<p><strong>ದಾಳಿ ಸ್ಥಗಿತ: ಅಮೆರಿಕ ಹಟಕ್ಕೆ ಜಗ್ಗದ ಇರಾಕ್ </strong></p><p><strong>ವಾಷಿಂಗ್ಟನ್, ಡಿ. 20 (ಪಿಟಿಐ)–</strong> ಇರಾಕ್ ಮೇಲಿನ ನಾಲ್ಕು ದಿನಗಳ ತಮ್ಮ ಮಿಲಿಟರಿ ದಾಳಿಯನ್ನು ಅಮೆರಿಕ ಹಾಗೂ ಬ್ರಿಟನ್ ಸ್ಥಗಿತಗೊಳಿಸಿದವು; ‘ನಮ್ಮ ಉದ್ದೇಶ ಸಾಧನೆ ಆಗಿದೆ’ ಎಂದು ಅವು ಪ್ರಕಟಿಸಿವೆ.</p>.<p>ಬಾಗ್ದಾದ್ಗೆ ಗಮನಾರ್ಹ ಹಾನಿಯಾಗಿದೆ ಎಂದು ತಿಳಿಸಿರುವ ಅಮೆರಿಕ ಹಾಗೂ ಬ್ರಿಟನ್ ‘ಅಗತ್ಯವೆನಿಸಿದರೆ ಮತ್ತೆ ದಾಳಿ ಮಾಡುವೆವು’ ಎಂಬ ಎಚ್ಚರಿಕೆಯನ್ನೂ ನೀಡಿವೆ.</p>.<p>ಇರಾಕನ್ನು ‘ದಂಡಿಸುವ’ ಉದ್ದೇಶದ ನಾಲ್ಕು ದಿನಗಳ ವಾಯುಸೇನಾ ಕಾರ್ಯಾ<br>ಚರಣೆಯನ್ನು ನಿಲ್ಲಿಸಿರುವುದಾಗಿ ಘೋಷಿಸಿದ ಅಮೆರಿಕದ ಅಧ್ಯಕ್ಷ ಕ್ಲಿಂಟನ್ ‘ನಮ್ಮ ಉದ್ದೇಶ ಸಾಧನೆ ಆಗಿದೆ. ಸದ್ದಾಂ ಅವರ ಸಾಮೂಹಿಕ ವಿನಾಶದ ಶಸ್ತ್ರ ನಿರ್ಮಾಣ ಸವಲತ್ತುಗಳಿಗೆ, ಸೇನಾ ನೆಲೆಗಳಿಗೆ ಹಾಗೂ ಭದ್ರತಾ ನೆಲೆಗಳಿಗೆ ಗಮನಾರ್ಹ ಹಾನಿ ಉಂಟು ಮಾಡಿದ್ದೇವೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.</p>.<p><strong>ಠಾಣೆಗೆ ವೀರಪ್ಪನ್ ಹಠಾತ್ ದಾಳಿ ಹಣ, ಬಂದೂಕು ಲೂಟಿ</strong></p><p><strong>ಕೊಯಮತ್ತೂರು, ಡಿ. 20 (ಪಿಟಿಐ)–</strong> ಕುಖ್ಯಾತ ದಂತಚೋರ ವೀರಪ್ಪನ್ ತನ್ನ ಒಂಬತ್ತು ಮಂದಿ ಸಹಚರರೊಂದಿಗೆ ಈರೋಡ್ ಜಿಲ್ಲೆಯ ಅಂದಿಯೂರು ಸಮೀಪದ ವೆಲ್ಲಿತಿರುಪೂರು ಪೊಲೀಸ್ ಠಾಣೆಗೆ ಇಂದು ರಾತ್ರಿ ಹಠಾತ್ ದಾಳಿ ನಡೆಸಿ, ರೂ. 5 ಸಾವಿರ ನಗದು, 9 ಬಂದೂಕು ಮತ್ತು ಮದ್ದುಗುಂಡುಗಳನ್ನು ಕಸಿದುಕೊಂಡು ಪರಾರಿಯಾಗಿದ್ದಾನೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾಳಿ ಸ್ಥಗಿತ: ಅಮೆರಿಕ ಹಟಕ್ಕೆ ಜಗ್ಗದ ಇರಾಕ್ </strong></p><p><strong>ವಾಷಿಂಗ್ಟನ್, ಡಿ. 