಗಳ್ಳರ ಮೇಲೆ ಅರಣ್ಯ ಸಿಬ್ಬಂದಿ ಹಾರಿಸಿದ ಗುಂಡು ತಗುಲಿ ಒಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ಇಲ್ಲಿಗೆ ಸಮೀಪದ ಕುಂಸಿ ಬಳಿಯ ದೊಡ್ಡಮಟ್ಟಿ ಕಾಡಿನಲ್ಲಿ ಶುಕ್ರವಾರ ಮಧ್ಯಾಹ್ನ ಸಂಭವಿಸಿದೆ.</p><p>ಮೃತನನ್ನು ಕುಂಸಿ ಸಮೀಪದ ವಿಟಗೊಂಡನಕೊಪ್ಪದ ಪರಮೇಶ್ವರ (30) ಎಂದು ಗುರುತಿಸಲಾಗಿದೆ. ಸುಮಾರು 20–25 ಜನರ ಗುಂಪೊಂದು ಕಾಡಿನಿಂದ ಸಾಗುವಾನಿ ಮರಗಳನ್ನು ಕಡಿದು ಸಾಗಿಸುತ್ತಿರುವ ಮಾಹಿತಿ ಮೇರೆಗೆ ಆಯನೂರು ವಲಯ ಅರಣ್ಯಾಧಿಕಾರಿ ಮಂಜಪ್ಪ ಮತ್ತು ಸಿಬ್ಬಂದಿ ಸ್ಥಳಕ್ಕೆ ತೆರಳಿ ಗಾಳಿಯಲ್ಲಿ ಗುಂಡು ಹಾರಿಸಿ ಮರಗಳ್ಳರನ್ನು ಬೆದರಿಸಿ ಓಡಿಸುವ ಪ್ರಯತ್ನ ಮಾಡಿದರು. ಆದರೆ, ಮರಗಳ್ಳರು ಜಗ್ಗದೆ ಅರಣ್ಯ ಸಿಬ್ಬಂದಿಯ ಮೇಲೆ ಕಲ್ಲುಗಳನ್ನೆಸೆಯುತ್ತ ಮಚ್ಚು, ಕೊಡಲಿಗಳಿಂದ ಹಲ್ಲೆ ಮಾಡಲು ಮುಂದಾದಾಗ ಅವರ ಮೇಲೆ ಗುಂಡು ಹಾರಿಸಬೇಕಾಯಿತು ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.</p><p>ಆದರೆ ದನ ಮೇಯಿಸಲು ಹೋಗಿದ್ದ ಪರಮೇಶ್ವರನನ್ನು ಅರಣ್ಯ ಸಿಬ್ಬಂದಿ ಗುಂಡು ಹಾರಿಸಿ ಕೊಂದು ಆತನ ಮೇಲೆ ಮರಗಳ್ಳತನದ ಆರೋಪ ಹೊರಿಸಿದ್ದಾರೆ ಎಂದು ಆಪಾದಿಸಿ ವಿಟಗೊಂಡನಕೊಪ್ಪ ಮತ್ತು ಹಾರ್ನಳ್ಳಿ ಭಾಗದ ಜನ ಕುಂಸಿ ಪೊಲೀಸ್ ಠಾಣೆಯ ಮುಂದೆ ಇಂದು ಪ್ರತಿಭಟನೆ ನಡೆಸಿದರು.</p><p><strong>ಅಸ್ಸಾಂನಲ್ಲಿ ಹಿಂಸಾಚಾರ: 11 ಸಾವು</strong></p><p>ಗುವಾಹಟಿ, ಅ. 2 (ಪಿಟಿಐ)– ಅಸ್ಸಾಂನಲ್ಲಿ ಮತದಾನ ಬಹಿಷ್ಕಾರಕ್ಕೆ ಕರೆ ನೀಡಿರುವ ಉಗ್ರಗಾಮಿ ಸಂಘಟನೆಯಾದ ಉಲ್ಫಾ, ರಾಜ್ಯದ ಹಲವೆಡೆ ಇಂದು ನಡೆಸಿರುವ ಹಿಂಸಾ<br>ಚಾರಗಳಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆಯ ನಾಲ್ವರು ಸಿಬ್ಬಂದಿ ಸೇರಿದಂತೆ ಒಟ್ಟು 11 ಮಂದಿ ಸತ್ತಿದ್ದಾರೆ. ಎರಡು ಮತಗಟ್ಟೆಗಳನ್ನು