<p><strong>ಸಮಸ್ಯೆಗಳು ಇತ್ಯರ್ಥವಾಗದಿದ್ದರೆ ರಾಷ್ಟ್ರದಾದ್ಯಂತ ಚಳವಳಿ: ಜೆ.ಪಿ</strong></p><p>ಜಯಪುರ, ಅ. 25– ಭ್ರಷ್ಟಾಚಾರ, ಬೆಲೆ ಏರಿಕೆ, ನಿರುದ್ಯೋಗ ಮೊದಲಾದ<br>ಸಮಸ್ಯೆಗಳನ್ನು ಪ್ರಧಾನಮಂತ್ರಿ ಇಂದಿರಾ ಗಾಂಧಿಯವರು ತತ್ಕ್ಷಣ ಪರಿಹರಿಸದೇ ಹೋದಲ್ಲಿ ರಾಷ್ಟ್ರದಾದ್ಯಂತ ಬಿಹಾರ ಮಾದರಿ ಚಳವಳಿ ವ್ಯಾಪಿಸುವುದೆಂದು ಸರ್ವೋದಯ ನಾಯಕ ಜಯಪ್ರಕಾಶ ನಾರಾಯಣ್ ಅವರು ಇಂದು ಇಲ್ಲಿ ತಿಳಿಸಿದರು.</p><p>ಸರ್ವೋದಯ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಚಳವಳಿ ರಾಷ್ಟ್ರದಾದ್ಯಂತ ಹಬ್ಬುವುದರಲ್ಲಿ ಸಂದೇಹವೇ ಇಲ್ಲವೆಂದು ನುಡಿದರು.</p><p><strong>ಜೆ.ಪಿ. ಚಳವಳಿ ಹಿಂಸಾಮಾರ್ಗ ಹಿಡಿದರೆ ಉಗ್ರ ಕ್ರಮ; ಗಫೂರ್ ಎಚ್ಚರಿಕೆ</strong></p><p>ಕಲ್ಕತ್ತ, ಅ. 25– ಸರ್ವೋದಯ ನಾಯಕ ಜಯಪ್ರಕಾಶ ನಾರಾಯಣ್ ಅವರು ಹೂಡಿರುವ ಚಳವಳಿ ಹಿಂಸಾರೂಪ ತಾಳಿದರೆ ತಮ್ಮ ಸರ್ಕಾರ ಅದನ್ನು ಹತ್ತಿಕ್ಕಲು ಉಗ್ರ ಕ್ರಮಗಳನ್ನು ಕೈಗೊಳ್ಳುವುದೆಂದು ಬಿಹಾರ ಮುಖ್ಯಮಂತ್ರಿ ಅಬ್ದುಲ್ ಗಫೂರ್ ಅವರು ಇಂದು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.</p><p>ಜಯಪ್ರಕಾಶ ನಾರಾಯಣ್ ಅವರ ಪರ್ಯಾಯ ವಿಧಾನಸಭೆ ಕರೆಯನ್ನು ‘ಇದು ವಿಚಿತ್ರ’ ಎಂದು ವರ್ಣಿಸಿರುವ ಅವರು, ಸರ್ವೋದಯ ಕಾರ್ಯಕರ್ತರು ಈಗಾಗಲೇ ಹಿಂಸಾಕೃತ್ಯಗಳನ್ನು ಆರಂಭಿಸಿದ್ದಾರೆ ಎಂದರು.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಮಸ್ಯೆಗಳು ಇತ್ಯರ್ಥವಾಗದಿದ್ದರೆ ರಾಷ್ಟ್ರದಾದ್ಯಂತ ಚಳವಳಿ: ಜೆ.ಪಿ</strong></p><p>ಜಯಪುರ, ಅ. 25– ಭ್ರಷ್ಟಾಚಾರ, ಬೆಲೆ ಏರಿಕೆ, ನಿರುದ್ಯೋಗ ಮೊದಲಾದ<br>ಸಮಸ್ಯೆಗಳನ್ನು ಪ್ರಧಾನಮಂತ್ರಿ ಇಂದಿರಾ ಗಾಂಧಿಯವರು ತತ್ಕ್ಷಣ ಪರಿಹರಿಸದೇ ಹೋದಲ್ಲಿ ರಾಷ್ಟ್ರದಾದ್ಯಂತ ಬಿಹಾರ ಮಾದರಿ ಚಳವಳಿ ವ್ಯಾಪಿಸುವುದೆಂದು ಸರ್ವೋದಯ ನಾಯಕ ಜಯಪ್ರಕಾಶ ನಾರಾಯಣ್ ಅವರು ಇಂದು ಇಲ್ಲಿ ತಿಳಿಸಿದರು.</p><p>ಸರ್ವೋದಯ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಚಳವಳಿ ರಾಷ್ಟ್ರದಾದ್ಯಂತ ಹಬ್ಬುವುದರಲ್ಲಿ ಸಂದೇಹವೇ ಇಲ್ಲವೆಂದು ನುಡಿದರು.</p><p><strong>ಜೆ.ಪಿ. ಚಳವಳಿ ಹಿಂಸಾಮಾರ್ಗ ಹಿಡಿದರೆ ಉಗ್ರ ಕ್ರಮ; ಗಫೂರ್ ಎಚ್ಚರಿಕೆ</strong></p><p>ಕಲ್ಕತ್ತ, ಅ. 25– ಸರ್ವೋದಯ ನಾಯಕ ಜಯಪ್ರಕಾಶ ನಾರಾಯಣ್ ಅವರು ಹೂಡಿರುವ ಚಳವಳಿ ಹಿಂಸಾರೂಪ ತಾಳಿದರೆ ತಮ್ಮ ಸರ್ಕಾರ ಅದನ್ನು ಹತ್ತಿಕ್ಕಲು ಉಗ್ರ ಕ್ರಮಗಳನ್ನು ಕೈಗೊಳ್ಳುವುದೆಂದು ಬಿಹಾರ ಮುಖ್ಯಮಂತ್ರಿ ಅಬ್ದುಲ್ ಗಫೂರ್ ಅವರು ಇಂದು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.</p><p>ಜಯಪ್ರಕಾಶ ನಾರಾಯಣ್ ಅವರ ಪರ್ಯಾಯ ವಿಧಾನಸಭೆ ಕರೆಯನ್ನು ‘ಇದು ವಿಚಿತ್ರ’ ಎಂದು ವರ್ಣಿಸಿರುವ ಅವರು, ಸರ್ವೋದಯ ಕಾರ್ಯಕರ್ತರು ಈಗಾಗಲೇ ಹಿಂಸಾಕೃತ್ಯಗಳನ್ನು ಆರಂಭಿಸಿದ್ದಾರೆ ಎಂದರು.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>