<h2>ರಾಜ್ಯ ಭೂ ಶಾಸನ ಜಾರಿಗೆ ತೊಡಕು; ಶೀಘ್ರವೇ ತುರ್ತು ಕ್ರಮ</h2>.<p><strong>ಬೆಂಗಳೂರು, ಜೂನ್ 10–</strong> ಕಳೆದ ಎರಡು ವರ್ಷಗಳಿಂದ ಕಾಲವು ಅಡ್ಡಿ, ಆತಂಕಗಳನ್ನು ದಾಟಿ, ಮಾರ್ಚಿ ತಿಂಗಳಿನಿಂದ ಜಾರಿಗೆ ಬಂದಿರುವ ಕರ್ನಾಟಕ ಭೂಸುಧಾರಣ ಶಾಸನವು ಕಾರ್ಯತಃ ಅನುಷ್ಠಾನಕ್ಕೆ ಬರುವ ಮುನ್ನವೇ ಗಂಭೀರ ತೊಡಕಿನಲ್ಲಿ ಮುಗ್ಗರಿಸುವ ಪರಿಸ್ಥಿತಿ ಉದ್ಭವವಾಗಿದೆ.</p>.<p>ಶಾಸನದ ಪ್ರಕಾರ, ಪಂಚಯ್ತಿಗಳು ರಚನೆಯಾಗುವ ಮುನ್ನವೇ, ಗೇಣಿ ಹಕ್ಕು ವಿವಾದಾಸ್ಪದವಾಗಿರುವ ಪ್ರಕರಣಗಳಲ್ಲಿ ನ್ಯಾಯಾಲಯಗಳಿಂದ ಭೂಮಾಲೀಕರು, ಗೇಣಿದಾರರಿಗೆ ಜಮೀನು ಕಾಯಂ ಆಗುವುದಕ್ಕೆ ತಡೆಯಾಜ್ಞೆ ತರುವುದರಲ್ಲಿ ಯಶಸ್ವಿಯಾಗಿದ್ದಾರೆ.</p>.<p>ಶಾಸನವು ಎಲ್ಲ ರೀತಿಗಳಲ್ಲಿಯೂ ಭದ್ರ ಎಂದು ನಂಬಿಕೊಂಡಿದ್ದ, ಅಧಿಕೃತ ವಲಯಗಳಿಗೆ ಈ ಬೆಳವಣಿಗೆ ತೀರಾ ಅನಿರೀಕ್ಷಿತ ಪಟ್ಟಿನಂತೆ ಬಿದ್ದಿದ್ದು ಕಳೆದ ಎರಡು ದಿನಗಳಿಂದ ಅದಕ್ಕೆ ತುತ್ತು ಪರಿಹಾರ ಹುಡುಕುವಲ್ಲಿ ಪರದಾಟ ಆರಂಭವಾಗಿದೆ.</p>.<h2>ನಗರದ ಸಸ್ಯ ಸಂಪತ್ತು ನಶಿಸುತ್ತಿರುವ ಬಗ್ಗೆ ಸುಖಾಡಿಯಾ ವಿಷಾದ</h2>.<p><strong>ಬೆಂಗಳೂರು, ಜೂನ್ 10–</strong> ದಕ್ಷಿಣ ಭಾರತದ ‘ಕಾಶ್ಮೀರ’ ಎಂದೇ ಹೆಸರಾಗಿರುವ ಬೆಂಗಳೂರು ನಗರ ತನ್ನ ಹೆಸರನ್ನು ಕಳೆದುಕೊಳ್ಳುತ್ತಿದೆ ಎಂದು ರಾಜ್ಯದ ರಾಜ್ಯಪಾಲ ಶ್ರೀ ಮೋಹನ್ ಲಾಲ್ ಸುಖಾಡಿಯಾ ಅವರು ಇಂದು ವಿಷಾದ ವ್ಯಕ್ತಪಡಿಸಿದರು.</p>.<p>ಇಲ್ಲಿಂದ ಸುಮಾರು 56 ಮೈಲಿ ದೂರದಲ್ಲಿರುವ ದೊಡ್ಡಸಾಗೇರಿ ಗ್ರಾಮದಲ್ಲಿ (ಕೊರಟಗೆರೆ ತಾಲೂಕು) ಅಹೋಬಲಾ ನರಸಿಂಹಸ್ವಾಮಿ ತೋಟವನ್ನು ಉದ್ಘಾಟಿಸಿದ ರಾಜ್ಯಪಾಲರು ಬೆಂಗಳೂರು ನಗರದಲ್ಲಿ ಸಸ್ಯ ಸಂಪತ್ತು ನಶಿಸಿ ಹೋಗುತ್ತಿದ್ದು, ಇದನ್ನು ತಪ್ಪಿಸಲು ಮುಂಜಾಗ್ರತೆ ಕ್ರಮ ಕೈಗೊಳ್ಳುವುದು ಅಗತ್ಯ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<h2>ರಾಜ್ಯ ಭೂ ಶಾಸನ ಜಾರಿಗೆ ತೊಡಕು; ಶೀಘ್ರವೇ ತುರ್ತು ಕ್ರಮ</h2>.