ಧ್ವಂಸ ಮಾಡಲಾಗಿದೆ. ಭದ್ರತಾ ಪಡೆಯ 13 ಸಿಬ್ಬಂದಿ ಗಾಯಗೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p> <strong>ನಿಜಲಿಂಗಪ್ಪ ಕಿರೀಟಕ್ಕೆ ‘ಕರ್ನಾಟಕ ರತ್ನ’</strong></p> <p><strong>ಚಿತ್ರದುರ್ಗ, ಅ. 2–</strong> ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 131ನೇ ಜನ್ಮದಿನವಾದ ಇಂದು ಇಲ್ಲಿ ನಡೆದ ಭಾವಪೂರ್ಣ ಸಮಾರಂಭದಲ್ಲಿ ಹಿರಿಯ ಗಾಂಧಿವಾದಿ, ಮುತ್ಸದ್ದಿ, ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಅವರಿಗೆ ನಾಡಿನ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಕರ್ನಾಟಕ ರತ್ನ’ ಪ್ರದಾನ ಮಾಡಿ ಗೌರವಿಸಲಾಯಿತು.</p><p>98ರ ಇಳಿ ವಯಸ್ಸಿನ ಈ ಹಿರಿಯ ಚೇತನಕ್ಕೆ ಸಾವಿರಾರು ಅಭಿಮಾನಿಗಳ ಕಿವಿಗಡಚಿಕ್ಕುವ ಚಪ್ಪಾಳೆಯ ಹಿಮ್ಮೇಳದ ಮಧ್ಯೆ ರಾಜ್ಯ ಸರ್ಕಾರದ ಪರವಾಗಿ ಮುಖ್ಯಮಂತ್ರಿಗಳ ಗೈರುಹಾಜರಿಯಲ್ಲಿ ಗ್ರಾಮೀಣಾಭಿ<br>ವೃದ್ಧಿ ಸಚಿವ ಎಂ.ಪಿ. ಪ್ರಕಾಶ್ ಅವರು ಭಾರಿ ಗಾತ್ರದ ತ್ರಿವರ್ಣಮಯ ಹಾರ, ಚಿನ್ನದ ಪದಕ, ಪ್ರಶಸ್ತಿ ಫಲಕ, ಶಾಲು, ಫಲ–ತಾಂಬೂಲ ನೀಡಿ ಸನ್ಮಾನಿಸಿದರು.</p><p>‘ಇದು ಬದುಕಿನ ಅತ್ಯಂತ ಅಪರೂಪದ ಸಮಯ. ಭಾರತದ ಅಂತಃಸಾಕ್ಷಿಯ ಪ್ರತೀಕ, ಧೀಮಂತ ಚೇತನ ಎಸ್ಸೆನ್ಗೆ ಕರ್ನಾಟಕ ರತ್ನ ಪ್ರಶಸ್ತಿ ಕೊಡುವುದು ಹೆಗ್ಗಳಿಕೆಯಲ್ಲ. ಆದರೆ, ಅವರು ಅದನ್ನು ಸ್ವೀಕರಿಸಲು ಒಪ್ಪಿರುವುದು ನಮ್ಮೆಲ್ಲರ ಮತ್ತು ಈ ನಾಡಿನ ಸೌಭಾಗ್ಯ’ ಎಂದು ಪ್ರಕಾಶ್ ಭಾವಪರವಶರಾಗಿ ಹೇಳಿದರು.</p><p><strong>ಕುಂಸಿ: ಕಾಡುಗಳ್ಳರ ಮೇಲೆ ಗುಂಡು, ಒಬ್ಬನ ಸಾವು</strong></p><p>ಶಿವಮೊಗ್ಗ, ಅ. 2– ಕಾಡುಗಳ್ಳರ ಮೇಲೆ ಅರಣ್ಯ ಸಿಬ್ಬಂದಿ ಹಾರಿಸಿದ ಗುಂಡು ತಗುಲಿ ಒಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ಇಲ್ಲಿಗೆ ಸಮೀಪದ ಕುಂಸಿ ಬಳಿಯ ದೊಡ್ಡಮಟ್ಟಿ ಕಾಡಿನಲ್ಲಿ ಶುಕ್ರವಾರ ಮಧ್ಯಾಹ್ನ ಸಂಭವಿಸಿದೆ.