ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸೋಂಕು ನಿವಾರಕ: ಪಾರದರ್ಶಕತೆ ಇರಲಿ

ಫಾಲೋ ಮಾಡಿ
Comments

ಕೋವಿಡ್ ನಿಯಂತ್ರಣದ ಉದ್ದೇಶದಿಂದ ವಿಮಾನದ ಮೂಲಕ ಸೋಂಕು ನಿವಾರಕ ಸಿಂಪಡಿಸುವ ಕಾರ್ಯಾಚರಣೆಯನ್ನು ಪ್ರಾಯೋಗಿಕವಾಗಿ ಆರಂಭಿಸಲಾಗಿದೆ (ಪ್ರ.ವಾ., ಮೇ 30). ಇದು ಸಾವಯವ ಸೋಂಕು ನಿವಾರಕ, ಹಾಗಾಗಿ ಇದರಿಂದ ಮನುಷ್ಯರಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗದು ಎಂಬ ಸರ್ಕಾರದ ಹೇಳಿಕೆಯು ನಂಬಿಕೆಯನ್ನು ಆಧರಿಸಿದ್ದೋ ಅಥವಾ ವೈಜ್ಞಾನಿಕವಾಗಿ ಪರೀಕ್ಷೆಗಳಿಂದ ದೃಢಪಟ್ಟಿದೆಯೋ ತಿಳಿಯದು. ಹಾಗೆಯೇ ಈ ಸಾವಯವ ಸೋಂಕು ನಿವಾರಕ ತಯಾರಿಕೆಗೆ ಬಳಸುವ ಕಚ್ಚಾ ವಸ್ತುಗಳ ಬಗ್ಗೆ ಜನರಿಗೆ ಮಾಹಿತಿ ಕೊಡುವುದು ಸೂಕ್ತ.

ರಾಸಾಯನಿಕದ ವಿನಾ ಯಾವುದೇ ಜೀವಾಣುಗಳನ್ನು ನಾಶಪಡಿಸಲು ಸಾಧ್ಯವಿಲ್ಲ ಎಂಬುದು ನನ್ನಂಥ ವಿಜ್ಞಾನ ವಿದ್ಯಾರ್ಥಿಗಳ ಅಭಿಪ್ರಾಯ. ಜೀವಾಣುಗಳನ್ನು ಕೊಲ್ಲುವ ಸಾಮರ್ಥ್ಯ ಇರುವ ಸೋಂಕು ನಿವಾರಕವು ಮನುಷ್ಯನ ಮೇಲೆ ಸಹ ಪರಿಣಾಮ ಬೀರುವ ಸಾಧ್ಯತೆಯನ್ನು ತಳ್ಳಿಹಾಕಬಹುದೇ? ಆದ್ದರಿಂದ ಸಿಂಪಡಣೆ ಕಾರ್ಯವು ಸಂಶೋಧನಾನಿರತ ವಿಜ್ಞಾನಿಗಳ ತಂಡದ ನೇತೃತ್ವದಲ್ಲಿ ನಡೆಯುವುದು ಒಳಿತು.

-ಡಾ. ಜಿ.ಬೈರೇಗೌಡ,ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT