<p><strong>ಸೊಂಡೂರು, ಜ. 31–</strong> ಬಯಸಿದವರನ್ನೆಲ್ಲಾ ತೃಪ್ತಿಪಡಿಸಬೇಕಾದರೆ ಮುಖ್ಯಮಂತ್ರಿ ದೇವರಾಜ ಅರಸು ಅವರು ಕನಿಷ್ಠ 100 ಮಂದಿ ಸದಸ್ಯರ ಮಂತ್ರಿ ಮಂಡಲವನ್ನಾದರೂ ರಚಿಸಬೇಕಾಗುತ್ತದೆ. </p><p>ಮಂತ್ರಿ ಏಕಾಗಬೇಕು? ಮಂತ್ರಿ ಆಗಲು ಏನೇನು ವಿಷಯಾನುಭವ ಹಾಗೂ ತಿಳಿವಳಿಕೆ ಇರಬೇಕು? ಎಂಬ ಬಗ್ಗೆ ಯಾರ ಗಮನವೂ ಇಲ್ಲ. </p><p>ಮುಖ್ಯಮಂತ್ರಿ ರೀತ್ಯ ‘ನಾನೂ ಮಂತ್ರಿಯಾಗಬೇಕು’ ಎಂಬುದು ಬಹುತೇಕ ಶಾಸಕರಲ್ಲಿರುವ ಆಸೆ. ಸೊಂಡೂರು ಪುರಸಭೆ ನೀಡಿದ ಬಿನ್ನವತ್ತಳೆಗೆ ಉತ್ತರವಾಗಿ <br>ಮುಖ್ಯಮಂತ್ರಿಗಳು ಮಾಡಿದ ಭಾಷಣದಲ್ಲಿ ‘ಸಮಾಜದ ಎಲ್ಲ ರಂಗದಲ್ಲೂ ಅನಾಯಕತ್ವವೇ ಹೆಚ್ಚುತ್ತಿದೆ’ ಎಂಬ ವಿಷಯವನ್ನು ಸಮಗ್ರ ದೃಷ್ಟಿಯಿಂದ ವಿಶ್ಲೇಷಿಸಿದರು. </p><p>ಇತರ ಯಾವ ಉದ್ಯೋಗಕ್ಕೇ ಆಗಲಿ, ಒಂದು ಕನಿಷ್ಠ ಅರ್ಹತೆ ನಿಗದಿಯಾಗಿದ್ದರೂ ರಾಜಕಾರಣಿಗೆ ಯಾವ ಅರ್ಹತೆ ಅಥವಾ ತರಬೇತು ನಿಗದಿ ಆಗದಿರುವುದೇ ಈ ಪರಿಸ್ಥಿತಿಗೆ ಮೂಲ ಕಾರಣ ಎಂದು ಅವರು ಅಭಿಪ್ರಾಯಪಟ್ಟರು. </p><p>ಅನಾಯಕತ್ವ ಹೆಚ್ಚುತ್ತಿದೆ ಎಂಬ ವಿಷಯದ ವಿಶ್ಲೇಷಣೆ ಕಾಲದಲ್ಲಿ ಎಲ್ಲ ಹಂತಗಳಲ್ಲೂ ವಿಚಾರವಂತ ನಾಯಕರು ರೂಪಿತವಾಗಬೇಕೆಂದು ಅವರು ಒತ್ತಿ ಹೇಳಿದರು. </p><p><strong>ಮುಂಬೈನಲ್ಲಿ ಭಾಷಾ ಅಲ್ಪಸಂಖ್ಯಾತರ ಹಿತ ರಕ್ಷಣೆಗೆ ಸರ್ವ ಕ್ರಮ</strong></p><p><strong>ಮುಂಬೈ, ಜ. 31–</strong> ಮಹಾರಾಷ್ಟ್ರದಲ್ಲಿ ಭಾಷಾ ಅಲ್ಪಸಂಖ್ಯಾತರ ಹಿತ ಸಂರಕ್ಷಿಸಲು ತಮ್ಮ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುವುದಕ್ಕೂ ಸಿದ್ಧವಾಗಿದೆ ಎಂದು ಮುಖ್ಯಮಂತ್ರಿ ವಿ.ಪಿ. ನಾಯಕ್ ಅವರು ಆಶ್ವಾಸನೆ ನೀಡಿದರು. </p><p>ಯಾವುದೇ ರಾಜ್ಯಕ್ಕೆ ಸೇರಿದವರಾಗಿರಲಿ, ತಮ್ಮ ರಾಜ್ಯ ಮತ್ತು ಮುಂಬೈ ನಗರದಲ್ಲಿ ತಮ್ಮ ತಮ್ಮ ಉದ್ಯಮ, ವಾಣಿಜ್ಯಗಳಲ್ಲಿ ತೊಡಗಬಹುದೆಂದು ಎ.ಪಿ.ಎಂ.