ಜಯನಗರ ಫಸ್ಟ್ ಬ್ಲಾಕ್ ಸಿದ್ದಾಪುರದ ಅಯ್ಯಪ್ಪ ದೇವಸ್ಥಾನದ ಎದುರು ಸುಮಾರು ಒಂದೂವರೆ ತಿಂಗಳಿಂದ ಮೋರಿ ತುಂಬಿ ರಸ್ತೆಯ ಮೇಲೆ ಕೊಚ್ಚೆನೀರು ಹರಿಯುತ್ತಿದೆ. ಇದರ ಬಗ್ಗೆ ಆಡಳಿತಾಧಿಕಾರಿಗಳಿಗೆ ತಿಳಿಸಿದರೆ ಯಾವುದೇ ಪ್ರಯೋಜನವಾಗಲಿಲ್ಲ. ಇದರಿಂದ ಸುತ್ತಮುತ್ತಲಿನ ಜನರು ಸೊಳ್ಳೆಗಳು ಮತ್ತು ವಾಸನೆಯಿಂದ ನರಕಯಾತನೆ ಅನುಭವಿಸುವಂತಾಗಿದೆ. ಚುನಾವಣೆಯ ಸಮಯದಲ್ಲಿ ಮನೆಗಳಿಗೆ ಬಂದು ಮತ ಕೇಳುವ ರಾಜಕೀಯ ನಾಯಕರು ಸಮಸ್ಯೆಗಳ ಪರಿಹಾರದ ಬಗ್ಗೆ ಮಾತನಾಡುವುದೇ ಇಲ್ಲ. ಆದಷ್ಟೂ ತ್ವರಿತವಾಗಿ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ದುರಸ್ತಿಗೊಳಿಸಬೇಕು ಎಂದು ವಿನಂತಿಸಿಕೊಳ್ಳುತ್ತೇನೆ.