20 (ಪಿಟಿಐ)–</strong> ಇರಾಕ್ ಮೇಲಿನ ನಾಲ್ಕು ದಿನಗಳ ತಮ್ಮ ಮಿಲಿಟರಿ ದಾಳಿಯನ್ನು ಅಮೆರಿಕ ಹಾಗೂ ಬ್ರಿಟನ್ ಸ್ಥಗಿತಗೊಳಿಸಿದವು; ‘ನಮ್ಮ ಉದ್ದೇಶ ಸಾಧನೆ ಆಗಿದೆ’ ಎಂದು ಅವು ಪ್ರಕಟಿಸಿವೆ.</p>.<p>ಬಾಗ್ದಾದ್ಗೆ ಗಮನಾರ್ಹ ಹಾನಿಯಾಗಿದೆ ಎಂದು ತಿಳಿಸಿರುವ ಅಮೆರಿಕ ಹಾಗೂ ಬ್ರಿಟನ್ ‘ಅಗತ್ಯವೆನಿಸಿದರೆ ಮತ್ತೆ ದಾಳಿ ಮಾಡುವೆವು’ ಎಂಬ ಎಚ್ಚರಿಕೆಯನ್ನೂ ನೀಡಿವೆ.</p>.<p>ಇರಾಕನ್ನು ‘ದಂಡಿಸುವ’ ಉದ್ದೇಶದ ನಾಲ್ಕು ದಿನಗಳ ವಾಯುಸೇನಾ ಕಾರ್ಯಾ<br>ಚರಣೆಯನ್ನು ನಿಲ್ಲಿಸಿರುವುದಾಗಿ ಘೋಷಿಸಿದ ಅಮೆರಿಕದ ಅಧ್ಯಕ್ಷ ಕ್ಲಿಂಟನ್ ‘ನಮ್ಮ ಉದ್ದೇಶ ಸಾಧನೆ ಆಗಿದೆ. ಸದ್ದಾಂ ಅವರ ಸಾಮೂಹಿಕ ವಿನಾಶದ ಶಸ್ತ್ರ ನಿರ್ಮಾಣ ಸವಲತ್ತುಗಳಿಗೆ, ಸೇನಾ ನೆಲೆಗಳಿಗೆ ಹಾಗೂ ಭದ್ರತಾ ನೆಲೆಗಳಿಗೆ ಗಮನಾರ್ಹ ಹಾನಿ ಉಂಟು ಮಾಡಿದ್ದೇವೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.</p>.<p><strong>ಠಾಣೆಗೆ ವೀರಪ್ಪನ್ ಹಠಾತ್ ದಾಳಿ ಹಣ, ಬಂದೂಕು ಲೂಟಿ</strong></p><p><strong>ಕೊಯಮತ್ತೂರು, ಡಿ. 20 (ಪಿಟಿಐ)–</strong> ಕುಖ್ಯಾತ ದಂತಚೋರ ವೀರಪ್ಪನ್ ತನ್ನ ಒಂಬತ್ತು ಮಂದಿ ಸಹಚರರೊಂದಿಗೆ ಈರೋಡ್ ಜಿಲ್ಲೆಯ ಅಂದಿಯೂರು ಸಮೀಪದ ವೆಲ್ಲಿತಿರುಪೂರು ಪೊಲೀಸ್ ಠಾಣೆಗೆ ಇಂದು ರಾತ್ರಿ ಹಠಾತ್ ದಾಳಿ ನಡೆಸಿ, ರೂ. 5 ಸಾವಿರ ನಗದು, 9 ಬಂದೂಕು ಮತ್ತು ಮದ್ದುಗುಂಡುಗಳನ್ನು ಕಸಿದುಕೊಂಡು ಪರಾರಿಯಾಗಿದ್ದಾನೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>