ಸಿ ಸರ್ವ ಸದಸ್ಯರ ಸಭೆ ಉದ್ದೇಶಿಸಿ ಭಾಷಣ ಮಾಡುತ್ತಾ ಅವರು ಸ್ಪಷ್ಟಪಡಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸೊಂಡೂರು, ಜ. 31–</strong> ಬಯಸಿದವರನ್ನೆಲ್ಲಾ ತೃಪ್ತಿಪಡಿಸಬೇಕಾದರೆ ಮುಖ್ಯಮಂತ್ರಿ ದೇವರಾಜ ಅರಸು ಅವರು ಕನಿಷ್ಠ 100 ಮಂದಿ ಸದಸ್ಯರ ಮಂತ್ರಿ ಮಂಡಲವನ್ನಾದರೂ ರಚಿಸಬೇಕಾಗುತ್ತದೆ. </p><p>ಮಂತ್ರಿ ಏಕಾಗಬೇಕು? ಮಂತ್ರಿ ಆಗಲು ಏನೇನು ವಿಷಯಾನುಭವ ಹಾಗೂ ತಿಳಿವಳಿಕೆ ಇರಬೇಕು? ಎಂಬ ಬಗ್ಗೆ ಯಾರ ಗಮನವೂ ಇಲ್ಲ. </p><p>ಮುಖ್ಯಮಂತ್ರಿ ರೀತ್ಯ ‘ನಾನೂ ಮಂತ್ರಿಯಾಗಬೇಕು’ ಎಂಬುದು ಬಹುತೇಕ ಶಾಸಕರಲ್ಲಿರುವ ಆಸೆ. ಸೊಂಡೂರು ಪುರಸಭೆ ನೀಡಿದ ಬಿನ್ನವತ್ತಳೆಗೆ ಉತ್ತರವಾಗಿ <br>ಮುಖ್ಯಮಂತ್ರಿಗಳು ಮಾಡಿದ ಭಾಷಣದಲ್ಲಿ ‘ಸಮಾಜದ ಎಲ್ಲ ರಂಗದಲ್ಲೂ ಅನಾಯಕತ್ವವೇ ಹೆಚ್ಚುತ್ತಿದೆ’ ಎಂಬ ವಿಷಯವನ್ನು ಸಮಗ್ರ ದೃಷ್ಟಿಯಿಂದ ವಿಶ್ಲೇಷಿಸಿದರು. </p><p>ಇತರ ಯಾವ ಉದ್ಯೋಗಕ್ಕೇ ಆಗಲಿ, ಒಂದು ಕನಿಷ್ಠ ಅರ್ಹತೆ ನಿಗದಿಯಾಗಿದ್ದರೂ ರಾಜಕಾರಣಿಗೆ ಯಾವ ಅರ್ಹತೆ ಅಥವಾ ತರಬೇತು ನಿಗದಿ ಆಗದಿರುವುದೇ ಈ ಪರಿಸ್ಥಿತಿಗೆ ಮೂಲ ಕಾರಣ ಎಂದು ಅವರು ಅಭಿಪ್ರಾಯಪಟ್ಟರು. </p><p>ಅನಾಯಕತ್ವ ಹೆಚ್ಚುತ್ತಿದೆ ಎಂಬ ವಿಷಯದ ವಿಶ್ಲೇಷಣೆ ಕಾಲದಲ್ಲಿ ಎಲ್ಲ ಹಂತಗಳಲ್ಲೂ ವಿಚಾರವಂತ ನಾಯಕರು ರೂಪಿತವಾಗಬೇಕೆಂದು ಅವರು ಒತ್ತಿ ಹೇಳಿದರು. </p><p><strong>ಮುಂಬೈನಲ್ಲಿ ಭಾಷಾ ಅಲ್ಪಸಂಖ್ಯಾತರ ಹಿತ ರಕ್ಷಣೆಗೆ ಸರ್ವ ಕ್ರಮ</strong></p><p><strong>ಮುಂಬೈ, ಜ. 31–</strong> ಮಹಾರಾಷ್ಟ್ರದಲ್ಲಿ ಭಾಷಾ ಅಲ್ಪಸಂಖ್ಯಾತರ ಹಿತ ಸಂರಕ್ಷಿಸಲು ತಮ್ಮ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುವುದಕ್ಕೂ ಸಿದ್ಧವಾಗಿದೆ ಎಂದು ಮುಖ್ಯಮಂತ್ರಿ ವಿ.ಪಿ. ನಾಯಕ್ ಅವರು ಆಶ್ವಾಸನೆ ನೀಡಿದರು. </p><p>ಯಾವುದೇ ರಾಜ್ಯಕ್ಕೆ ಸೇರಿದವರಾಗಿರಲಿ, ತಮ್ಮ ರಾಜ್ಯ ಮತ್ತು ಮುಂಬೈ ನಗರದಲ್ಲಿ ತಮ್ಮ ತಮ್ಮ ಉದ್ಯಮ, ವಾಣಿಜ್ಯಗಳಲ್ಲಿ ತೊಡಗಬಹುದೆಂದು ಎ.ಪಿ.ಎಂ.ಸಿ ಸರ್ವ ಸದಸ್ಯರ ಸಭೆ ಉದ್ದೇಶಿಸಿ ಭಾಷಣ ಮಾಡುತ್ತಾ ಅವರು ಸ್ಪಷ್ಟಪಡಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>