<p><strong>ಮತ್ತೆ ಗಿರಿ ಸ್ಪರ್ಧೆ ಇಲ್ಲ: ವಿರೋಧ ಪಕ್ಷಗಳ ಯತ್ನ ವಿಫಲ</strong></p>.<p>ನವದೆಹಲಿ, ಜುಲೈ 14– ಮತ್ತೆ ಸ್ಪರ್ಧಿಸುವಂತೆ ಗಿರಿ ಅವರನ್ನು ಭೇಟಿ ಮಾಡಿ ಅವರ ಮನ ಒಲಿಸಲು ಆರು ವಿರೋಧಿ ಪಕ್ಷಗಳ ಪ್ರತಿನಿಧಿಗಳು ಇಂದು ನಡೆಸಿದ ಪ್ರಯತ್ನ ಫಲಿಸಲಿಲ್ಲ.</p>.<p>ರಾಷ್ಟ್ರಪತಿ ಸ್ಥಾನಕ್ಕೆ ಎರಡನೇ ಬಾರಿ ಸ್ಪರ್ಧಿಸಬಾರದೆಂದು ಈಗಾಗಲೇ ಕೈಗೊಂಡ ನಿರ್ಧಾರವನ್ನು ನಿಯೋಗಕ್ಕೆ ತಿಳಿಸಿದ ಗಿರಿ ಅವರು ಅವರ ಮನವಿಯನ್ನು ತಿರಸ್ಕರಿಸಿದರು.</p>.<p>ಶ್ರೀಮಂತ ರೈತರ ಮೇಲೆ ಹೆಚ್ಚು ತೆರಿಗೆ ಕುರಿತು ಪರಿಶೀಲನೆ – ಅರಸು</p>.<p>ಬೆಂಗಳೂರು, ಜುಲೈ 14– ಹಣವಂತ ರೈತರ ಮೇಲೆ ಹೆಚ್ಚಿನ ತೆರಿಗೆ ವಿಧಿಸುವ ಮಾರ್ಗ ಕುರಿತು ಪರಿಶೀಲನೆ ನಡೆಯಬೇಕಾಗಿದೆ<br>ಯೆಂದು ಮುಖ್ಯಮಂತ್ರಿ ಶ್ರೀ ಅರಸು ಅವರು ಇಂದು ಇಲ್ಲಿ ವರದಿಗಾರರಿಗೆ ತಿಳಿಸಿದರು.</p>.<p>ಹಣದುಬ್ಬರವನ್ನು ಕಡಿಮೆ ಮಾಡಲು ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಸಲಹೆ ಮಾಡಿದ ನಾನಾ ಕ್ರಮಗಳನ್ನು ಕುರಿತು ಕೇಳಿದ ಪ್ರಶ್ನೆಯೊಂದಕ್ಕೆ ಮುಖ್ಯಮಂತ್ರಿಗಳು ಉತ್ತರವಿತ್ತು, ಹಣವಂತ ರೈತರಿಂದ ಹೆಚ್ಚು ಆದಾಯ ಪಡೆಯಲು ಯತ್ನಿಸಬೇಕೆಂಬ ಬಗ್ಗೆ ಎರಡು ಅಭಿಪ್ರಾಯವಿಲ್ಲವೆಂದು ಸ್ಪಷ್ಟಪಡಿಸಿ ‘ಯಾವ ಮಾರ್ಗದಲ್ಲಿ ಈ ಕೆಲಸ ಮಾಡಬೇಕಾಗಿದೆ ಎಂಬುದನ್ನು ಪರಿಶೀಲಿಸ<br>ಬೇಕಾಗಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮತ್ತೆ ಗಿರಿ ಸ್ಪರ್ಧೆ ಇಲ್ಲ: ವಿರೋಧ ಪಕ್ಷಗಳ ಯತ್ನ ವಿಫಲ</strong></p>.<p>ನವದೆಹಲಿ, ಜುಲೈ 14– ಮತ್ತೆ ಸ್ಪರ್ಧಿಸುವಂತೆ ಗಿರಿ ಅವರನ್ನು ಭೇಟಿ ಮಾಡಿ ಅವರ ಮನ ಒಲಿಸಲು ಆರು ವಿರೋಧಿ ಪಕ್ಷಗಳ ಪ್ರತಿನಿಧಿಗಳು ಇಂದು ನಡೆಸಿದ ಪ್ರಯತ್ನ ಫಲಿಸಲಿಲ್ಲ.</p>.<p>ರಾಷ್ಟ್ರಪತಿ ಸ್ಥಾನಕ್ಕೆ ಎರಡನೇ ಬಾರಿ ಸ್ಪರ್ಧಿಸಬಾರದೆಂದು ಈಗಾಗಲೇ ಕೈಗೊಂಡ ನಿರ್ಧಾರವನ್ನು ನಿಯೋಗಕ್ಕೆ ತಿಳಿಸಿದ ಗಿರಿ ಅವರು ಅವರ ಮನವಿಯನ್ನು ತಿರಸ್ಕರಿಸಿದರು.</p>.<p>ಶ್ರೀಮಂತ ರೈತರ ಮೇಲೆ ಹೆಚ್ಚು ತೆರಿಗೆ ಕುರಿತು ಪರಿಶೀಲನೆ – ಅರಸು</p>.<p>ಬೆಂಗಳೂರು, ಜುಲೈ 14– ಹಣವಂತ ರೈತರ ಮೇಲೆ ಹೆಚ್ಚಿನ ತೆರಿಗೆ ವಿಧಿಸುವ ಮಾರ್ಗ ಕುರಿತು ಪರಿಶೀಲನೆ ನಡೆಯಬೇಕಾಗಿದೆ<br>ಯೆಂದು ಮುಖ್ಯಮಂತ್ರಿ ಶ್ರೀ ಅರಸು ಅವರು ಇಂದು ಇಲ್ಲಿ ವರದಿಗಾರರಿಗೆ ತಿಳಿಸಿದರು.</p>.<p>ಹಣದುಬ್ಬರವನ್ನು ಕಡಿಮೆ ಮಾಡಲು ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಸಲಹೆ ಮಾಡಿದ ನಾನಾ ಕ್ರಮಗಳನ್ನು ಕುರಿತು ಕೇಳಿದ ಪ್ರಶ್ನೆಯೊಂದಕ್ಕೆ ಮುಖ್ಯಮಂತ್ರಿಗಳು ಉತ್ತರವಿತ್ತು, ಹಣವಂತ ರೈತರಿಂದ ಹೆಚ್ಚು ಆದಾಯ ಪಡೆಯಲು ಯತ್ನಿಸಬೇಕೆಂಬ ಬಗ್ಗೆ ಎರಡು ಅಭಿಪ್ರಾಯವಿಲ್ಲವೆಂದು ಸ್ಪಷ್ಟಪಡಿಸಿ ‘ಯಾವ ಮಾರ್ಗದಲ್ಲಿ ಈ ಕೆಲಸ ಮಾಡಬೇಕಾಗಿದೆ ಎಂಬುದನ್ನು ಪರಿಶೀಲಿಸ<br>ಬೇಕಾಗಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>