<p><strong>ಬೆಂಗಳೂರು, ಜೂನ್ 10–</strong> ಕಳೆದ ಎರಡು ವರ್ಷಗಳಿಂದ ಕಾಲವು ಅಡ್ಡಿ, ಆತಂಕಗಳನ್ನು ದಾಟಿ, ಮಾರ್ಚಿ ತಿಂಗಳಿನಿಂದ ಜಾರಿಗೆ ಬಂದಿರುವ ಕರ್ನಾಟಕ ಭೂಸುಧಾರಣ ಶಾಸನವು ಕಾರ್ಯತಃ ಅನುಷ್ಠಾನಕ್ಕೆ ಬರುವ ಮುನ್ನವೇ ಗಂಭೀರ ತೊಡಕಿನಲ್ಲಿ ಮುಗ್ಗರಿಸುವ ಪರಿಸ್ಥಿತಿ ಉದ್ಭವವಾಗಿದೆ.</p>.<p>ಶಾಸನದ ಪ್ರಕಾರ, ಪಂಚಯ್ತಿಗಳು ರಚನೆಯಾಗುವ ಮುನ್ನವೇ, ಗೇಣಿ ಹಕ್ಕು ವಿವಾದಾಸ್ಪದವಾಗಿರುವ ಪ್ರಕರಣಗಳಲ್ಲಿ ನ್ಯಾಯಾಲಯಗಳಿಂದ ಭೂಮಾಲೀಕರು, ಗೇಣಿದಾರರಿಗೆ ಜಮೀನು ಕಾಯಂ ಆಗುವುದಕ್ಕೆ ತಡೆಯಾಜ್ಞೆ ತರುವುದರಲ್ಲಿ ಯಶಸ್ವಿಯಾಗಿದ್ದಾರೆ.</p>.<p>ಶಾಸನವು ಎಲ್ಲ ರೀತಿಗಳಲ್ಲಿಯೂ ಭದ್ರ ಎಂದು ನಂಬಿಕೊಂಡಿದ್ದ, ಅಧಿಕೃತ ವಲಯಗಳಿಗೆ ಈ ಬೆಳವಣಿಗೆ ತೀರಾ ಅನಿರೀಕ್ಷಿತ ಪಟ್ಟಿನಂತೆ ಬಿದ್ದಿದ್ದು ಕಳೆದ ಎರಡು ದಿನಗಳಿಂದ ಅದಕ್ಕೆ ತುತ್ತು ಪರಿಹಾರ ಹುಡುಕುವಲ್ಲಿ ಪರದಾಟ ಆರಂಭವಾಗಿದೆ.</p>.<h2>ನಗರದ ಸಸ್ಯ ಸಂಪತ್ತು ನಶಿಸುತ್ತಿರುವ ಬಗ್ಗೆ ಸುಖಾಡಿಯಾ ವಿಷಾದ</h2>.<p><strong>ಬೆಂಗಳೂರು, ಜೂನ್ 10–</strong> ದಕ್ಷಿಣ ಭಾರತದ ‘ಕಾಶ್ಮೀರ’ ಎಂದೇ ಹೆಸರಾಗಿರುವ ಬೆಂಗಳೂರು ನಗರ ತನ್ನ ಹೆಸರನ್ನು ಕಳೆದುಕೊಳ್ಳುತ್ತಿದೆ ಎಂದು ರಾಜ್ಯದ ರಾಜ್ಯಪಾಲ ಶ್ರೀ ಮೋಹನ್ ಲಾಲ್ ಸುಖಾಡಿಯಾ ಅವರು ಇಂದು ವಿಷಾದ ವ್ಯಕ್ತಪಡಿಸಿದರು.</p>.<p>ಇಲ್ಲಿಂದ ಸುಮಾರು 56 ಮೈಲಿ ದೂರದಲ್ಲಿರುವ ದೊಡ್ಡಸಾಗೇರಿ ಗ್ರಾಮದಲ್ಲಿ (ಕೊರಟಗೆರೆ ತಾಲೂಕು) ಅಹೋಬಲಾ ನರಸಿಂಹಸ್ವಾಮಿ ತೋಟವನ್ನು ಉದ್ಘಾಟಿಸಿದ ರಾಜ್ಯಪಾಲರು ಬೆಂಗಳೂರು ನಗರದಲ್ಲಿ ಸಸ್ಯ ಸಂಪತ್ತು ನಶಿಸಿ ಹೋಗುತ್ತಿದ್ದು, ಇದನ್ನು ತಪ್ಪಿಸಲು ಮುಂಜಾಗ್ರತೆ ಕ್ರಮ ಕೈಗೊಳ್ಳುವುದು ಅಗತ್ಯ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>