<p><strong>ಹುಬ್ಬಳ್ಳಿ</strong>: ಮಳೆ ಕಾರಣ ಮೈದಾನದ ಹೊರಾಂಗಣ ತೇವಗೊಂಡಿದ್ದರಿಂದ ಭಾನುವಾರ ಕರ್ನಲ್ ಸಿ.ಕೆ.ನಾಯ್ಡು ಟ್ರೋಫಿ ಕ್ರಿಕೆಟ್ ಟೂರ್ನಿಯ ಕರ್ನಾಟಕ ಮತ್ತು ತಮಿಳುನಾಡು ನಡುವಣ ಪಂದ್ಯದ ಮೊದಲ ದಿನದಾಟ ನಡೆಯಲಿಲ್ಲ. ಟಾಸ್ ಕೂಡ ಹಾಕಲಿಲ್ಲ.</p>.<p>ಹೀಗಾಗಿ ಇಲ್ಲಿನ ರಾಜನಗರದ ಕೆಎಸ್ಸಿಎ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯವನ್ನು ಕಣ್ತುಂಬಿಕೊಳ್ಳಲು ಬಂದಿದ್ದ ಅಭಿಮಾನಿಗಳು ನಿರಾಶೆಯಿಂದ ಹಿಂದಿರುಗಬೇಕಾಯಿತು. </p>.<p>ಅಂಪೈರ್ಗಳಾದ ಸಂಜಯ್ಕುಮಾರ್ ಸಿಂಗ್, ಸೌರಭ್ ಧೋತೆ ಮತ್ತು ರೆಫರಿ ಸಂಜತ್ ರಾವುಲ್ ಅವರು ಬೆಳಿಗ್ಗೆ 10.30, ಮಧ್ಯಾಹ್ನ 12.40, 2 ಮತ್ತು 3.30ಕ್ಕೆ ಮೈದಾನವನ್ನು ಪರಿಶೀಲಿಸಿದರು. ಕ್ರೀಡಾಂಗಣದ ಸಿಬ್ಬಂದಿ ಸಹ ತೇವವನ್ನು ಒಣಗಿಸಲು ಶ್ರಮಿಸಿದರು. ಆದರೂ ತೇವ ಕಡಿಮೆಯಾಗದ ಕಾರಣ ದಿನದಾಟವನ್ನು ರದ್ದುಗೊಳಿಸಿದರು.</p>.<p>ಭಾನುವಾರ ರಾತ್ರಿಯೂ ಮಳೆ ಸುರಿದರೆ ಎರಡನೇ ದಿನದಾಟಕ್ಕೂ ಅಡ್ಡಿಯಾಗುತ್ತದೆ ಎಂದು ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ</strong>: ಮಳೆ ಕಾರಣ ಮೈದಾನದ ಹೊರಾಂಗಣ ತೇವಗೊಂಡಿದ್ದರಿಂದ ಭಾನುವಾರ ಕರ್ನಲ್ ಸಿ.ಕೆ.ನಾಯ್ಡು ಟ್ರೋಫಿ ಕ್ರಿಕೆಟ್ ಟೂರ್ನಿಯ ಕರ್ನಾಟಕ ಮತ್ತು ತಮಿಳುನಾಡು ನಡುವಣ ಪಂದ್ಯದ ಮೊದಲ ದಿನದಾಟ ನಡೆಯಲಿಲ್ಲ. ಟಾಸ್ ಕೂಡ ಹಾಕಲಿಲ್ಲ.</p>.<p>ಹೀಗಾಗಿ ಇಲ್ಲಿನ ರಾಜನಗರದ ಕೆಎಸ್ಸಿಎ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯವನ್ನು ಕಣ್ತುಂಬಿಕೊಳ್ಳಲು ಬಂದಿದ್ದ ಅಭಿಮಾನಿಗಳು ನಿರಾಶೆಯಿಂದ ಹಿಂದಿರುಗಬೇಕಾಯಿತು. </p>.<p>ಅಂಪೈರ್ಗಳಾದ ಸಂಜಯ್ಕುಮಾರ್ ಸಿಂಗ್, ಸೌರಭ್ ಧೋತೆ ಮತ್ತು ರೆಫರಿ ಸಂಜತ್ ರಾವುಲ್ ಅವರು ಬೆಳಿಗ್ಗೆ 10.30, ಮಧ್ಯಾಹ್ನ 12.40, 2 ಮತ್ತು 3.30ಕ್ಕೆ ಮೈದಾನವನ್ನು ಪರಿಶೀಲಿಸಿದರು. ಕ್ರೀಡಾಂಗಣದ ಸಿಬ್ಬಂದಿ ಸಹ ತೇವವನ್ನು ಒಣಗಿಸಲು ಶ್ರಮಿಸಿದರು. ಆದರೂ ತೇವ ಕಡಿಮೆಯಾಗದ ಕಾರಣ ದಿನದಾಟವನ್ನು ರದ್ದುಗೊಳಿಸಿದರು.</p>.<p>ಭಾನುವಾರ ರಾತ್ರಿಯೂ ಮಳೆ ಸುರಿದರೆ ಎರಡನೇ ದಿನದಾಟಕ್ಕೂ ಅಡ್ಡಿಯಾಗುತ್ತದೆ ಎಂದು ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>