</p><p>ಮೃತನನ್ನು ಕುಂಸಿ ಸಮೀಪದ ವಿಟಗೊಂಡನಕೊಪ್ಪದ ಪರಮೇಶ್ವರ (30) ಎಂದು ಗುರುತಿಸಲಾಗಿದೆ. ಸುಮಾರು 20–25 ಜನರ ಗುಂಪೊಂದು ಕಾಡಿನಿಂದ ಸಾಗುವಾನಿ ಮರಗಳನ್ನು ಕಡಿದು ಸಾಗಿಸುತ್ತಿರುವ ಮಾಹಿತಿ ಮೇರೆಗೆ ಆಯನೂರು ವಲಯ ಅರಣ್ಯಾಧಿಕಾರಿ ಮಂಜಪ್ಪ ಮತ್ತು ಸಿಬ್ಬಂದಿ ಸ್ಥಳಕ್ಕೆ ತೆರಳಿ ಗಾಳಿಯಲ್ಲಿ ಗುಂಡು ಹಾರಿಸಿ ಮರಗಳ್ಳರನ್ನು ಬೆದರಿಸಿ ಓಡಿಸುವ ಪ್ರಯತ್ನ ಮಾಡಿದರು. ಆದರೆ, ಮರಗಳ್ಳರು ಜಗ್ಗದೆ ಅರಣ್ಯ ಸಿಬ್ಬಂದಿಯ ಮೇಲೆ ಕಲ್ಲುಗಳನ್ನೆಸೆಯುತ್ತ ಮಚ್ಚು, ಕೊಡಲಿಗಳಿಂದ ಹಲ್ಲೆ ಮಾಡಲು ಮುಂದಾದಾಗ ಅವರ ಮೇಲೆ ಗುಂಡು ಹಾರಿಸಬೇಕಾಯಿತು ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.</p><p>ಆದರೆ ದನ ಮೇಯಿಸಲು ಹೋಗಿದ್ದ ಪರಮೇಶ್ವರನನ್ನು ಅರಣ್ಯ ಸಿಬ್ಬಂದಿ ಗುಂಡು ಹಾರಿಸಿ ಕೊಂದು ಆತನ ಮೇಲೆ ಮರಗಳ್ಳತನದ ಆರೋಪ ಹೊರಿಸಿದ್ದಾರೆ ಎಂದು ಆಪಾದಿಸಿ ವಿಟಗೊಂಡನಕೊಪ್ಪ ಮತ್ತು ಹಾರ್ನಳ್ಳಿ ಭಾಗದ ಜನ ಕುಂಸಿ ಪೊಲೀಸ್ ಠಾಣೆಯ ಮುಂದೆ ಇಂದು ಪ್ರತಿಭಟನೆ ನಡೆಸಿದರು.</p><p><strong>ಅಸ್ಸಾಂನಲ್ಲಿ ಹಿಂಸಾಚಾರ: 11 ಸಾವು</strong></p><p>ಗುವಾಹಟಿ, ಅ. 2 (ಪಿಟಿಐ)– ಅಸ್ಸಾಂನಲ್ಲಿ ಮತದಾನ ಬಹಿಷ್ಕಾರಕ್ಕೆ ಕರೆ ನೀಡಿರುವ ಉಗ್ರಗಾಮಿ ಸಂಘಟನೆಯಾದ ಉಲ್ಫಾ, ರಾಜ್ಯದ ಹಲವೆಡೆ ಇಂದು ನಡೆಸಿರುವ ಹಿಂಸಾ<br>ಚಾರಗಳಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆಯ ನಾಲ್ವರು ಸಿಬ್ಬಂದಿ ಸೇರಿದಂತೆ ಒಟ್ಟು 11 ಮಂದಿ ಸತ್ತಿದ್ದಾರೆ. ಎರಡು ಮತಗಟ್ಟೆಗಳನ್ನು ಧ್ವಂಸ ಮಾಡಲಾಗಿದೆ. ಭದ್ರತಾ ಪಡೆಯ 13 ಸಿಬ್ಬಂದಿ ಗಾಯಗೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>